ETV Bharat / state

ಬೆನಿಫಿಟ್ ಸ್ಕೀಮ್ ಹೆಸರಿನಲ್ಲಿ ವಂಚಿನೆ: ಆರೋಪಿ ವಿರುದ್ಧ ಪ್ರಕರಣ ದಾಖಲು

ಲಿಂಗಸುಗೂರು ತಾಲ್ಲೂಕನ ಸೈಯದ್ ಸಲಿಂ ಎಮ ಆರೋಪಿ ತನ್ನ ಸ್ನೇಹಿತರಗೆ ಬೆನಿಫಿಟ್ ಸ್ಕೀಮ್ ಯೋಜನೆಯಿದೆ ನಂಬಿಸಿ ಮೋಸ ಮಾಡಿರುವ ಆರೋಪ ಕೇಳಿ ಬಂದಿದ್ದು, ಆತನ ವಿರುದ್ದ ಪ್ರಕರಣ ದಾಖಲಾಗಿದೆ.

author img

By

Published : Nov 8, 2020, 9:34 PM IST

Lingasugur
ಬೆನಿಫಿಟ್ ಸ್ಕೀಮ್ ಹೆಸರಿನಲ್ಲಿ ವಂಚಿನೆ: ಆರೋಪಿ ವಿರುದ್ಧ ಪ್ರಕರಣ ದಾಖಲು

ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ವ್ಯಕ್ತಿಯೋರ್ವ ಬೆನಿಫಿಟ್ ಸ್ಕೀಮ್ ಎಂಬ ಯೋಜನೆಯಿಂದ ಲಾಭ ಇದೆ ಎಂದು ನಂಬಿಸಿ ತನ್ನ ಸ್ನೇಹಿತರನ್ನು ವಂಚಿಸಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2018 ಜುಲೈ 7 ರಂದು ಬೆನಿಫಿಟ್ ಸ್ಕಿಂನಲ್ಲಿ ಪ್ರತಿ ದಿನ ರೂ. 100 ರಂತೆ ಪಾವತಿಸಬೇಕು. ಡ್ರಾದಲ್ಲಿ ಲಕ್ಕಿ ವಿನ್ನರ್​ಗೆ ಮೋಟರ್​ ಬೈಕ್, ಇಲ್ಲವೆ ಸ್ಕಿಂ ಮುಗಿದಾಕ್ಷಣ ಎಲ್ಲ ಸದಸ್ಯರಿಗೆ ರೂ. 60 ಸಾವಿರದ ಬೈಕ್​ ನೀಡುವುದಾಗಿ ಸೈಯದ್ ಸಲಿಂ ಭರವಸೆ ನೀಡಿದ್ದ ಎನ್ನಲಾಗಿದೆ.

ಇನ್ನು ಈ ಬೆನಿಫಿಟ್ ಸ್ಕೀಮ್​ನಲ್ಲಿ ಲಿಂಗಸುಗೂರು ಪಟ್ಟಣದ 65 ಸದಸ್ಯರು ಸೇರಿ 299 ಜನ ಸದಸ್ಯತ್ವ ಪಡೆದಿದ್ದರು. ಲಿಂಗಸುಗೂರಿನ 64 ಜನ ಸದಸ್ಯರು ಡ್ರಾ ಮಾಡದೆ, ಮೋಟರ್​ಬೈಕ್ ಕೊಡುವಂತೆ ಕೇಳಲು ಹೋದವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಜರುಗಿದೆ.

ಇಮ್ರಾನ್​ಖಾನ್ ಎಂಬುವವರು​ ನೀಡಿದ ದೂರಿನ ಮೇಲೆ ಸೈಯದ್​ ಸಲೀಂ, ತಸ್ಲಿಂ, ಆಜಿಂ ಸಮೀರಾಕಬರ, ಯುಸೂಫ್, ನೂರಜಾನಬೇಗಂ, ನಸ್ರೀಂಭಾನು, ಅಮಿರುನ್ನಿಸಾಬೇಗಂ ಎಂಬ ಎಂಟು ಜನರ ವಿರುದ್ಧ ಸದ್ಯ ರೂ.39 ಲಕ್ಷ ರೂ. ವಂಚನೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ವ್ಯಕ್ತಿಯೋರ್ವ ಬೆನಿಫಿಟ್ ಸ್ಕೀಮ್ ಎಂಬ ಯೋಜನೆಯಿಂದ ಲಾಭ ಇದೆ ಎಂದು ನಂಬಿಸಿ ತನ್ನ ಸ್ನೇಹಿತರನ್ನು ವಂಚಿಸಿದ್ದು, ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2018 ಜುಲೈ 7 ರಂದು ಬೆನಿಫಿಟ್ ಸ್ಕಿಂನಲ್ಲಿ ಪ್ರತಿ ದಿನ ರೂ. 100 ರಂತೆ ಪಾವತಿಸಬೇಕು. ಡ್ರಾದಲ್ಲಿ ಲಕ್ಕಿ ವಿನ್ನರ್​ಗೆ ಮೋಟರ್​ ಬೈಕ್, ಇಲ್ಲವೆ ಸ್ಕಿಂ ಮುಗಿದಾಕ್ಷಣ ಎಲ್ಲ ಸದಸ್ಯರಿಗೆ ರೂ. 60 ಸಾವಿರದ ಬೈಕ್​ ನೀಡುವುದಾಗಿ ಸೈಯದ್ ಸಲಿಂ ಭರವಸೆ ನೀಡಿದ್ದ ಎನ್ನಲಾಗಿದೆ.

ಇನ್ನು ಈ ಬೆನಿಫಿಟ್ ಸ್ಕೀಮ್​ನಲ್ಲಿ ಲಿಂಗಸುಗೂರು ಪಟ್ಟಣದ 65 ಸದಸ್ಯರು ಸೇರಿ 299 ಜನ ಸದಸ್ಯತ್ವ ಪಡೆದಿದ್ದರು. ಲಿಂಗಸುಗೂರಿನ 64 ಜನ ಸದಸ್ಯರು ಡ್ರಾ ಮಾಡದೆ, ಮೋಟರ್​ಬೈಕ್ ಕೊಡುವಂತೆ ಕೇಳಲು ಹೋದವರ ಮೇಲೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ ಘಟನೆ ಜರುಗಿದೆ.

ಇಮ್ರಾನ್​ಖಾನ್ ಎಂಬುವವರು​ ನೀಡಿದ ದೂರಿನ ಮೇಲೆ ಸೈಯದ್​ ಸಲೀಂ, ತಸ್ಲಿಂ, ಆಜಿಂ ಸಮೀರಾಕಬರ, ಯುಸೂಫ್, ನೂರಜಾನಬೇಗಂ, ನಸ್ರೀಂಭಾನು, ಅಮಿರುನ್ನಿಸಾಬೇಗಂ ಎಂಬ ಎಂಟು ಜನರ ವಿರುದ್ಧ ಸದ್ಯ ರೂ.39 ಲಕ್ಷ ರೂ. ವಂಚನೆ ಹಾಗೂ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಪ್ರಕಾಶರೆಡ್ಡಿ ಡಂಬಳ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.