ETV Bharat / state

ಹಸಿರು ಬೆಳೆಸಿ, ಪ್ಲಾಸ್ಟಿಕ್ ತೊಲಗಿಸಿ: ಗ್ರೀನ್ ರಾಯಚೂರು ನೇತೃತ್ವದಲ್ಲಿ ಸ್ವಚ್ಚತೆ, ಸಸಿ ನೆಡುವ ಕಾರ್ಯಕ್ರಮ - Cleaning and sapling planting program

ಪ್ರತೀ ವಾರ ಗ್ರೀನ್ ರಾಯಚೂರು ನೇತೃತ್ವದಲ್ಲಿ ನಡೆಯುವ ಸ್ವಚ್ಚತಾ ಹಾಗೂ ಸಸಿ ನೆಡುವ ಕಾರ್ಯವನ್ನು ವಿಭಿನ್ನವಾಗಿ ಆಚರಿಸಲಾಯಿತು.

ಗ್ರೀನ್ ರಾಯಚೂರು
author img

By

Published : Aug 4, 2019, 7:21 PM IST

ರಾಯಚೂರು: ಜಿಲ್ಲಾಡಳಿತ, ನಗರಸಭೆ, ಗ್ರೀನ್ ರಾಯಚೂರು ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಮಾವಿನಕೆರೆಯ ಉದ್ಯಾನವನದಲ್ಲಿ ಸ್ವಚ್ಚತೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ ಬಿ ವೇದಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ಲಾಸ್ಟಿಕ್ ಬ್ಯಾನ್ ಆದ್ರೂ ಸಭೆ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಅದ್ರ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಿದರೂ ಬಳಕೆ ನಿಲ್ಲುತ್ತಿಲ್ಲ.

ಗ್ರೀನ್ ರಾಯಚೂರು

ಪರಿಸರ ಸ್ನೇಹಿ ಪ್ಲೇಟ್,ಗ್ಲಾಸ್ ಹಾಗೂ ಇತರೆ ವಸ್ತುಗಳನ್ನು ಪ್ರದರ್ಶಿಸಿ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದ ವಸ್ತು(Non-biodegradable)ವಾಗಿದ್ದು ಪರಿಸರಕ್ಕೆ ಹಾನಿಕರಕ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯ್ತು. ಬಿಸಿಲೂರು ರಾಯಚೂರನ್ನು ಹವಾಮಾನ ವೈಪರೀತ್ಯ ಹಾಗೂ ಮಳೆಯ ಅಭಾವ ಇನ್ನಿಲ್ಲದಂತೆ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಹಸಿರು ವಾತಾವರಣ ನಿರ್ಮಾಣದ ಜವಾಬ್ದಾರಿ ಇಲ್ಲದಂತಾಗಿದೆ.

ಈ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಸಸಿ ನೆಡುವ ಕಾರ್ಯವನ್ನು ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆ ನಾಗರಿಕರ ಹೊಣೆ ಎಂಬ ಸಂದೇಶ ರವಾನಿಸುವ ಮೂಲಕ ಅನೇಕರ ಮೆಚ್ಚುಗೆಗೆ ಈ ಕಾರ್ಯ ಪಾತ್ರವಾಗಿದೆ. ಇವರ ಕೆಲಸಕ್ಕೆ ಸ್ಥಳೀಯ ಸರ್ಕಾರ ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕಿದೆ.

ರಾಯಚೂರು: ಜಿಲ್ಲಾಡಳಿತ, ನಗರಸಭೆ, ಗ್ರೀನ್ ರಾಯಚೂರು ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಮಾವಿನಕೆರೆಯ ಉದ್ಯಾನವನದಲ್ಲಿ ಸ್ವಚ್ಚತೆ, ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿ ಬಿ ವೇದಮೂರ್ತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ಲಾಸ್ಟಿಕ್ ಬ್ಯಾನ್ ಆದ್ರೂ ಸಭೆ, ಮದುವೆ ಇನ್ನಿತರ ಸಮಾರಂಭಗಳಲ್ಲಿ ಅದ್ರ ಬಳಕೆ ಎಗ್ಗಿಲ್ಲದೆ ನಡೆಯುತ್ತಿದೆ. ಸರ್ಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಿದರೂ ಬಳಕೆ ನಿಲ್ಲುತ್ತಿಲ್ಲ.

ಗ್ರೀನ್ ರಾಯಚೂರು

ಪರಿಸರ ಸ್ನೇಹಿ ಪ್ಲೇಟ್,ಗ್ಲಾಸ್ ಹಾಗೂ ಇತರೆ ವಸ್ತುಗಳನ್ನು ಪ್ರದರ್ಶಿಸಿ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದ ವಸ್ತು(Non-biodegradable)ವಾಗಿದ್ದು ಪರಿಸರಕ್ಕೆ ಹಾನಿಕರಕ ಎಂದು ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯ್ತು. ಬಿಸಿಲೂರು ರಾಯಚೂರನ್ನು ಹವಾಮಾನ ವೈಪರೀತ್ಯ ಹಾಗೂ ಮಳೆಯ ಅಭಾವ ಇನ್ನಿಲ್ಲದಂತೆ ಕಾಡುತ್ತಿದೆ. ಪರಿಸ್ಥಿತಿ ಹೀಗಿರುವಾಗ ಸಸಿಗಳನ್ನು ನೆಟ್ಟು ಅವುಗಳನ್ನು ಪೋಷಿಸಿ ಹಸಿರು ವಾತಾವರಣ ನಿರ್ಮಾಣದ ಜವಾಬ್ದಾರಿ ಇಲ್ಲದಂತಾಗಿದೆ.

ಈ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಸಸಿ ನೆಡುವ ಕಾರ್ಯವನ್ನು ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆ ನಾಗರಿಕರ ಹೊಣೆ ಎಂಬ ಸಂದೇಶ ರವಾನಿಸುವ ಮೂಲಕ ಅನೇಕರ ಮೆಚ್ಚುಗೆಗೆ ಈ ಕಾರ್ಯ ಪಾತ್ರವಾಗಿದೆ. ಇವರ ಕೆಲಸಕ್ಕೆ ಸ್ಥಳೀಯ ಸರ್ಕಾರ ಹಾಗೂ ಸಾರ್ವಜನಿಕರು ಹೆಚ್ಚಿನ ಸಹಕಾರ ನೀಡಬೇಕಿದೆ.

Intro:ಜಿಲ್ಲಾಡಳಿತ, ನಗರಸಭೆ , ಗ್ರೀನ್ ರಾಯಚೂರು ಹಾಗೂ ನಗರದ ವಿವಿಧ ಸಂಘ ಸಂಸ್ಥೆ ಗಳ ಸಂಯುಕ್ತಾಶ್ರಯದಲ್ಲಿ ಇಂದು ನಗರದ
ಮಾವಿನಕೆರೆಯ ಉದ್ಯಾನವನದಲ್ಲಿ ಸ್ವಚ್ಛತಾ,ಸಸಿ ನೆಡುವ ಕಾರ್ಯಕ್ರಮ ಹಾಗೂ ಪ್ಲಾಸ್ಟಿಕ್ ಬಳಕೆಯ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು.
Body:ಜಿಲ್ಲಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಸಿ ಬಿ ವೇದಮೂರ್ತಿ ಅವರು ಚಾಲನೆ ನೀಡಿದರು.
ಪ್ರತಿ ವಾರ ಗ್ರೀನ್ ರಾಯಚೂರು ನೇತೃತ್ವದಲ್ಲಿ ನಡೆಯುವ ಸ್ವಚ್ಚತಾ ಹಾಗೂ ಸಸಿ ನೆಡುವ ಕಾರ್ಯ ಇಂದು ವಿಭಿನ್ನವಾಗಿ ಆಚರಿಸಿದರು.
ಪ್ಲಾಸ್ಟಿಕ್ ಬ್ಯಾನ್ ಆದ್ರೂನು ಎಲ್ಲಾ ಕಡೆ ಪ್ಲಾಸ್ಟಿಕ್ ಬಳಕೆ ಜೊತೆಗೆ ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನಿಂದ ಮಾಡಿದ ಪ್ಲೆಟ್,ಗ್ಲಾಸ್ ಹಾಗೂ ಇತರೆ ವಸ್ತುಗಳ ಬಳಕೆ ಎಗ್ಗಿಲ್ಲೇ ನಡೆಯುತ್ತಿದೆ ಸರಕಾರ ಹಾಗೂ ವಿವಿಧ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸಿದರೂ ಬಳಕೆ ನಿಲ್ಲುತ್ತಿಲ್ಲ ಇದಕ್ಕಾಗಿ ಪ್ಲಾಸ್ಟಿಕೆ ಪರ್ಯಾಯವಾಗಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಸಿ ಎಂದು ಕರೆನೀಡಿದ್ದು ಇಂದಿನ ಕಾರ್ಯಕ್ರಮದ ವಿಶೇಷ.
ಇಂದಿನ ಕಾರ್ಯಕ್ರಮದಲ್ಲಿ ಪರಿಸರ ಸ್ನೇಹಿ ಪ್ಲೆಟ್,ಗ್ಲಾಸ್ ಹಾಗೂ ಇತರೆ ವಸ್ತುಗಳನ್ನು ಪ್ರದರ್ಶನ ಮಾಡಿ ಪ್ಲಾಸ್ಟಿಕ್ ನಾಶ ವಾಗದ ವಸ್ತು ಹಾಗೂ ಪರಿಸರಕ್ಕೆ ಹಾನಿಕರ ಎಂದು ಸಂದೇಶ ನೀಡಿದರು.
ಬಿಸಿಲೂರು ರಾಯಚೂರಿನ ಗಿಡಗಳ ಸಂಖ್ಯೆಯಿಂದ ಹವಾಮಾನ ವೈಪರಿತ್ಯ ಹಾಗೂ ಮಳೆಯ ಅಭಾವ ಒಂದೆಡೆ ಸಸಿ ನೆಟ್ಟು ಅವುಗಳನ್ನು ಪೋಷಿಸಿ ಹಸಿರು ವಾತಾವರಣ ನಿರ್ಮಾಣದ ಜವಾಬ್ದಾರಿ ಇಲ್ಲದಂರಾಗಿದೆ ಈ ನಿಟ್ಟಿನಲ್ಲಿ ಕಳೆದ ಕೆಲ ವರ್ಷಗಳಿಂದ ಸಸಿ ನೆಡುವ ಕಾರ್ಯ ಮಾಡುವ ಜೊತೆಗೆ ಪರಿಸರ ಸಂರಕ್ಷಣೆ ನಾಗರಿಕರ ಹೊಣೆ ಎಂಬ ಸಂದೇಶ ರವಾನಿಸುವ ಮೂಲಕ ಅನೇಕರ ಮುಚ್ಚುಗೆಗೆ ಪಾತ್ರವಾಗಿದೆ ಇವರ ಕೆಲಸಕ್ಕೆ ಸ್ಥಳೀಯ ಸರಕಾರ ಹಾಗು ಸಾರ್ವಜನಿಕರು ಇನ್ನೂ ಹೆಚ್ಚಿನ ಸಹಕಾರ ನೀಡಿದ್ದಲ್ಲಿ ಹಸಿರು ರಾಯಚೂರು ಆಗಲು ಸಂದೇಹವಿಲ್ಲ.


ಬೈಟ್: ಅನುಕ್ರಮವಾಗಿ
1) ಎಸ್.ಪಿ. ಸಿಬಿ ವೇದಮೂರ್ತಿ.ಟೀ ಶರ್ಟ್ ಹಾಕಿಕೊಂಡವರು.

2) ಮಲ್ಲಿಕಾರ್ಜುನ ಗೋಪಿ ಶೆಟ್ಟಿ ನಗರಸಭೆ ಪ್ರಭಾರಿ ಪೌರಾಯುಕ್ತರು. white lining shirt specks ಹಾಕಿಕೋಂಡವರು.

3) ಸರಸ್ವತಿ ಕಿಲಕಿಲೆ, ಗ್ರೀನ್ ರಾಯಚೂರಿನ ಮುಖಂಡರು ಲೇಡಿ ಬೈಟ್.ಶಲ್ವಾರ್. ಪರಿಸರ ಸ್ನೇಹಿ ಪ್ಲೆಟ್ ಪ್ರದರ್ಶನ ಮಾಡಿ ಹೇಳುತ್ತಿರುವವರು.

Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.