ರಾಯಚೂರು: ನಗರದ ಒಪೆಕ್ನ ಕೋವಿಡ್-19 ವಾರ್ಡ್ನಲ್ಲಿರುವ ಗರ್ಭಿಣಿಗೆ ರಕ್ತ ಸ್ರಾವವಾದರೂ ವೈದ್ಯರು ಬರುತ್ತಿಲ್ಲವೆಂದು ಐಸೋಲೇಷನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರು ದೂರಿದ್ದಾರೆ.
ದೇವದುರ್ಗದಿಂದ ಬಂದಿರುವ ಗರ್ಭಿಣಿ ನಿನ್ನೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ವೈದ್ಯರಿಗೆ ತಿಳಿಸಲಾಗಿದ್ದು, ಆದ್ರೂ ಬಂದಿಲ್ಲ. ಕೇವಲ ಶುಶ್ರೂಷಕರು ಚಿಕಿತ್ಸೆ ನೀಡಿ ಹೋಗುತ್ತಿದ್ದಾರೆ. ಆದರೆ ಇಂದು ಗರ್ಭಿಣಿಗೆ ರಕ್ತ ಸ್ರಾವವಾದರೂ ವೈದ್ಯರು ಸ್ಪಂದಿಸುತ್ತಿಲ್ಲವೆಂದು ಐಸೋಲೇಷನ್ ವಾರ್ಡ್ನಲ್ಲಿರುವವರು ವೈದ್ಯರ ನಿರ್ಲಕ್ಷ್ಯ ಖಂಡಿಸಿ ವಿಡಿಯೋ ಮಾಡಿ ಕಳುಹಿಸಿದ್ದಾರೆ.
ಅಲ್ಲದೇ ವಾರ್ಡ್ಗೆ ಸರಿಯಾಗಿ ಊಟ ಸಹ ನೀಡುತ್ತಿಲ್ಲ. ಇದರ ಬಗ್ಗೆ ಹಲವು ಬಾರಿ ಗಮನಕ್ಕೆ ತಂದರೂ ಸಹ ಸ್ಪಂದನೆ ನೀಡಿಲ್ಲವೆಂದು ದೂರಿ ಮಧ್ಯಾಹ್ನದ ಊಟ ಬಹಿಷ್ಕರಿಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ವಾರ್ಡ್ನಲ್ಲಿರುವವರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಗರ್ಭಿಣಿಗೆ ಚಿಕಿತ್ಸೆಗೆ ನೀಡಲು ಮುಂದಾಗಿದ್ದಾರೆ ಎನ್ನಲಾಗಿದೆ.