ETV Bharat / state

ಸಂವಿಧಾನ ಒಂದು ಪುಸ್ತಕವಲ್ಲ, ಸಾಮಾಜಿಕ ನ್ಯಾಯದ ಪ್ರತೀಕ: ನ್ಯಾಯಾಧೀಶ ಮುಸ್ತಫ ಹುಸೇನ್​

author img

By

Published : Nov 26, 2020, 8:29 PM IST

Updated : Nov 26, 2020, 9:08 PM IST

ನಮ್ಮ ದೇಶದ ಇತಿಹಾಸದಲ್ಲಿ ಸಂವಿಧಾನ ರಚನೆ ಬಹಳ ಮಹತ್ವದ್ದಾಗಿದ್ದು, ಸಂವಿಧಾನದ ಪ್ರತಿಯನ್ನು ಕೇವಲ ಪುಸ್ತಕವನ್ನಾಗಿ ನೋಡದೆ ಅದರ ರಚನೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

judge Mustafa Hussain talk about indian Constitution
ನ್ಯಾಯಾಧೀಶ ಮುಸ್ತಫ ಅಭಿಮತ

ರಾಯಚೂರು: ಸಂವಿಧಾನ ರಚನೆ ಹಿಂದೆ ಅನೇಕ ಮಹನೀಯರ ತ್ಯಾಗವಿದ್ದು, ಅದನ್ನು ಒಂದು ಪುಸ್ತಕ ಎಂದು ಭಾವಿಸದೆ ಸಾಮಾಜಿಕ ನ್ಯಾಯದ ಭದ್ರ ಬುನಾದಿ ಎಂದು ತಿಳಿಯಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧಿಶರಾದ ಎಸ್.ಎ.ಮುಸ್ತಫ ಹುಸೇನ್ ಅಭಿಮತ ವ್ಯಕ್ತಪಡಿಸಿದರು.

ನ್ಯಾಯಾಧೀಶ ಮುಸ್ತಫ ಅಭಿಮತ

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದ ಇತಿಹಾಸದಲ್ಲಿ ಸಂವಿಧಾನ ರಚನೆ ಬಹಳ ಮಹತ್ವದಾಗಿದ್ದು, ಸಂವಿಧಾನದ ಪ್ರತಿಯನ್ನು ಕೇವಲ ಪುಸ್ತಕವನ್ನಾಗಿ ನೋಡದೆ ಅದರ ರಚನೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

judge Mustafa Hussain talk about indian Constitution
ನ್ಯಾಯಾಧೀಶ ಮುಸ್ತಫ ಅಭಿಮತ

ಇಂದು ನಾವು ಸಣ್ಣಪುಟ್ಟ ಕೆಲಸಗಳಿಗೆ ಸಮಯವಿಲ್ಲ ಎನ್ನುತ್ತೇವೆ. ಅಂದಿನ ಸಮಯದಲ್ಲಿ ಸಂವಿಧಾನ ರಚನಾ ಸಮಿತಿ ಸದಸ್ಯರು ಪ್ರತಿಯೊಂದು ವಿಷಯದಲ್ಲಿ ವಿಸ್ತೃತ ಚರ್ಚೆ ನಂತರ ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚಿಸಿದರು.

judge Mustafa Hussain talk about indian Constitution
ನ್ಯಾಯಾಧೀಶ ಮುಸ್ತಫ ಅಭಿಮತ

ಈ ಸಂವಿಧಾನ ದೇಶಕ್ಕೆ ಭದ್ರ ಬುನಾದಿ ಹಾಕಿದ್ದು, ಇತರ ದೇಶಗಳಿಗೆ ನಮ್ಮ ಸಂವಿಧಾನ ಮಾದರಿಯಾಗಿದೆ. ಇದರಲ್ಲಿ ಸಾಮಾಜಿಕ ನ್ಯಾಯ ಅಡಗಿದ್ದು, ಪ್ರಜಾಪ್ರಭುತ್ವ ದೇಶದ ನಾಗರಿಕರಾದ ನಾವು ಸಂವಿಧಾನಬದ್ಧವಾಗಿ ನಡೆದುಕೊಂಡಲ್ಲಿ ಮಾತ್ರ ಅದಕ್ಕೆ ಗೌರವ ಬರುತ್ತದೆ. ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಅವಶ್ಯಕ ಎಂದರು.

ರಾಯಚೂರು: ಸಂವಿಧಾನ ರಚನೆ ಹಿಂದೆ ಅನೇಕ ಮಹನೀಯರ ತ್ಯಾಗವಿದ್ದು, ಅದನ್ನು ಒಂದು ಪುಸ್ತಕ ಎಂದು ಭಾವಿಸದೆ ಸಾಮಾಜಿಕ ನ್ಯಾಯದ ಭದ್ರ ಬುನಾದಿ ಎಂದು ತಿಳಿಯಬೇಕು ಎಂದು ಜಿಲ್ಲಾ ಪ್ರಧಾನ ಸತ್ರ ನ್ಯಾಯಾಧಿಶರಾದ ಎಸ್.ಎ.ಮುಸ್ತಫ ಹುಸೇನ್ ಅಭಿಮತ ವ್ಯಕ್ತಪಡಿಸಿದರು.

ನ್ಯಾಯಾಧೀಶ ಮುಸ್ತಫ ಅಭಿಮತ

ನಗರದ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ದೇಶದ ಇತಿಹಾಸದಲ್ಲಿ ಸಂವಿಧಾನ ರಚನೆ ಬಹಳ ಮಹತ್ವದಾಗಿದ್ದು, ಸಂವಿಧಾನದ ಪ್ರತಿಯನ್ನು ಕೇವಲ ಪುಸ್ತಕವನ್ನಾಗಿ ನೋಡದೆ ಅದರ ರಚನೆಯ ಮಹತ್ವವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

judge Mustafa Hussain talk about indian Constitution
ನ್ಯಾಯಾಧೀಶ ಮುಸ್ತಫ ಅಭಿಮತ

ಇಂದು ನಾವು ಸಣ್ಣಪುಟ್ಟ ಕೆಲಸಗಳಿಗೆ ಸಮಯವಿಲ್ಲ ಎನ್ನುತ್ತೇವೆ. ಅಂದಿನ ಸಮಯದಲ್ಲಿ ಸಂವಿಧಾನ ರಚನಾ ಸಮಿತಿ ಸದಸ್ಯರು ಪ್ರತಿಯೊಂದು ವಿಷಯದಲ್ಲಿ ವಿಸ್ತೃತ ಚರ್ಚೆ ನಂತರ ಡಾ. ಅಂಬೇಡ್ಕರ್ ಅವರ ಅಧ್ಯಕ್ಷತೆಯಲ್ಲಿ ಸಂವಿಧಾನ ರಚಿಸಿದರು.

judge Mustafa Hussain talk about indian Constitution
ನ್ಯಾಯಾಧೀಶ ಮುಸ್ತಫ ಅಭಿಮತ

ಈ ಸಂವಿಧಾನ ದೇಶಕ್ಕೆ ಭದ್ರ ಬುನಾದಿ ಹಾಕಿದ್ದು, ಇತರ ದೇಶಗಳಿಗೆ ನಮ್ಮ ಸಂವಿಧಾನ ಮಾದರಿಯಾಗಿದೆ. ಇದರಲ್ಲಿ ಸಾಮಾಜಿಕ ನ್ಯಾಯ ಅಡಗಿದ್ದು, ಪ್ರಜಾಪ್ರಭುತ್ವ ದೇಶದ ನಾಗರಿಕರಾದ ನಾವು ಸಂವಿಧಾನಬದ್ಧವಾಗಿ ನಡೆದುಕೊಂಡಲ್ಲಿ ಮಾತ್ರ ಅದಕ್ಕೆ ಗೌರವ ಬರುತ್ತದೆ. ಸಂವಿಧಾನ ಕುರಿತು ಜನರಲ್ಲಿ ಜಾಗೃತಿ ಅವಶ್ಯಕ ಎಂದರು.

Last Updated : Nov 26, 2020, 9:08 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.