ETV Bharat / state

ಆಕಸ್ಮಿಕವಾಗಿ ಕಾಲು ಜಾರಿ ತುಂಗಭದ್ರಾ ನದಿಗೆ ಬಿದ್ದ ಯುವಕ: ಶೋಧ ಕಾರ್ಯ

author img

By

Published : Aug 30, 2020, 2:13 PM IST

Updated : Aug 30, 2020, 3:20 PM IST

ತುಂಗಭದ್ರಾ ನದಿಗೆ ನೀರು ಕುಡಿಯಲು ಹೋಗಿದ್ದ ಯುವಕ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದಾನೆ. ಈ ಹಿನ್ನೆಲೆಯಲ್ಲಿ ಎನ್​ಡಿಆರ್​ಎಫ್​ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿವೆ.

ಆಕಸ್ಮಿಕವಾಗಿ ಕಾಲು ಜಾರಿ ತುಂಗಭದ್ರಾ ನದಿಗೆ ಬಿದ್ದ ಯುವಕ
ಆಕಸ್ಮಿಕವಾಗಿ ಕಾಲು ಜಾರಿ ತುಂಗಭದ್ರಾ ನದಿಗೆ ಬಿದ್ದ ಯುವಕ

ರಾಯಚೂರು: ನೀರು ಕುಡಿಯಲು ಹೋದ ಯುವಕ ಆಕಸ್ಮಿಕವಾಗಿ ತುಂಗಭದ್ರಾ ನದಿಗೆ ಬಿದ್ದಿದ್ದು, ಆತನಿಗಾಗಿ ಎನ್​ಡಿಆರ್​ಎಫ್​ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿವೆ.

ಮಾನವಿ ತಾಲೂಕಿನ ಹರನಹಳ್ಳಿ ಗ್ರಾಮದ ಶಾಸ್ತ್ರೀ ಕ್ಯಾಂಪ್ ನಿವಾಸಿ ಸಂದೀಪ್ ಕುಮಾರ (27) ನದಿಗೆ ಬಿದ್ದ ಯುವಕ.

ತುಂಗಭದ್ರಾ ನದಿಗೆ ಬಿದ್ದ ಯುವಕ: ಶೋಧ ಕಾರ್ಯ

ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ತೆರಳಿದ್ದ ಸಂದೀಪ್​ ಮೋಜು ಮಸ್ತಿ ನಡೆಸಿದ್ದಾನೆ. ಬಳಿಕ ನದಿಗೆ ನೀರು ಕುಡಿಯಲೆಂದು ತೆರಳಿದ್ದ ಆತ ನಾಪತ್ತೆಯಾಗಿದ್ದಾನೆ. ಸದ್ಯ ಆತ ಕಾಲು ಜಾರಿ ನೀರಿಗೆ ಬಿದ್ದಿರಬಹುದೆಂದು ಶಂಕಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅಮರೇಶ ಬಿರಾದಾರ, ಕಂದಾಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ರಾಯಚೂರು: ನೀರು ಕುಡಿಯಲು ಹೋದ ಯುವಕ ಆಕಸ್ಮಿಕವಾಗಿ ತುಂಗಭದ್ರಾ ನದಿಗೆ ಬಿದ್ದಿದ್ದು, ಆತನಿಗಾಗಿ ಎನ್​ಡಿಆರ್​ಎಫ್​ ಹಾಗೂ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿವೆ.

ಮಾನವಿ ತಾಲೂಕಿನ ಹರನಹಳ್ಳಿ ಗ್ರಾಮದ ಶಾಸ್ತ್ರೀ ಕ್ಯಾಂಪ್ ನಿವಾಸಿ ಸಂದೀಪ್ ಕುಮಾರ (27) ನದಿಗೆ ಬಿದ್ದ ಯುವಕ.

ತುಂಗಭದ್ರಾ ನದಿಗೆ ಬಿದ್ದ ಯುವಕ: ಶೋಧ ಕಾರ್ಯ

ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಬಳಿ ಸ್ನೇಹಿತರೊಂದಿಗೆ ತೆರಳಿದ್ದ ಸಂದೀಪ್​ ಮೋಜು ಮಸ್ತಿ ನಡೆಸಿದ್ದಾನೆ. ಬಳಿಕ ನದಿಗೆ ನೀರು ಕುಡಿಯಲೆಂದು ತೆರಳಿದ್ದ ಆತ ನಾಪತ್ತೆಯಾಗಿದ್ದಾನೆ. ಸದ್ಯ ಆತ ಕಾಲು ಜಾರಿ ನೀರಿಗೆ ಬಿದ್ದಿರಬಹುದೆಂದು ಶಂಕಿಸಿ ಶೋಧ ಕಾರ್ಯ ನಡೆಸಲಾಗುತ್ತಿದೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಅಮರೇಶ ಬಿರಾದಾರ, ಕಂದಾಯ ಅಧಿಕಾರಿಗಳು, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Last Updated : Aug 30, 2020, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.