ETV Bharat / state

ಮಸ್ಕಿ ಕ್ಷೇತ್ರಕ್ಕೆ ಘೋಷಣೆಯಾಗದ ಉಪಚುನಾವಣೆ: ಏನಂತಾರೆ ಪ್ರತಾಪ್ ಗೌಡ ಪಾಟೀಲ್?

author img

By

Published : Sep 21, 2019, 11:42 PM IST

ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇದರಲ್ಲಿ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಕೈಬಿಟ್ಟಿರುವುದು ಕ್ಷೇತ್ರದಲ್ಲಿ ಹಾಗೂ ಅನರ್ಹ ಶಾಸಕರಲ್ಲಿ ಆತಂಕ ಸೃಷ್ಟಿಸಿದೆ.

ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್

ರಾಯಚೂರು: ರಾಜ್ಯದಲ್ಲಿ 17 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬೇಕಾಗಿತ್ತು. ಆದರೆ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಉಪ ಚುನಾವಣೆ ಮೂಹರ್ತ ಫಿಕ್ಸ್ ಮಾಡಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರ ಮಸ್ಕಿಯನ್ನು ಚುನಾವಣಾ ದಿನಾಂಕ ಘೋಷಣೆ ಮಾಡದಿರುವುದು ಕುತೂಹಲ ಕೆರಳಿಸಿದೆ.

ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ್ ಗೌಡ ಪಾಟೀಲ್, ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರೆ, ಎರಡನೇ ಹಾಗೂ ಮೂರನೇಯ ಬಾರಿಗೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ರು. ಆದ್ರೆ ಮೈತ್ರಿ ಸರ್ಕಾರ ಹಿರಿಯ ಶಾಸಕರನ್ನ ಕಡೆಗಣಿಸಿದೆ ಎಂದು 16 ಶಾಸಕರ ಜೊತೆ ಮಸ್ಕಿ ಶಾಸಕರು ಸೇರಿಕೊಂಡು, ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮಸ್ಕಿ ಕ್ಷೇತ್ರದ ಶಾಸಕ ಸೇರಿದಂತೆ 17 ಜನರನ್ನು ಅನರ್ಹಗೊಳಿಸಿದ್ರು. ಇದನ್ನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇದರಲ್ಲಿ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಕೈಬಿಟ್ಟಿರುವುದು ಕ್ಷೇತ್ರದಲ್ಲಿ ಹಾಗೂ ಅನರ್ಹ ಶಾಸಕರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಸವನಗೌಡ ತುರುವಿಹಾಳ ಹಾಗೂ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ ಪ್ರತಾಪ್ ಗೌಡ ಪಾಟೀಲ್ ನಡುವೆ ತೀವ್ರ ಪೈಪೂಟಿ ನಡೆದಿತ್ತು. ಪೈಪೂಟಿಯ ಮಧ್ಯ ಪ್ರತಾಪ್ ಗೌಡ ಪಾಟೀಲ್ 213 ಅಲ್ಪಮತಗಳಿಂದ ಗೆಲುವಿನ ನಗೆ ಬೀರಿದ್ರು. ಆದ್ರೆ ಅಲ್ಪ ಸೋಲು ಕಂಡಿದ್ದ ಬಸವನಗೌಡ ತುರುವಿಹಾಳ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿ ಮರುಮತದಾನ ನಡೆಸುವಂತೆ ನ್ಯಾಯಲಯದ ಮೋರೆ ಹೋಗಿದ್ದರು. ಹೀಗಾಗಿ ನ್ಯಾಯಲಯದಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಉಪ ಚುನಾವಣೆ ದಿನಾಂಕವನ್ನ ನಿಗದಿ ಮಾಡದೆ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಈಟಿವಿ ಭಾರತ್, ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್​ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮಸ್ಕಿ ಉಪ ಚುನಾವಣೆ ದಿನಾಂಕ ಘೋಷಿಸದೇ ಯಾಕೆ ಕೈ ಬಿಡಲಾಗಿದೆ ಎನ್ನುವುದರ ಕುರಿತು ಮಾಹಿತಿಯಿಲ್ಲ ಎಂದರು. ಅಕ್ರಮ ಮತದಾನ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ದಿನಾಂಕ ಕೈಬಿಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದ್ದರೂ ಇರಬಹುದು, ಆದ್ರೆ ಖಚಿತವಾದ ಮಾಹಿತಿಯಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

ರಾಯಚೂರು: ರಾಜ್ಯದಲ್ಲಿ 17 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಬೇಕಾಗಿತ್ತು. ಆದರೆ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಉಪ ಚುನಾವಣೆ ಮೂಹರ್ತ ಫಿಕ್ಸ್ ಮಾಡಿದ್ದು, ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರ ಮಸ್ಕಿಯನ್ನು ಚುನಾವಣಾ ದಿನಾಂಕ ಘೋಷಣೆ ಮಾಡದಿರುವುದು ಕುತೂಹಲ ಕೆರಳಿಸಿದೆ.

ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ್ ಗೌಡ ಪಾಟೀಲ್, ಮೊದಲ ಬಾರಿಗೆ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ರೆ, ಎರಡನೇ ಹಾಗೂ ಮೂರನೇಯ ಬಾರಿಗೆ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ರು. ಆದ್ರೆ ಮೈತ್ರಿ ಸರ್ಕಾರ ಹಿರಿಯ ಶಾಸಕರನ್ನ ಕಡೆಗಣಿಸಿದೆ ಎಂದು 16 ಶಾಸಕರ ಜೊತೆ ಮಸ್ಕಿ ಶಾಸಕರು ಸೇರಿಕೊಂಡು, ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಪಕ್ಷ ವಿರೋಧಿ ಚಟುವಟಿಕೆ ಆಧಾರದ ಮಸ್ಕಿ ಕ್ಷೇತ್ರದ ಶಾಸಕ ಸೇರಿದಂತೆ 17 ಜನರನ್ನು ಅನರ್ಹಗೊಳಿಸಿದ್ರು. ಇದನ್ನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇದರಲ್ಲಿ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಕೈಬಿಟ್ಟಿರುವುದು ಕ್ಷೇತ್ರದಲ್ಲಿ ಹಾಗೂ ಅನರ್ಹ ಶಾಸಕರಲ್ಲಿ ಆತಂಕ ಸೃಷ್ಟಿಸಿದೆ.

ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಸವನಗೌಡ ತುರುವಿಹಾಳ ಹಾಗೂ ಕಾಂಗ್ರೆಸ್​ನಿಂದ ಸ್ಪರ್ಧೆ ಮಾಡಿದ ಪ್ರತಾಪ್ ಗೌಡ ಪಾಟೀಲ್ ನಡುವೆ ತೀವ್ರ ಪೈಪೂಟಿ ನಡೆದಿತ್ತು. ಪೈಪೂಟಿಯ ಮಧ್ಯ ಪ್ರತಾಪ್ ಗೌಡ ಪಾಟೀಲ್ 213 ಅಲ್ಪಮತಗಳಿಂದ ಗೆಲುವಿನ ನಗೆ ಬೀರಿದ್ರು. ಆದ್ರೆ ಅಲ್ಪ ಸೋಲು ಕಂಡಿದ್ದ ಬಸವನಗೌಡ ತುರುವಿಹಾಳ ಅಕ್ರಮ ಮತದಾನ ನಡೆದಿದೆ ಎಂದು ಆರೋಪಿಸಿ ಮರುಮತದಾನ ನಡೆಸುವಂತೆ ನ್ಯಾಯಲಯದ ಮೋರೆ ಹೋಗಿದ್ದರು. ಹೀಗಾಗಿ ನ್ಯಾಯಲಯದಲ್ಲಿ ಈ ಕುರಿತ ವಿಚಾರಣೆ ನಡೆಯುತ್ತಿರುವ ಹಿನ್ನೆಲೆ ಉಪ ಚುನಾವಣೆ ದಿನಾಂಕವನ್ನ ನಿಗದಿ ಮಾಡದೆ ಕೈಬಿಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಬಗ್ಗೆ ಈಟಿವಿ ಭಾರತ್, ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್​ರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮಸ್ಕಿ ಉಪ ಚುನಾವಣೆ ದಿನಾಂಕ ಘೋಷಿಸದೇ ಯಾಕೆ ಕೈ ಬಿಡಲಾಗಿದೆ ಎನ್ನುವುದರ ಕುರಿತು ಮಾಹಿತಿಯಿಲ್ಲ ಎಂದರು. ಅಕ್ರಮ ಮತದಾನ ಕೋರ್ಟ್ ವಿಚಾರಣೆ ಹಿನ್ನೆಲೆಯಲ್ಲಿ ದಿನಾಂಕ ಕೈಬಿಡಲಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದ್ದರೂ ಇರಬಹುದು, ಆದ್ರೆ ಖಚಿತವಾದ ಮಾಹಿತಿಯಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದರು.

Intro:ಸ್ಲಗ್: ಬೈ ಎಲೆಕ್ಷನ್
ಫಾರ್ಮೇಟ್: ಪ್ಯಾಕೇಜ್
ರಿಪೋರ್ಟ್ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: 21-೦9-2019
ಸ್ಥಳ: ರಾಯಚೂರು
ಆ್ಯಂಕರ್: ರಾಜ್ಯದಲ್ಲಿ 17 ವಿಧಾನಸಭಾ ಕ್ಷೇತ್ರಗಳಲ್ಲಿ ಉಪ-ಚುನಾವಣೆ ಘೋಷಣೆ ನಡೆಯಬೇಕಾಗಿತ್ತು. ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ 15 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಉಪಚುನಾವಣೆ ಮೂಹರ್ತ ಫೀಕ್ಸ್ ಮಾಡಿದ್ದು, ಮಸ್ಕಿ ಕ್ಷೇತ್ರದ ಬೈ ಎಲೆಕ್ಷನ್ ದಿನಾಂಕ ಘೋಷಣೆ ಮಾಡದಿರುವುದು ಬಾರಿ ಕುತೂಹಾಲ ಕೆರಳಿಸಿದೆ. ಈ ಕುರಿತು ಡಿಟೇಲ್ ರಿಪೋರ್ಟ್ ಇಲ್ಲಿದೆ ನೋಡಿ. Body:
ವಾಯ್ಸ್ ಓವರ್.1: ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರ ಅವಧಿಯಲ್ಲಿ 17 ಶಾಸಕರನ್ನ ಅನರ್ಹಗೊಳಿಸಿ ಹಿಂದಿನ ಸ್ಪೀಕರ್ ಆದೇಶ ಹೊರಡಿಸಿದೆ. ಅನರ್ಹಗೊಂಡ 17 ಶಾಸಕರ ಕ್ಷೇತ್ರಗಳಲ್ಲಿ ಉಪ-ಚುನಾವಣೆ ನಡೆಯಬೇಕು. ಆದ್ರೆ ಚುನಾವಣೆ 15 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿ, ಇನ್ನೇರೆಡು ಕ್ಷೇತ್ರಗಳ ಚುನಾವಣೆ ದಿನಾಂಕ ಕೈಬಿಡಲಾಗಿದೆ. ಬೈ ಎಲೆಕ್ಷನ್ ಕ್ಷೇತ್ರದಲ್ಲಿ ರಾಯಚೂರು ಜಿಲ್ಲೆಯ ಪರಿಶಿಷ್ಟ ಪಂಗಡಕ್ಕೆ ಮೀಸಲು ಕ್ಷೇತ್ರ ಮಸ್ಕಿಯನ್ನ ಕೈಬಿಟ್ಟಿರುವುದು ಬಾರಿ ಕುತೂಹಾಲ ಮೂಡಿಸಿದ್ರು, ಅನರ್ಹ ಶಾಸಕರಿಗೆ ಬಾರಿ ಟೆನಕ್ಷನ್ ನೀಡಿದೆ.
ವಾಯ್ಸ್ ಓವರ್.2: ಇನ್ನೂ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದ ಪ್ರತಾಪ್ ಗೌಡ ಪಾಟೀಲ್, ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿದ್ರೆ, ಎರಡನೇ ಹಾಗೂ ಮೂರನೇಯ ಬಾರಿಗೆ ಕಾಂಗ್ರೆಸ್ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದ್ರು. ಆದ್ರೆ ಮೈತ್ರಿ ಸರಕಾರ ಹಿರಿಯ ಶಾಸಕರನ್ನ ಕಡೆಗಣಿಸಿದೆ ಎಂದು ಪಕ್ಷದ ಮೇಲೆ 16 ಶಾಸಕರಲ್ಲಿ ಮಸ್ಕಿ ಶಾಸಕರು ಸೇರಿಕೊಂಡು, ಅತೃಪ್ತ ಶಾಸಕರ ಗುಂಪಿನಲ್ಲಿ ಗುರುತಿಸಿಕೊಂಡಿದ್ರು. ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಪಕ್ಷದ ವಿರೋಧಿ ಚಟುವಟಿಕೆ ಆಧಾರದ ಮಸ್ಕಿ ಕ್ಷೇತ್ರದ ಶಾಸಕ ಸೇರಿದಂತೆ 17 ಜನರನ್ನು ಅನರ್ಹಗೊಳಿಸಿದ್ರು. ಇದನ್ನ ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಕೋರ್ಟ್ ಮೆಟ್ಟಿಲು ಏರಿದ್ರು. ಇದರ ಮಧ್ಯ ಚುನಾವಣೆ ಆಯೋಗ 17 ಕ್ಷೇತ್ರಗಳ ಪೈಕಿ, 15 ಕ್ಷೇತ್ರಗಳಿಗೆ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಇದರಲ್ಲಿ ಮಸ್ಕಿ ಕ್ಷೇತ್ರದ ಉಪ-ಚುನಾವಣೆ ಕೈಬಿಟ್ಟಿರುವುದು ಬಾರಿ ಕುತೂಹಾಲ ಮೂಡಿಸಿದ್ದು, ಕ್ಷೇತ್ರದಲ್ಲಿ ಹಾಗೂ ಅನರ್ಹ ಶಾಸಕರ ಬಾರಿ ಟೆನೆಕ್ಷನ್ ನೀಡಿದೆ.
Conclusion:ವಾಯ್ಸ್ ಓವರ್.3: ಇನ್ನೂ ಕಳೆದ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಸವನಗೌಡ ತುರುವಿಹಾಳ ಹಾಗೂ ಕಾಂಗ್ರೆಸ್ ನಿಂದ ಸ್ಪರ್ಧೆ ಮಾಡಿದ ಪ್ರತಾಪ್ ಗೌಡ ಪಾಟೀಲ್ ತೀವ್ರ ಪೈಪೂಟಿ ನಡೆದಿತ್ತು. ಪೈಪೂಟಿಯ ಮಧ್ಯ ಪ್ರತಾಪ್ ಗೌಡ ಪಾಟೀಲ್ 213 ಅಲ್ಪಮತಗಳಿಂದ ಗೆಲುವಿನ ನಗೆ ಬೀರಿದ್ರು. ಆದ್ರೆ ಅಲ್ಪ ಸೋಲು ಕಂಡಿದ್ದ ಬಸವನಗೌಡ ತುರುವಿಹಾಳ ಅಕ್ರಮ ಮತದಾನ ನಡೆದಿದ್ದು, ಮರುಮತದಾನ ನಡೆಸುವಂತೆ ನ್ಯಾಯಲಯದ ಮೋರೆ ಹೋಗಿದ್ರು. ಹೀಗಾಗಿ ನ್ಯಾಯಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಿನ್ನಲೆಯಿಂದಾಗಿ ಉಪಚುನಾವಣೆ ದಿನಾಂಕವನ್ನ ನಿಗದಿ ಮಾಡದೆ ಕೈಬೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಈಟಿವಿ ಭಾರತ್ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮಸ್ಕಿ ಉಪಚುನಾವಣೆ ದಿನಾಂಕ ಯಾವುದೇ ಕೈ ಬೀಡಲಾಗಿದೆ ಎನ್ನುವುದರ ಕುರಿತು ಮಾಹಿತಿಯಿಲ್ಲ. ಅಕ್ರಮ ಮತದಾನ ಕೋರ್ಟ್ ವಿಚಾರಣೆ ಹಿನ್ನಲೆಯಲ್ಲಿ ದಿನಾಂಕ ಕೈಬಿಡಲಾಗಿದೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದರೆ ಇರಬಹುದು, ಆದ್ರೆ ಖಚಿತವಾದ ಮಾಹಿತಿಯಿಲ್ಲ. ಈ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದು ಹೇಳಿದ್ರು. ಒಟ್ನಿಲ್ಲಿ, ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಬೈ ಎಲೆಕ್ಷನ್ ಮೂಹರ್ತ ಫೀಕ್ಸ್ ಆಗಿದ್ದಾರೆ, ಮಸ್ಕಿ ಕ್ಷೇತ್ರವನ್ನ ಕೈಬಿಟ್ಟಿರುವುದು ಬಾರಿ ಕುತೂಹಾಲ ಮೂಡಿಸಿ, ಅನರ್ಹ ಶಾಸಕರಿಗೆ ದೊಡ್ಡ ತಲೆನೋವು ಆಗಿ ಪರಿಣಾಮಿಸಿ ಎಂದರೆ ತಪ್ಪು ಆಗಲಿಕ್ಕಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.