ರಾಯಚೂರು : ಕಳೆದ ಅಕ್ಟೋಬರ್ 5ರಂದು ಕಲಬುರ್ಗಿ- ಲಿಂಗಸೂಗೂರು ರಸ್ತೆಯಲ್ಲಿ ಬರುವ ದೇವಾಲಯದ ಹತ್ತಿರ ಕೋಠಾ ಗ್ರಾಮ ಪಿಡಿಒ ಗಜದಂಡಯ್ಯ(51) ಶವ ಪತ್ತೆಯಾಗಿತ್ತು. ಅದು ಕೊಲೆಯಾಗಿದೆ ಎನ್ನುವ ಕುರಿತು ಅನುಮಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಲಿಂಗಸುಗೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ದೂರಿನ ಆಧಾರ ತನಿಖೆ ವೇಳೆ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಬಸವರಾಜ ಶೀಲವಂತರ ಹಾಗೂ ರಾಜಪ್ಪ ಶೀಲವಂತರ ಇಬ್ಬರು ಸೇರಿ ಕೊಲೆ ಮಾಡಿರುವುದು ತಿಳಿದು ಬಂದಿದೆ. ಈ ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ. ಅಕ್ಟೋಬರ್ 5ರಂದು ಇಬ್ಬರು ಮೊಬೈಲ್ ರಿಪೇರಿ ಮಾಡಿಸಿಕೊಳ್ಳಲು ಬಾಪ್ಪುರಿನಿಂದ ಲಿಂಗಸೂಗೂರಿಗೆ ಬಂದಿದ್ದರು.
ರಿಪೇರಿ ಮುಗಿದ ವಾಪಸ್ ಊರಿಗೆ ತೆರಳುವ ವೇಳೆ ಪಿಡಿಒ ಗಜದಂಡಯ್ಯ ಎದುರು ಬಂದಾಗ ಪರಸ್ಪರ ಮಾತುಕತೆ ಜರುಗಿದೆ. ಈ ವೇಳೆ, ಪರಿಸ್ಥಿತಿ ಮಾತು ವಿಕೋಪ ಹೋಗಿ ಇಬ್ಬರು ಗಜದಂಡಯ್ಯನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಹೊಲಕ್ಕೆ ಊಟ ತೆಗೆದುಕೊಂಡು ಹೋಗುತ್ತಿದ್ದಾಗ ಹಾವು ಕಚ್ಚಿ ಬಾಲಕಿ ಸಾವು