ETV Bharat / state

ಇದೇನು ದನದ ಕೊಟ್ಟಿಗೆಯೋ, ಸ.ಕಿ.ಪ್ರಾ. ಶಾಲೆಯೋ?

ಅದು ಸುಮಾರು 24 ವರ್ಷದ ಹಳೆಯ ಸರ್ಕಾರಿ ಶಾಲೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅದ್ರೆ ಸದ್ಯ ಪ್ರಾರ್ಥನೆ ಸಲ್ಲಿಸಲೂ ಸಹ ಸ್ಥಳವಿಲ್ಲದೆ, ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿ ಮನೆಯ ಕೊಠಡಿಯಂತಾಗಿದೆ ಶಾಲೆಯ ಪರಿಸ್ಥಿತಿ.

author img

By

Published : May 18, 2019, 8:02 PM IST

ಜಲಾಲ್ ನಗರದ ಸರ್ಕಾರಿ ಶಾಲೆಯ ಪರಿಸ್ಥಿತಿ

ರಾಯಚೂರು: ಅದು ಸುಮಾರು 24 ವರ್ಷದ ಹಳೆಯ ಸರ್ಕಾರಿ ಶಾಲೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅದ್ರೆ ಸದ್ಯ ಪ್ರಾರ್ಥನೆ ಸಲ್ಲಿಸಲೂ ಸಹ ಸ್ಥಳವಿಲ್ಲದೆ, ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿ ಮನೆಯ ಕೊಠಡಿಯಂತಾಗಿದೆ ಶಾಲೆಯ ಪರಿಸ್ಥಿತಿ.

ಜಲಾಲ್ ನಗರದ ಸುಮಾರು 24 ವರ್ಷದ ಹಿಂದಿನ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಸದ್ಯ ಶಾಲೆ ಅಳಿವಿನಂಚಿಗೆ ತಲುಪಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನೀಡಬೇಕಿದ್ದ ಶಿಕ್ಷಣ ಇಲಾಖೆ, ದನಕ ಕೊಟ್ಟಿಗೆ ಹಾಗೂ ಅಡುಗೆ ಮನೆಯ ಮಧ್ಯೆ ಕಲಿಯುವ ಸ್ಥಿತಿಗೆ ತಂದಿದೆ. ಸದ್ಯ ಶಾಲೆಯಲ್ಲಿ ಒಟ್ಟು 54 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಲಾಲ್ ನಗರದ ಸರ್ಕಾರಿ ಶಾಲೆಯ ಪರಿಸ್ಥಿತಿ

ವಿಪರ್ಯಾಸ ಎಂದ್ರೆ ವಿದ್ಯಾರ್ಥಿಗಳಿಗೆ ಸುಸಜ್ಜಿತ ಪಾಠ ಶಾಲೆ, ಆಟದ ಗ್ರೌಂಡ್ ಮತ್ತು ಕಂಪೌಂಡ್ ಶಿಕ್ಷಣ ಇಲಾಖೆ ನಿರ್ಮಿಸಬೇಕಿತ್ತು. ಅದ್ರೆ ಇದ್ಯಾವುದನ್ನೂ ಮಾಡಿಲ್ಲ. ಶಾಲೆಯ ಪಕ್ಕದಲ್ಲಿ ದನ, ಆಡುಗಳ ಕೊಟ್ಟಿಗೆ, ಶಾಲೆಯ ಮುಂದೆ ರಸ್ತೆ ಇವೆ. ಕನಿಷ್ಠ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಮಾಡಲೂ ಸಹ ಜಾಗವಿಲ್ಲದೆ ಶಾಲೆಯ ಕೊಠಡಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಪರಿಸ್ಥಿತಿ ಒದಗಿಬಂದಿದೆ.

ಶಾಲೆಯ ದುಸ್ಥಿಯ ಬಗ್ಗೆ ಹಲವಾರು ಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆಳಿಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಲೆಯ ಸ್ಥಳದ ದಾಖಲೆ ಪತ್ರಗಳೇ ಇಲ್ಲ ಎನ್ನುವ ಸಂತ್ಯಾಶ ಹೊರಬಿದ್ದಿದೆ. ಮೊದಲು ಪತ್ರಗಳು ಆಗಲಿ ಎಂದು ಅದನ್ನು ಸರಿಪಡಿಸಲು ಮುಂದಾದರೂ ಸ್ಥಳೀಯ ನಿವಾಸಿಗಳು ಸಹಕಾರ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಇದು ಸರ್ಕಾರಿ ಶಾಲೆಯೋ ಅಥವಾ ದನಕ ಕೊಟ್ಟಿಗೆಯೋ ಎನ್ನುವಂತಹ ಪರಿಸ್ಥಿತಿ ಈ ಸ.ಕಿ.ಪ್ರಾ. ಶಾಲೆಯದು.

ರಾಯಚೂರು: ಅದು ಸುಮಾರು 24 ವರ್ಷದ ಹಳೆಯ ಸರ್ಕಾರಿ ಶಾಲೆ. ಅಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಅದ್ರೆ ಸದ್ಯ ಪ್ರಾರ್ಥನೆ ಸಲ್ಲಿಸಲೂ ಸಹ ಸ್ಥಳವಿಲ್ಲದೆ, ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿ ಮನೆಯ ಕೊಠಡಿಯಂತಾಗಿದೆ ಶಾಲೆಯ ಪರಿಸ್ಥಿತಿ.

ಜಲಾಲ್ ನಗರದ ಸುಮಾರು 24 ವರ್ಷದ ಹಿಂದಿನ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಿದ್ದಾರೆ. ಸದ್ಯ ಶಾಲೆ ಅಳಿವಿನಂಚಿಗೆ ತಲುಪಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ನೀಡಬೇಕಿದ್ದ ಶಿಕ್ಷಣ ಇಲಾಖೆ, ದನಕ ಕೊಟ್ಟಿಗೆ ಹಾಗೂ ಅಡುಗೆ ಮನೆಯ ಮಧ್ಯೆ ಕಲಿಯುವ ಸ್ಥಿತಿಗೆ ತಂದಿದೆ. ಸದ್ಯ ಶಾಲೆಯಲ್ಲಿ ಒಟ್ಟು 54 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.

ಜಲಾಲ್ ನಗರದ ಸರ್ಕಾರಿ ಶಾಲೆಯ ಪರಿಸ್ಥಿತಿ

ವಿಪರ್ಯಾಸ ಎಂದ್ರೆ ವಿದ್ಯಾರ್ಥಿಗಳಿಗೆ ಸುಸಜ್ಜಿತ ಪಾಠ ಶಾಲೆ, ಆಟದ ಗ್ರೌಂಡ್ ಮತ್ತು ಕಂಪೌಂಡ್ ಶಿಕ್ಷಣ ಇಲಾಖೆ ನಿರ್ಮಿಸಬೇಕಿತ್ತು. ಅದ್ರೆ ಇದ್ಯಾವುದನ್ನೂ ಮಾಡಿಲ್ಲ. ಶಾಲೆಯ ಪಕ್ಕದಲ್ಲಿ ದನ, ಆಡುಗಳ ಕೊಟ್ಟಿಗೆ, ಶಾಲೆಯ ಮುಂದೆ ರಸ್ತೆ ಇವೆ. ಕನಿಷ್ಠ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಮಾಡಲೂ ಸಹ ಜಾಗವಿಲ್ಲದೆ ಶಾಲೆಯ ಕೊಠಡಿಯಲ್ಲಿ ಪ್ರಾರ್ಥನೆ ಸಲ್ಲಿಸುವ ಪರಿಸ್ಥಿತಿ ಒದಗಿಬಂದಿದೆ.

ಶಾಲೆಯ ದುಸ್ಥಿಯ ಬಗ್ಗೆ ಹಲವಾರು ಭಾರಿ ಕ್ಷೇತ್ರ ಶಿಕ್ಷಣಾಧಿಕಾರಿಗೆಳಿಗೆ ಮನವಿ ಸಲ್ಲಿಸಲಾಗಿದೆ. ಶಿಕ್ಷಣಾಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಶಾಲೆಯ ಸ್ಥಳದ ದಾಖಲೆ ಪತ್ರಗಳೇ ಇಲ್ಲ ಎನ್ನುವ ಸಂತ್ಯಾಶ ಹೊರಬಿದ್ದಿದೆ. ಮೊದಲು ಪತ್ರಗಳು ಆಗಲಿ ಎಂದು ಅದನ್ನು ಸರಿಪಡಿಸಲು ಮುಂದಾದರೂ ಸ್ಥಳೀಯ ನಿವಾಸಿಗಳು ಸಹಕಾರ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ಇದು ಸರ್ಕಾರಿ ಶಾಲೆಯೋ ಅಥವಾ ದನಕ ಕೊಟ್ಟಿಗೆಯೋ ಎನ್ನುವಂತಹ ಪರಿಸ್ಥಿತಿ ಈ ಸ.ಕಿ.ಪ್ರಾ. ಶಾಲೆಯದು.

Intro:ಸ್ಲಗ್: ಜಲಾಲನಗರ ಶಾಲೆಯ ದುಸ್ಥಿತಿ
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ಹಜೊಗದಿನಾಂಕ: 18-೦5-2019
ಸ್ಥಳ: ರಾಯಚೂರು
ಆಂಕರ್: ಅದು ಸುಮಾರು 24 ವರ್ಷದ ಹಳೆಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ. ಕಾಲಕಾಲಕ್ಕೆ ಸರಕಾರ ಹಳೆಯ ಶಾಲೆಗಳನ್ನ ದುರಸ್ಥಿತಿಗೊಳಿಸಿ, ಅಲ್ಲಿ ಓದಲು ಬರುವ ಮಕ್ಕಳಿಗೆ ಉತ್ತಮ ವಾತಾವರಣ ಒದಗಿಸಿಬೇಕು. ಶಾಲೆ ಶೀತಲವ್ಯಸ್ಥೆ ನಿರ್ಮಾಣಗೊಂಡು, ಪ್ರಾರ್ಥನೆ ಸಲ್ಲಿಸಲು ಸಹ ಜಾಗವಿಲ್ಲದೆ, ಸುತ್ತಮುತ್ತಲಿನ ಜಾಗ ಒತ್ತುವರಿಯಾಗಿ ಮನೆಯ ಕೊಠಡಿಯಂತೆ ಶಾಲಾ ವಾತವರಣ ನಿರ್ಮಾಣಗೊಂಡಿದೆ. ಯಾವುದೂ ಅ ಸರಕಾರಿ ಶಾಲೆ ಅಂತಿರಾ? ಹಾಗದ್ರೆ ಈ ರಿಪೋರ್ಟ್ ನೋಡಿ.
Body:ವಾಯ್ಸ್ ಓವರ್.1: ಹೀಗೆ ನೋಡುತ್ತಿರುವ ರಾಯಚೂರು ನಗರದಲ್ಲಿನ ಸರಕಾರ ಕಿರಿಯ ಪ್ರಾಥಮಿಕ ಶಾಲೆ. ಇದು ಜಿಲ್ಲಾಡಳಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಜಲಾಲ್ ನಗರದಲ್ಲಿ ಸುಮಾರು 24 ನಲವತ್ತು ವರ್ಷಗಳಿಂದ ಇದೆ. 24 ವರ್ಷದ ಹಳೆಯಾದದ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡಿದ್ದಾರೆ. ಆದ್ರೆ ಈ ಶಾಲೆಯಲ್ಲಿ ಅಳಿವಿನ ಅಂಚಿಗೆ ತಲುಪ್ಪಿದ್ದು, ಮಕ್ಕಳಿಗೆ ವಿದ್ಯಾಬ್ಯಾಸಕ್ಕೆ ಅನುಕೂಲಕಾರ ವಾತಾವರಣ ಬದಲಿಗೆ, ದನದ ಕೊಟ್ಟಗೆ ಹಾಗೂ ಆಡುಗಳ ಕೊಟ್ಟಿಗೆ ಮಧ್ಯ ಕಲಿಯುವ ಪರಸ್ಥಿತಿ ನಿರ್ಮಾಣಗೊಂಡಿದೆ.
ವಾಯ್ಸ್ ಓವರ್.2: ಇನ್ನು ಈ ಸರಕಾರ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೂ ಇದೆ. ಒಟ್ಟು 54 ಬಡ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದು, ಮೂವರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಜಲಾಲ್ ನಗರ ಸೇರಿದಂತೆ ಸುತ್ತಮುತ್ತಲು ವಾಸಿಸುವ ಮಕ್ಕಳು ಈ ಶಾಲೆಗೆ ಕಲಿಯುವುದಕ್ಕೆ ಬರುತ್ತಿದ್ದಾರೆ. ಬರುವ ವಿದ್ಯಾರ್ಥಿಗಳಿಗೆ ಸುಸಜ್ಜಿತ್ತ ಕೊಠಡಿ, ಆಟ ವಾಡಲು, ಗ್ರೌಡ್, ಕಂಪೌಡ್ ವ್ಯವಸ್ಥೆ ಹಾಗೂ ಶೀತಲವ್ಯಸ್ಥೆಯನ್ನ ದುರಸ್ಥಿಗೊಳಿಸಬೇಕು. ಆದ್ರೆ ಇದ್ಯಾವುದು ಪಾಲನೆಯಾಗಿಲ್ಲ. ಶಾಲೆಯಲ್ಲಿ ಪಕ್ಕದಲ್ಲಿ ದನ, ಆಡುಗಳ ಕೊಟ್ಟಿಗೆ, ಪಕ್ಕದಲ್ಲಯೇ ಮನೆ, ಶಾಲೆಯ ಮುಂದೆ ರಸ್ತೆ, ಕನಿಷ್ಠ ವಿದ್ಯಾರ್ಥಿಗಳಿಗೆ ಪ್ರಾರ್ಥನೆ ಗೀತೆ ಹಾಡುವುದಕ್ಕೂ ಸಹ ಜಾಗವಿಲ್ಲದೇ, ಶಾಲೆಯ ಕೊಠಡಿಯಲ್ಲಿ ಪ್ರಾರ್ಥನೆ ಮಾಡುವ ಪರಸ್ಥಿತಿವಿದೆ.
Conclusion:ವಾಯ್ಸ್ ಓವರ್.3: ಈ ಸರಕಾರ ಶಾಲೆಯಲ್ಲಿ ದುಸ್ಥಿತಿಯ ಬಗ್ಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆಗ ಕ್ಷೇತಾಶಿಕ್ಷಣಾಧಿಕಾರಿ ಶಾಲೆಗೆ ಭೇಟಿ ಪರಿಶೀಲನೆ ನಡೆಸಿದ್ದು, ಶಾಲೆಯ ಬಿಲ್ಡಿಗ್ ಖಾಗದ ಪತ್ರಗಳು ಆಗಲಿ ಎನ್ನುವ ಸಂತ್ಯಾಶ ಹೊರಬಿದ್ದಿದೆ. ಅದನ್ನ ಸರಿಪಡಿಸುವುದಕ್ಕೆ ಮುಂದಾದರು ಅಲ್ಲಿನ ಸ್ಥಳೀಯ ನಿವಾಸಿಗಳು ಸಹಕಾರ ನೀಡುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬಂದಿದೆ. ಹೀಗಾಗಿ ಜಲಾಲ್ ನಗರದ ಶಾಲೆ ಸರಕಾರಿ ಶಾಲೆಯೋ ಅಥವಾ ಧನದ ಕೊಟ್ಟಿಗೇಯಾ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಶಿಕ್ಷಣ ಈ ಶಾಲೆಯಲ್ಲಿ ದುರಸ್ಥಿತಿಗೊಳಿಸಿ ವಿದ್ಯಾರ್ಥಿಗಳಿಗೆ ಕಲಿಕೆ ಪೂರಕವಾದ ವಾತಾವರಣ ಕಲ್ಪಿಸಲು ಮುಂದಾಗಬೇಕಾಗಿದೆ.
ಬೈಟ್.1: ಚಂದ್ರಶೇಖರ್, ಬಿಇಒ, ರಾಯಚೂರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.