ETV Bharat / state

ರಾಯಚೂರು: ನೀರು ಕುಡಿಯಲು ನದಿಗೆ ತೆರಳಿದ ಬಾಲಕ ಮೊಸಳೆ ಬಾಯಿಗೆ ತುತ್ತಾದ!

author img

By

Published : Dec 3, 2020, 9:03 AM IST

ಕೃಷ್ಣ ನದಿಯಲ್ಲಿ ನೀರು ಕುಡಿಯಲು ತೆರಳಿದ ಬಾಲಕ ಮೊಸಳೆಗೆ ಬಲಿಯಾಗಿದ್ದಾನೆ. ದನ ಕಾಯಲು ತೆರಳಿದ್ದಾಗ ಈ ಘಟನ ನಡೆದಿದ್ದು, ಬಾಲಕನ ತಲೆಯ ಭಾಗ ಮಾತ್ರ ಪತ್ತೆಯಾಗಿದೆ.

Crocodile attacks and killed 12 year child in Raichur krishna river
ನೀರು ಕುಡಿಯಲು ನದಿಗೆ ತೆರಳಿದಾಗ ಮೊಸಳೆಗೆ ಬಲಿಯಾದ ಬಾಲಕ

ರಾಯಚೂರು: ನದಿಯಲ್ಲಿ ನೀರು ಕುಡಿಯಲು ತೆರಳಿದ ಬಾಲಕ ಮೊಸಳೆ ಬಾಯಿಗೆ ಆಹಾರವಾಗಿರುವ ದಾರುಣ ಘಟನೆ ರಾಯಚೂರು ತಾಲೂಕಿನ ಡೊಂಗಾರಾಂಪುರದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆ ದಾಳಿಗೆ ಬಲಿಯಾದ ಬಾಲಕ ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆ ಇದ್ದ ಕಾರಣ ಮಲ್ಲಿಕಾರ್ಜುನ ಹಾಗೂ ಆತನ ಸ್ನೇಹಿತರು ದನ ಕಾಯಲು ತೆರಳಿದ್ದಾರೆ. ಈ ವೇಳೆ ಬಾಲಕ ನೀರು ಕುಡಿಯಲು ಕೃಷ್ಣ ನದಿಗೆ ಬದಿದ್ದಾನೆ. ನೀರು ಕುಡಿಯುವ ವೇಳೆ ನದಿಯಲ್ಲಿ ಅಡಗಿದ್ದ ಮೊಸಳೆ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದೆ. ಬಳಿಕ ಆತನನ್ನು ನೀರಿನೊಳಗೆ ಎಳೆದೊಯ್ದಿದೆ. ಘಟನೆ ಬಳಿಕ ಗ್ರಾಮಸ್ಥರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಡಿ.ರಾಂಪುರ ಬಳಿ ಬಾಲಕನ ತಲೆ ಭಾಗ ಮಾತ್ರ ಪತ್ತೆಯಾಗಿದೆ.

ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crocodile attacks and killed 12 year child in Raichur krishna river
ಮೊಸಳೆ ದಾಳಿಗೆ ತುತ್ತಾಗಿ ಮೃತಪಟ್ಟ ಬಾಲಕ ಮಲ್ಲಿಕಾರ್ಜುನ್​

ರಾಯಚೂರು: ನದಿಯಲ್ಲಿ ನೀರು ಕುಡಿಯಲು ತೆರಳಿದ ಬಾಲಕ ಮೊಸಳೆ ಬಾಯಿಗೆ ಆಹಾರವಾಗಿರುವ ದಾರುಣ ಘಟನೆ ರಾಯಚೂರು ತಾಲೂಕಿನ ಡೊಂಗಾರಾಂಪುರದಲ್ಲಿ ನಡೆದಿದೆ. ಮಲ್ಲಿಕಾರ್ಜುನ (12) ಮೊಸಳೆ ದಾಳಿಗೆ ಬಲಿಯಾದ ಬಾಲಕ ಎಂದು ಗುರುತಿಸಲಾಗಿದೆ.

ಶಾಲೆಗೆ ರಜೆ ಇದ್ದ ಕಾರಣ ಮಲ್ಲಿಕಾರ್ಜುನ ಹಾಗೂ ಆತನ ಸ್ನೇಹಿತರು ದನ ಕಾಯಲು ತೆರಳಿದ್ದಾರೆ. ಈ ವೇಳೆ ಬಾಲಕ ನೀರು ಕುಡಿಯಲು ಕೃಷ್ಣ ನದಿಗೆ ಬದಿದ್ದಾನೆ. ನೀರು ಕುಡಿಯುವ ವೇಳೆ ನದಿಯಲ್ಲಿ ಅಡಗಿದ್ದ ಮೊಸಳೆ ಏಕಾಏಕಿ ಬಾಲಕನ ಮೇಲೆ ದಾಳಿ ನಡೆಸಿದೆ. ಬಳಿಕ ಆತನನ್ನು ನೀರಿನೊಳಗೆ ಎಳೆದೊಯ್ದಿದೆ. ಘಟನೆ ಬಳಿಕ ಗ್ರಾಮಸ್ಥರು ಮೃತದೇಹಕ್ಕಾಗಿ ಹುಡುಕಾಟ ನಡೆಸಿದ್ದು, ಇಂದು ಬೆಳಗ್ಗೆ ಡಿ.ರಾಂಪುರ ಬಳಿ ಬಾಲಕನ ತಲೆ ಭಾಗ ಮಾತ್ರ ಪತ್ತೆಯಾಗಿದೆ.

ಘಟನೆ ಸಂಬಂಧ ಯಾಪಲದಿನ್ನಿ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crocodile attacks and killed 12 year child in Raichur krishna river
ಮೊಸಳೆ ದಾಳಿಗೆ ತುತ್ತಾಗಿ ಮೃತಪಟ್ಟ ಬಾಲಕ ಮಲ್ಲಿಕಾರ್ಜುನ್​
ETV Bharat Logo

Copyright © 2024 Ushodaya Enterprises Pvt. Ltd., All Rights Reserved.