ETV Bharat / state

ರಾಯಚೂರು: ಸಂಬಳ ನೀಡಿ ಎಂದು ಗೋಗರೆಯುತ್ತಿರುವ ಪೌರಕಾರ್ಮಿಕರು

ರಾಯಚುರು ನಗರಸಭೆಯಲ್ಲಿ ಕೆಲಸ ಮಾಡುವ ಪೌರಕಾರ್ಮಿಕರು ಹಾಗು ಡ್ರೈವರ್​​ಗಳಿಗೆ ಸಂಬಳ ನೀಡದೇ ಸತಾಯಿಸುತ್ತಿದ್ದು, ಕಾರ್ಮಿಕರ ತಾಳ್ಮೆ ಪರೀಕ್ಷಿಸುತ್ತಿದ್ದಾರೆ ಎಂದು ದಿನಗೂಲಿ ನೌಕರರು ಕಿಡಿಕಾರಿದ್ದಾರೆ.

author img

By

Published : Sep 11, 2019, 10:37 PM IST

Updated : Sep 12, 2019, 10:33 AM IST

ನಗರಸಭೆ ಕಾರ್ಮಿಕರ ದುಸ್ಥಿತಿ ಇದು

ರಾಯಚೂರು: ಸಾಕಷ್ಟು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ನಗರಸಭೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಅದು ದಿನಗೂಲಿ ನೌಕರರಿಗೆ ವೇತನ ಪಾವತಿ ಮಾಡದೇ ಕಾರ್ಮಿಕರ ತಾಳ್ಮೆ ಪರೀಕ್ಷಿಸಲು ಮುಂದಾಗಿ ತೀವ್ರ ಆಕ್ರೋಶಕ್ಕೆ ನಗರಸಭೆ ಗುರಿಯಾಗಿದೆ.

ಶ್ರಮ ವಹಿಸುವ ಪೌರಕಾರ್ಮಿಕರಿಗೆ ಕಳೆದ 4 ತಿಂಗಳಿಂದ ಹಾಗೂ ಸ್ವಚ್ಛತೆ ಕಾರ್ಯದಲ್ಲಿ ಸಹಾಯವಾಗುವ ಡ್ರೈವರ್​​ಗಳಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿ ಮಾಡದ ನಗರಸಭೆ, ಇವರ ಶ್ರಮಕ್ಕೆ ತಕ್ಕ ಬೆಲೆ ನೀಡದೇ ಅಮಾನವೀಯವಾಗಿ ವರ್ತಿಸುತ್ತಿದೆ.

ನಗರಸಭೆ ಕಾರ್ಮಿಕರ ದುಸ್ಥಿತಿ ಇದು
284 ಪೌರ ಕಾರ್ಮಿಕರ ಪ್ರತಿ ತಿಂಗಳು 12 ಸಾವಿರದಂತೆ ಹಾಗೂ 22 ಡ್ರೈವರ್​​ಗಳ ತಲಾ 8 ಸಾವಿರದಂತೆ 8 ತಿಂಗಳ ವೇತನ ಗುತ್ತಿಗೆದಾರರು ಪಾವತಿಸಿದೇ ನಿರ್ಲಕ್ಷ್ಯ ತೋರಿದ್ದು, ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಳ್ತಾರೆ ಕಾರ್ಮಿಕರು.

ವೇತನ ಪಾವತಿಗಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವಾರು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಅಲ್ಲದೇ ನಗರಸಭೆ ಪೌರಾಯುಕ್ತರು ಪೌರ ಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದು ಇದ್ದು ಇಲ್ಲದಂತಾಗಿದೆ ಎಂದು ಕಾರ್ಮಿಕರು ಕಿಡಿಕಾರಿದ್ದಾರೆ.

ರಾಯಚೂರು: ಸಾಕಷ್ಟು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ನಗರಸಭೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ. ಅದು ದಿನಗೂಲಿ ನೌಕರರಿಗೆ ವೇತನ ಪಾವತಿ ಮಾಡದೇ ಕಾರ್ಮಿಕರ ತಾಳ್ಮೆ ಪರೀಕ್ಷಿಸಲು ಮುಂದಾಗಿ ತೀವ್ರ ಆಕ್ರೋಶಕ್ಕೆ ನಗರಸಭೆ ಗುರಿಯಾಗಿದೆ.

ಶ್ರಮ ವಹಿಸುವ ಪೌರಕಾರ್ಮಿಕರಿಗೆ ಕಳೆದ 4 ತಿಂಗಳಿಂದ ಹಾಗೂ ಸ್ವಚ್ಛತೆ ಕಾರ್ಯದಲ್ಲಿ ಸಹಾಯವಾಗುವ ಡ್ರೈವರ್​​ಗಳಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿ ಮಾಡದ ನಗರಸಭೆ, ಇವರ ಶ್ರಮಕ್ಕೆ ತಕ್ಕ ಬೆಲೆ ನೀಡದೇ ಅಮಾನವೀಯವಾಗಿ ವರ್ತಿಸುತ್ತಿದೆ.

ನಗರಸಭೆ ಕಾರ್ಮಿಕರ ದುಸ್ಥಿತಿ ಇದು
284 ಪೌರ ಕಾರ್ಮಿಕರ ಪ್ರತಿ ತಿಂಗಳು 12 ಸಾವಿರದಂತೆ ಹಾಗೂ 22 ಡ್ರೈವರ್​​ಗಳ ತಲಾ 8 ಸಾವಿರದಂತೆ 8 ತಿಂಗಳ ವೇತನ ಗುತ್ತಿಗೆದಾರರು ಪಾವತಿಸಿದೇ ನಿರ್ಲಕ್ಷ್ಯ ತೋರಿದ್ದು, ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಳ್ತಾರೆ ಕಾರ್ಮಿಕರು.

ವೇತನ ಪಾವತಿಗಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವಾರು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಅಲ್ಲದೇ ನಗರಸಭೆ ಪೌರಾಯುಕ್ತರು ಪೌರ ಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದು ಇದ್ದು ಇಲ್ಲದಂತಾಗಿದೆ ಎಂದು ಕಾರ್ಮಿಕರು ಕಿಡಿಕಾರಿದ್ದಾರೆ.

Intro:ಸಾಕಷ್ಟು ಕಾರಣಗಳಿಂದ ಸದಾ ಸುದ್ದಿಯಲ್ಲಿರುವ ನಗರಸಭೆ ಈಗ ಮತ್ತೊಂದು ಕಾರಣಕ್ಕೆ ಸುದ್ದಿಯಾಗಿದೆ,ಅದು ದಿನಗೂಲಿ ನೌಕರರಿಗೆ ವೇತನ ಪಾವತಿ ಮಾಡದೇ ಕಾರ್ಮಿಕರ ತಾಳ್ಮೆ ಪರೀಕ್ಷಿಸಲು ಮುಂದಾಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.


Body:ರಾಯಚೂರು ನಗರಸಭೆಯಲ್ಲಿನ‌ ಆಡಳಿತ ಮಂಡಳಿ ಹಲವಾರು ವಿವಾದಗಳಿಂದಲೇ ತನ್ನ ಕಾರ್ಯನಿರ್ವಹಣೆಯಲ್ಲಿ ತೊಡಗಿದ್ದು ಕಾರ್ಮಿಕ ವಿರೋಧಿ ನೀತಿ ಅನುಸರಿಸುವ ಮೂಲಕ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಕುಡಿಯುವ ನೀರು,ಸ್ವಚ್ಛತೆ, ರಸ್ತೆ ನಿರ್ಮಾಣ ಸೇರಿ ಇತರೆ ಮೂಲಭೂತ ಸೌಕರ್ಯ ಕಲ್ಪಿಸುವ ಜವಾಬ್ದಾರಿ ಹೊಂದಿರುವ ನಗರಸಭೆ ತನ್ನ ಜವಾಬ್ದಾರಿ ನಿರ್ವಹಿಸಬೇಕಾದ್ರೆ ಸಿಬ್ಬಂದಿಗಳೆ ಜೀವಾಳ ಆದ್ರೆ,ಅದ್ರಲ್ಲಿ ಮುಖ್ಯವಾಗಿ ಸ್ವಚ್ಛತೆ ಯ ಜವಾಬ್ದಾರಿ ಹೊತ್ತ ಪೌರ ಕಾರ್ಮಿಕರೇ ನಗರಸಭೆಗೆ ಬೆನ್ನೆಲುಬು,ಬೆಳಿಗ್ಗೆ ನಾಗರಿಕರು ಮಲಿಗಿರುವಾಗ ಮನನೆಗೆ ತೆರಳಿ ಕಸ ಸಂಗ್ರಹಿಸುವುದರಿಂದ ಹಿಡಿದು, ಚರಂಡಿಯಲ್ಲಿ ಇಳಿದು ಕ್ಲಿನ್ ಮಾಡುವ ಕಾಯಕದಲ್ಲಿ ತೊಡಗಿಸಿಕೊಳ್ಳುತ್ತಾರೆ ಇವರ ಕಾರ್ಯ ಎಷ್ಟೆಂದರೆ ತಮ್ಮ ಆರೋಗ್ಯದ ಕಡೆಗೆ ಗಮನಹರಿಸದೇ ಜನರ ಆರೋಗ್ಯ ಕಾಪಾಡಲು ಸ್ವಚ್ಛತೆ ಕಾರ್ಯದಲ್ಲಿ ತೊಡಗಿ ನೈರ್ಮಲ್ಯ,ಸ್ವಚ್ಛ ಪರಿಸರ ನಿರ್ಮಾಣಕ್ಕೆ ಶ್ರಮಿಸುತ್ತಾರೆ. ಆದ್ರೆ ಇಷ್ಟೆಲ್ಲ ಶ್ರಮ ವಹಿಸುವ ಪೌರಕಾರ್ಮಿಕರಿಗೆ ಕಳೆದ 4 ತಿಂಗಳು ಹಾಗೂ ಸ್ವಚ್ಛತೆ ಕಾರ್ಯ ದಲ್ಲಿ ಸಹಾಯವಾಗುವ ಡ್ರೈವರ್ ಗಳಿಗೆ ಕಳೆದ 8 ತಿಂಗಳಿನಿಂದ ವೇತನ ಪಾವತಿ ಮಾಡದ ನಗರಸಭೆ ಇವರ ಶ್ರಮಕ್ಕೆ ತಕ್ಕ ಬೆಲೆ ನೀಡದೇ ಅಮಾನವೀಯ ವಾಗಿ ವರ್ತಿಸುತ್ತಿದೆ. ರಾಯಚೂರು ನಗರಸಭೆಯಲ್ಲಿ ಪ್ರಸ್ತುತ 284 ಪೌರ ಕಾರ್ಮಿಕರಿಗೆ 4 ತಿಂಗಳ ಹಾಗೂ ಚಾಲಕರಿಗೆ ಒಟ್ಟು 8 ತಿಂಗಳ ವೇತನ ಪಾವತಿ ಮಾಡಿಲ್ಲ ನಗರಸಭೆಯ ಕಾರ್ಮಿಕರಿಗೆ ಕೆಲಸ ಮಾಡುವ ಗುತ್ತಿಗೆ ಪಡೆದ ಗುತ್ತಿಗೆದಾರ ಸಿಂತಕಲ್ ನರಸಪ್ಪ ಪೌರಕಾರ್ಮಿಕರಿಗೆ ವೇತನ ನೀಡಿಲ್ಲ ಕಾರ್ಮಿಕರು ಈ ಬಗ್ಗೆ ಕೇಳಿದರೆ ದರ್ಪ ತೋರಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. 284 ಪೌರ ಕಾರ್ಮಿಕರ ಪ್ರತಿ ತಿಂಗಳ 12 ಸಾವಿರದಂತೆ ಹಾಗೂ 22 ಡ್ರೈವರ್ ಗಳ ತಲಾ 8 ಸಾವಿರ ದಂತೆ 8 ತಿಂಗಳ ವೇತನ ಗುತ್ತಿಗೆದಾರ ಪಾವತಿಸಿದೇ ನಿರ್ಲಕ್ಷ್ಯ ವಹಿಸಿದ್ದು ಇದರಿಂದ ಕುಟುಂಬ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂದು ಅಳಲು ತೋಡಿಕೊಳ್ತಾರೆ ಕಾರ್ಮಿಕರು. ವೇತನ ಪಾವತಿಗಾಗಿ ಈ ಹಿಂದಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಲವಾರು ಬಾರಿ ಹೋರಾಟ ಮಾಡಿದ್ರೂ ಪ್ರಯೋಜನವಾಗಿಲ್ಲ ಅಲ್ಲದೇ ನಗರಸಭೆ ಪೌರಾಯುಕ್ತರು ಪೌರ ಕಾರ್ಮಿಕರ ಸಮಸ್ಯೆ ನಿವಾರಿಸುವಲ್ಲಿ ವಿಫಲರಾಗಿದ್ದು ಇದ್ದು ಇಲ್ಲದಂತಾಗಿದೆ ಎಂದು ಆರೋಪಿಸುತ್ತಾರೆ. ಬೈಟ್: ಅನುಕ್ರಮವಾಗಿ 1) ಮುತ್ತಣ್ಣ ಪೌರ ಕಾರ್ಮಿಕ. 2) ಶೇಕ್ ಹಸನ್,ನಗರಸಭೆ ಯಲ್ಲಿ ಸ್ವಚ್ಛತಾ ವಿಭಾಗದಲ್ಲಿ ಚಾಲಕ.


Conclusion:
Last Updated : Sep 12, 2019, 10:33 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.