ETV Bharat / state

ರಾಯಚೂರು ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಮೂರು ಮನೆಗಳು ಕುಸಿತ... ಹೊಲ-ಗದ್ದೆಗಳು ಜಲಾವೃತ

author img

By

Published : Sep 25, 2019, 11:06 AM IST

Updated : Sep 25, 2019, 12:11 PM IST

ರಾಯಚೂರು ಜಿಲ್ಲೆಯಾದ್ಯಂತ ಮಳೆ ತನ್ನ ರೌದ್ರಾವತಾರ ಮುಂದುವರಿಸಿದೆ. ಭಾರಿ ಮಳೆಯಿಂದಾಗಿ ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿವೆ. ಮತ್ತೊಂದೆಡೆ ಜಮೀನುಗಳು ಜಲಾವೃತಗೊಂಡು ಕರೆಯಂತಾಗಿವೆ.

ರಾಯಚೂರು ಜಿಲ್ಲೆಯಾದ್ಯಂತ ಮುಂದುವರೆದ ವರುಣನ ಆರ್ಭಟ

ರಾಯಚೂರು: ಕಳೆದ ರಾತ್ರಿ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿವೆ. ಆದ್ರೆ ಅದೃಷ್ಟವಶಾತ್​ ಅನಾಹುತ ತಪ್ಪಿದೆ. ನಗರದ ಸಿಯಾತಲಾಬ್ ಬಡವಣೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಅಲ್ಲಿನ ನಿವಾಸಿಗಳು ನೀರನ್ನು ಹೊರಹಾಕಲು ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಜೀವ ಭಯದಿಂದ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.

Heavy rain in raichur causes great loss
ಭಾರಿ ಮಳೆಗೆ ಮನೆ ಕುಸಿತ

ನಗರದ ಎನ್​ಜಿಒ ಕಾಲೋನಿಯಲ್ಲಿನ ಶ್ರೀನೀಲಕಂಠೇಶ್ವರ ದೇವಾಲಯದ ಆವರಣದಲ್ಲಿದ್ದ ಅರ್ಚಕ ಶಂಕರಲಿಂಗ ಅವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಗೃಹ ಬಳಕೆಯ ವಸ್ತುಗಳು ಹಾಳಾಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಗರದ ರಂಗಮಂದಿರದ ಬಳಿಯ ಸಾರ್ವಜನಿಕ ಉದ್ಯಾನವನದಲ್ಲೂ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಮೂರು ಮನೆಗಳು ಕುಸಿತ... ಹೊಲ-ಗದ್ದೆಗಳು ಜಲಾವೃತ

ತಾಲೂಕಿನ ರಘುನಾಥನಹಳ್ಳಿ, ಹೋಸಪೇಟೆ-ಜೇಗರಕಲ್ ಗ್ರಾಮಕ್ಕೂ ನೀರು ನುಗ್ಗಿದ್ದು, ಹಳ್ಳಗಳು ಉಕ್ಕಿ ಹರಿಯುತ್ತಿವೆ. ಗ್ರಾಮದ ಹಳ್ಳದಿಂದ, ಪಕ್ಕದ ಜಮೀನಿಗಳಿಗೆ ನೀರು ನುಗ್ಗಿ ರೈತರ ಬೆಳೆಗಳು ನೀರುಪಾಲಾಗಿವೆ. ಜೊತೆಗೆ ಗ್ರಾಮಗಳಿಗೆ ಸಂಚರಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಬೆಳಗ್ಗೆ ಹಳ್ಳಿಗಳಿಂದ ಪಟ್ಟಣಕ್ಕೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಯಿತು.

ರಾಯಚೂರು: ಕಳೆದ ರಾತ್ರಿ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಭಾರಿ ಮಳೆಯಿಂದಾಗಿ ಜಿಲ್ಲೆಯ ರಾಯಚೂರು ತಾಲೂಕಿನಲ್ಲಿ ಮೂರು ಮನೆಗಳು ಕುಸಿದಿವೆ. ಆದ್ರೆ ಅದೃಷ್ಟವಶಾತ್​ ಅನಾಹುತ ತಪ್ಪಿದೆ. ನಗರದ ಸಿಯಾತಲಾಬ್ ಬಡವಣೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ್ದು, ಅಲ್ಲಿನ ನಿವಾಸಿಗಳು ನೀರನ್ನು ಹೊರಹಾಕಲು ಪರದಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಜೀವ ಭಯದಿಂದ ಇಡೀ ರಾತ್ರಿ ಜಾಗರಣೆ ಮಾಡಿದ್ದಾರೆ.

Heavy rain in raichur causes great loss
ಭಾರಿ ಮಳೆಗೆ ಮನೆ ಕುಸಿತ

ನಗರದ ಎನ್​ಜಿಒ ಕಾಲೋನಿಯಲ್ಲಿನ ಶ್ರೀನೀಲಕಂಠೇಶ್ವರ ದೇವಾಲಯದ ಆವರಣದಲ್ಲಿದ್ದ ಅರ್ಚಕ ಶಂಕರಲಿಂಗ ಅವರ ಮನೆಯ ಗೋಡೆ ಕುಸಿದು ಬಿದ್ದಿದ್ದು, ಮನೆಯಲ್ಲಿದ್ದ ಗೃಹ ಬಳಕೆಯ ವಸ್ತುಗಳು ಹಾಳಾಗಿವೆ. ಅದೃಷ್ಟವಶಾತ್​ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ನಗರದ ರಂಗಮಂದಿರದ ಬಳಿಯ ಸಾರ್ವಜನಿಕ ಉದ್ಯಾನವನದಲ್ಲೂ ಭಾರಿ ಪ್ರಮಾಣದ ನೀರು ಸಂಗ್ರಹವಾಗಿದೆ.

ರಾಯಚೂರು ಜಿಲ್ಲೆಯಲ್ಲಿ ವರುಣಾರ್ಭಟಕ್ಕೆ ಮೂರು ಮನೆಗಳು ಕುಸಿತ... ಹೊಲ-ಗದ್ದೆಗಳು ಜಲಾವೃತ

ತಾಲೂಕಿನ ರಘುನಾಥನಹಳ್ಳಿ, ಹೋಸಪೇಟೆ-ಜೇಗರಕಲ್ ಗ್ರಾಮಕ್ಕೂ ನೀರು ನುಗ್ಗಿದ್ದು, ಹಳ್ಳಗಳು ಉಕ್ಕಿ ಹರಿಯುತ್ತಿವೆ. ಗ್ರಾಮದ ಹಳ್ಳದಿಂದ, ಪಕ್ಕದ ಜಮೀನಿಗಳಿಗೆ ನೀರು ನುಗ್ಗಿ ರೈತರ ಬೆಳೆಗಳು ನೀರುಪಾಲಾಗಿವೆ. ಜೊತೆಗೆ ಗ್ರಾಮಗಳಿಗೆ ಸಂಚರಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ಬೆಳಗ್ಗೆ ಹಳ್ಳಿಗಳಿಂದ ಪಟ್ಟಣಕ್ಕೆ ತೆರಳುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವಂತಾಯಿತು.

Intro:¬ಸ್ಲಗ್: ಮಳೆಯ ಅವಾಂತರ
ಫಾರ್ಮೇಟ್: ಎವಿ
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 25-೦9-2019
ಸ್ಥಳ: ರಾಯಚೂರು
ಆಂಕರ್: ರಾಯಚೂರು ಜಿಲ್ಲೆಯಾದ್ಯಂತ ವರುಣ ಅರ್ಭಟ ಮುಂದುವರೆದಿದೆ.
Body: ಕಳೆದ ರಾತ್ರಿ ಸುರಿದ ಬಾರಿ ಮಳೆಯಿಂದ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿದೆ. ರಾಯಚೂರು ತಾಲೂಕಿನ ಮೂರು ಮನೆಗಳು ಕುಸಿತಗೊಂಡಿದ್ದು, ಬಾರಿ ಅನಾಹುತ ತಪ್ಪಿದೆ ಎನ್ನಲಾಗುತ್ತಿದೆ. ನಗರದ ಸಿಯಾತಲಾಬ್ ಬಡವಣೆ ಬಾರಿ ಪ್ರಮಾಣದಲ್ಲಿ ಮಳೆಯ ನೀರು ಹರಿದು ಬಂದು ಮನೆಗಳಿಗೆ ನುಗ್ಗಿ, ನಿವಾಸಿಗಳು ಮಳೆಯ ನೀರಿನ್ನ ಹೊರಗಡೆಯಾಕಲು ಪಾರದಾಡಿ, ಇಡೀ ರಾತ್ರಿ ಬೆಳಗಿನವರೆಗೆ ಜಾಗರಣೆ ಮಾಡಿ ಜೀವ ಭಯದ ಮಧ್ಯ ದಿನಗಳ ಕಳೆದಿದ್ದಾರೆ. ನಗರದ ಎನ್ ಜಿಒ ಕಾಲೋನಿಯಲ್ಲಿನ ಶ್ರೀನಿಲಕಂಠೇಶ್ವರ ದೇವಾಲಯದ ಆವರಣದಲ್ಲಿನ ಆರ್ಚಕ ಶಂಕರಲಿಂಗ ಮನೆಯ ಗೋಡೆ ಕುಸಿದು ಬಿದಿದ್ದು, ಮನೆಯಲ್ಲಿ ಗೃಹ ಬಳಕೆಯ ಸಾಮಾನುಗಳು ನಷ್ಟಹೊಂದಿದ್ದು, ಜೀವ ಹಾನಿ ಸಂಭವಿಸಿಲ್ಲ. ನಗರದ ರಂಗಮಂದಿರ ಬಳಿಯ ಸಾರ್ವಜನಿಕ ಉದ್ಯಾನವನದಲ್ಲಿ ಬಾರಿ ನೀರು ಸಂಗ್ರಹವಾಗಿವೆ. ಇನ್ನೂ ತಾಲೂಕಿನ ರಘುನಾಥನಹಳ್ಳಿ, ಹೋಸಪೇಟೆ-ಜೇಗರಕಲ್ ಗ್ರಾಮದ ಬಾರಿ ಪ್ರಮಾಣ ನೀರು ಹರಿದು ಬರುತ್ತಿದ್ದು, ಹಳ್ಳಗಳು ಉಕ್ಕಿ ಹರಿಯುತ್ತಿವೆ. ರಘನಾಥನಹಳ್ಳಿ ಗ್ರಾಮದ ಹಳ್ಳದಿಂದ, ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ರೈತರ ಬೆಳೆ ನಷ್ಟು ಉಂಟು ಮಾಡಿದೆ ಜತೆಗೆ ಗ್ರಾಮಗಳಿಗೆ ಸಂಚಾರಿಸುವ ರಸ್ತೆ ಸಂಪರ್ಕ ಕಡಿತಗೊಂಡಿವೆ.Conclusion: ಇದರಿಂದ ಬೆಳಿಗ್ಗೆ ಹಳ್ಳಿಗಳಿಂದ ಪಟ್ಟಣಕ್ಕೆ ವಿದ್ಯಾಬ್ಯಾಸ ಬರುವಂತಹ ವಿದ್ಯಾರ್ಥಿಗಳು ಶಾಲೆ-ಕಾಲೇಜು ತೆರಳಿಲ್ಲ.
Last Updated : Sep 25, 2019, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.