ETV Bharat / state

ಪ್ರತಾಪಗೌಡ ಪಾಟೀಲ್​ಗೆ ಬಿಗ್ ರಿಲೀಫ್​​: ಉಪ ಚುನಾವಣೆಗೆ ಮಸ್ಕಿ ಕ್ಷೇತ್ರ ರೆಡಿ

author img

By

Published : Dec 12, 2019, 12:19 PM IST

ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಹಿಂಪಡೆದಿದ್ದಾರೆ.‌ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಆರೋಪ ಇರುವ ಕಾರಣ ಕಳೆದ ವಾರ ಉಪ ಚುನಾವಣೆ ನಡೆದಿರಲಿಲ್ಲ‌. ಸದ್ಯ ರಾಜ್ಯ ಬಿಜೆಪಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ಮಸ್ಕಿ ಉಪ ಚುನಾವಣೆಗೆ ರೆಡಿಯಾಗಿದೆ.

raichur
ಉಪಚುನಾವಣೆಗೆ ಮಸ್ಕಿ ಕ್ಷೇತ್ರ ರೆಡಿ

ರಾಯಚೂರು: ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್​​​ಗೆ ಹೈಕೋರ್ಟ್ ಸದ್ಯ ರಿಲೀಫ್ ನೀಡಿದೆ. ಯಾಕಂದ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಬೋಗಸ್ ಮತದಾನ ಮಾಡಿದ್ದಾರೆಂದು ಆರೋಪಿಸಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಸನಗೌಡ ತುರ್ವಿಹಾಳ ದೂರು ದಾಖಲಿಸಿದ್ದರು. ಹೀಗಾಗಿ ಮಸ್ಕಿ ಕ್ಷೆತ್ರದಲ್ಲಿ ಉಪ ಚುನಾವಣೆಗೆ ನ್ಯಾಯಾಲಯ ತಡೆ ನೀಡಿತ್ತು.

ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಹಿಂಪಡೆದಿದ್ದಾರೆ.‌ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಆರೋಪ ಇರುವ ಕಾರಣ ಕಳೆದ ವಾರ ಉಪ ಚುನಾವಣೆ ನಡೆದಿರಲಿಲ್ಲ‌. ಸದ್ಯ ರಾಜ್ಯ ಬಿಜೆಪಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ಮಸ್ಕಿ ಉಪ ಚುನಾವಣೆಗೆ ರೆಡಿಯಾಗಿದೆ.

ಬಸವನಗೌಡ ತುರುವಿಹಾಳ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ವಿರುದ್ಧ 213 ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಕೆಲ ದಿನಗಳ ನಂತರ ಪ್ರತಾಪ್‌ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಪಕ್ಷ ವಿರೋಧಿ ಚಟುವಟಿಕೆ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ, ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು. ಆದ್ರೆ ಬೋಗಸ್​​ ಮತದಾನ ನಡೆದಿರುವ ಆರೋಪ ಕುರಿತು ಹೈಕೋರ್ಟ್ ದಾವೆ ಹಿನ್ನೆಲೆಯಿಂದಾಗಿ ಉಪ ಚುನಾವಣೆ ಘೋಷಣೆಯಾಗಿರಲಿಲ್ಲ.

ರಾಯಚೂರು: ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್​​​ಗೆ ಹೈಕೋರ್ಟ್ ಸದ್ಯ ರಿಲೀಫ್ ನೀಡಿದೆ. ಯಾಕಂದ್ರೆ 2018ರ ವಿಧಾನಸಭಾ ಚುನಾವಣೆಯಲ್ಲಿ ಮಸ್ಕಿ ಕ್ಷೇತ್ರದಲ್ಲಿ ಬೋಗಸ್ ಮತದಾನ ಮಾಡಿದ್ದಾರೆಂದು ಆರೋಪಿಸಿ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಬಸನಗೌಡ ತುರ್ವಿಹಾಳ ದೂರು ದಾಖಲಿಸಿದ್ದರು. ಹೀಗಾಗಿ ಮಸ್ಕಿ ಕ್ಷೆತ್ರದಲ್ಲಿ ಉಪ ಚುನಾವಣೆಗೆ ನ್ಯಾಯಾಲಯ ತಡೆ ನೀಡಿತ್ತು.

ಮಸ್ಕಿಯ ಅನರ್ಹ ಶಾಸಕ ಪ್ರತಾಪಗೌಡರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಬಸನಗೌಡ ತುರ್ವಿಹಾಳ ಹಿಂಪಡೆದಿದ್ದಾರೆ.‌ ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ವಿರುದ್ಧ ಆರೋಪ ಇರುವ ಕಾರಣ ಕಳೆದ ವಾರ ಉಪ ಚುನಾವಣೆ ನಡೆದಿರಲಿಲ್ಲ‌. ಸದ್ಯ ರಾಜ್ಯ ಬಿಜೆಪಿ ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ಪ್ರಕರಣ ಹಿಂಪಡೆದಿದ್ದಾರೆ ಎನ್ನಲಾಗಿದೆ. ಹೀಗಾಗಿ ಮತ್ತೆ ಮಸ್ಕಿ ಉಪ ಚುನಾವಣೆಗೆ ರೆಡಿಯಾಗಿದೆ.

ಬಸವನಗೌಡ ತುರುವಿಹಾಳ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ವಿರುದ್ಧ 213 ಮತಗಳ ಅಂತರದಿಂದ ಪರಾಜಿತಗೊಂಡಿದ್ದರು. ಕೆಲ ದಿನಗಳ ನಂತರ ಪ್ರತಾಪ್‌ಗೌಡ ಪಾಟೀಲ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆಗ ಪಕ್ಷ ವಿರೋಧಿ ಚಟುವಟಿಕೆ ಎಂದು ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ದರು. ಬಳಿಕ ಅನರ್ಹತೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ, ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ನೀಡಿತ್ತು. ಆದ್ರೆ ಬೋಗಸ್​​ ಮತದಾನ ನಡೆದಿರುವ ಆರೋಪ ಕುರಿತು ಹೈಕೋರ್ಟ್ ದಾವೆ ಹಿನ್ನೆಲೆಯಿಂದಾಗಿ ಉಪ ಚುನಾವಣೆ ಘೋಷಣೆಯಾಗಿರಲಿಲ್ಲ.

Intro:ಸ್ಲಗ್: ಹೈಕಮಾಂಡ್ ಒತ್ತಡಕ್ಕೆ ಮಣಿದ ಬಸವನಗೌಡ
ಫಾರ್ಮೇಟ್: ಎವಿ
ರಿಪೋರ್ಟ್‌ರ್: ಮಲ್ಲಿಕಾರ್ಜುನ ಸ್ವಾಮಿ
ದಿನಾಂಕ: ೧೨-೧೨-೨೦೧೯
ಸ್ಥಳ: ರಾಯಚೂರು

ಆಂಕರ್: ಅಕ್ರಮ ಮತದಾನ ವಿಚಾರಕ್ಕೆ ಹೈಕೋರ್ಟ್ ಧಾವೆ ಹಾಕಿದ ಅರ್ಜಿಯನ್ನ ಬಸವನಗೌಡ ತುರುವಿಹಾಳ ವಾಪಾಸ್ ಪಡೆದುಕೊಂಡಿದ್ದಾರೆ. ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅಕ್ರಮ‌ ಮತದಾನದಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ ಬಸವನಗೌಡ ೨೧೩ ಮತಗಳಿಂದ ಪರಾಜಿತಗೊಂಡಿದ್ರು. ಆಗ ಚುನಾವಣೆಯಲ್ಲಿ ಸಮಯದಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಹೈಕೋರ್ಟ್ ಮೋರೆ ಹೋಗಿ ಅರ್ಜಿ ಹಾಕುವ ಮೂಲಕ ಕಾನೂನು‌ ಹೋರಾಟ ಮಾಡುತ್ತಿದ್ದರು. ಆದ್ರೆ‌ ನಿನ್ನೆ ಕಾನೂನು ಹೋರಾಟ‌ದಿಂದ ಹಿಂದೆ ಸರಿಯುವ ಮೂಲಕ ಹೈಕೋರ್ಟ್ ನಲ್ಲಿ ಹಾಕಿದ ಧಾವೆಯನ್ನ ವಾಪಾಸ್ ಪಡೆದಿದ್ದಾರೆ.

Body:ಮಸ್ಕಿ ಉಪಚುನಾವಣೆ ಹಾದಿ‌ ಸುಗಮ: ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಪ್ರತಾಪ್‌ಗೌಡ ಪಾಟೀಲ್ ಹಾಗೂ ಬಿಜೆಪಿಯಿಂದ ಬಸವನಗೌಡ ತುರುವಿಹಾಳ ಸ್ಪರ್ಧೆ ಮಾಡಿದ್ರು. ಬಸವನಗೌಡ ತುರುವಿಹಾಳ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್‌ಗೌಡ ಪಾಟೀಲ್ ವಿರುದ್ದ ೨೧೩ ಮತಗಳ ಅಂತರದಿಂದ ಪರಾಜಿತಗೊಂಡಿದ್ರು. ಕೆಲ ದಿನಗಳ ನಂತರ ರಾಜ್ಯದಲ್ಲಿ ನಡೆದ ಅಪರೇಷನ್ ಕಮಲಕ್ಕೆ ಪ್ರತಾಪ್‌ಗೌಡ ಪಾಟೀಲ್ ಸಿಲುಕಿ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ರು. ಆಗ ಪಕ್ಷ ವಿರುದ್ದಿ ಚಟುವಟಿಕೆ ಶಾಸಕ ಸ್ಥಾನದಿಂದ ಅನರ್ಹಗೊಂಡಿದ್ರು. ಅನರ್ಹತೆಯನ್ನ  ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಸುಪ್ರೀಂ ತೀರ್ಪು ಹೊರಬಂದ ಬಳಿಕ ಚುನಾವಣೆಯಲ್ಲಿ ಸ್ಪರ್ಧೆ ಅವಕಾಶ ಕಲ್ಪಿಸಿದ್ರು. ಆದ್ರೆ ಅಕ್ರಮ ಮತದಾನ ನಡೆದಿರುವ ಕುರಿತು ಹೈಕೋರ್ಟ್ ಧಾವೆ ಹಿನ್ನೆಲೆಯಿಂದಾಗಿ ಉಪಚುನಾವಣೆ ಘೋಷಣೆಯಾಗಿದಿಲ್ಲ. Conclusion:ಆದ್ರೆ ಇದೀಗ ಹೈಕೋರ್ಟ್ ನಲ್ಲಿ ಧಾವೆ ವಾಪಾಸ್ ತೆಗೆದುಕೊಂಡರುವುದರಿಂದ ಮಸ್ಕಿ ಬೈ ಎಲೆಕ್ಷನ್ ಚುನಾವಣೆ ಹಾದಿ ಸುಗಮವಾಗಿದ್ದು, ಅನರ್ಹ ಶಾಸಕ ಪ್ರತಾಪ್‌ಗೌಡ ಪಾಟೀಲ್ ಬೈ ಎಲೆಕ್ಷನ್ ಗೆ ಕಾನೂನು ವಿಘ್ನ ದೂರವಾಗಿದೆ. ಇನ್ನೂ ಬಸವನಗೌಡ ತುರುವಿಹಾಳಿಗೆ ಬಿಜೆಪಿ ಹೈಕಮಾಂಡ್‌ನಿಂದ ಹೈಕೋರ್ಟ್ ಹಾಕಿರುವ ಧಾವೆಯನ್ನ ಹಿಂಪಡೆಯುವಂತೆ ಒತ್ತಡ ಹೇರಿತ್ತು. ಆದ್ರೂ ಹೈಕೋರ್ಟ್ ಧಾವೆಯನ್ನ ಹಿಂಪಡೆದಿರಲಿಲ್ಲಿ. ಇದೀಗ ಉಪಚುನಾವಣೆ ಬಿಜೆಪಿ ಹೆಚ್ಚು ಸ್ಥಾನ ಪಡೆಯುವ ಮೂಲಕ ಸರಕಾರ ಸುಭದ್ರಗೊಂಡಿತ್ತು. ಉಪಚುನಾವಣೆ ಫಲಿತಾಂಶ ಎಫೆಕ್ಟ್ ನಿಂದ ಅರ್ಜಿಯನ್ನ ಹಿಂಡೆದಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.