ETV Bharat / state

ಅಪಘಾತದಲ್ಲಿ ಪತಿ ಸಾವು: ದುಃಖ ತಾಳಲಾರದೆ ಮಗು ಕೊಂದು ಪತ್ನಿ ಆತ್ಮಹತ್ಯೆ

author img

By

Published : Apr 17, 2022, 11:14 AM IST

Updated : Apr 17, 2022, 2:12 PM IST

ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ ಅವರು ಅಪಘಾತದಲ್ಲಿ ಸಾವಿಗೀಡಾಗಿದ್ದರು. ಈ ವಿಷಯದಿಂದ ಅಘಾತಕ್ಕೆ ಒಳಗಾದ ಇವರ ಹೆಂಡತಿ ತಮ್ಮ ಮಗುವನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಪಘಾತದಲ್ಲಿ ಗಂಡ ಸಾವು: ದುಃಖ ತಾಳಲಾರದೆ ಮಗು ಕೊಂದು ಹೆಂಡತಿ ಆತ್ಮಹತ್ಯೆ
ಅಪಘಾತದಲ್ಲಿ ಗಂಡ ಸಾವು: ದುಃಖ ತಾಳಲಾರದೆ ಮಗು ಕೊಂದು ಹೆಂಡತಿ ಆತ್ಮಹತ್ಯೆ

ಮಂಗಳೂರು/ರಾಯಚೂರು: ಮಂಗಳೂರು ನಗರದಲ್ಲಿ ಅಪಘಾತಕ್ಕೆ ಪತಿ ಬಲಿಯಾದ ಬೆನ್ನಲ್ಲೇ ರಾಯಚೂರಿನಲ್ಲಿದ್ದ ಪತ್ನಿ ಆರು ತಿಂಗಳ ಶಿಶುವನ್ನು ನೇಣುಹಾಕಿ ಹತ್ಯೆಗೈದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ(36), ರಾಯಚೂರಿನಲ್ಲಿದ್ದ ಪತ್ನಿ ಶೃತಿ(30), ಆರು ತಿಂಗಳ ಶಿಶು ಅಭಿರಾಮ ಮೃತಪಟ್ಟವರು‌.

ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ ಅವರು ಕುಂಟಿಕಾನ ಬಳಿ ಶನಿವಾರ ರಾತ್ರಿ 8.50 ಸುಮಾರಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಕುಂದಾಪುರಕ್ಕೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದಾದ ನಂತರ ರಾಯಚೂರಿನಲ್ಲಿದ್ದ ಅವರ ಪತ್ನಿಗೆ ಈ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾರೆ.

ಅಪಘಾತದಲ್ಲಿ ಪತಿ ಸಾವು: ದುಃಖ ತಾಳಲಾರದೆ ಮಗು ಕೊಂದು ಪತ್ನಿ ಆತ್ಮಹತ್ಯೆ

ಗಂಡನ ಅಗಲಿಕೆಯ ಸುದ್ದಿ ಅರಗಿಸಿಕೊಳ್ಳಲಾಗದೆ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಆರು ತಿಂಗಳ ಮಗು ಅಭಿರಾಮನನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಒಂದಿಡೀ ಕುಟುಂಬವೇ ದುರಂತದಲ್ಲಿ ಅಂತ್ಯಗೊಂಡಿದೆ. ಅಪಘಾತದ ಬಗ್ಗೆ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಇತ್ತ ಲಿಂಗಸೂಗೂರು ಪೊಲೀಸರು ಕಮ್ಮಾರ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹುಬ್ಬಳಿಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

ಮಂಗಳೂರು/ರಾಯಚೂರು: ಮಂಗಳೂರು ನಗರದಲ್ಲಿ ಅಪಘಾತಕ್ಕೆ ಪತಿ ಬಲಿಯಾದ ಬೆನ್ನಲ್ಲೇ ರಾಯಚೂರಿನಲ್ಲಿದ್ದ ಪತ್ನಿ ಆರು ತಿಂಗಳ ಶಿಶುವನ್ನು ನೇಣುಹಾಕಿ ಹತ್ಯೆಗೈದು ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ(36), ರಾಯಚೂರಿನಲ್ಲಿದ್ದ ಪತ್ನಿ ಶೃತಿ(30), ಆರು ತಿಂಗಳ ಶಿಶು ಅಭಿರಾಮ ಮೃತಪಟ್ಟವರು‌.

ಮಂಗಳೂರಿನ ಅಗ್ನಿಶಾಮಕ ದಳದಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗಂಗಾಧರ ಬಿ. ಕಮ್ಮಾರ ಅವರು ಕುಂಟಿಕಾನ ಬಳಿ ಶನಿವಾರ ರಾತ್ರಿ 8.50 ಸುಮಾರಿಗೆ ರಸ್ತೆ ದಾಟುತ್ತಿದ್ದರು. ಈ ವೇಳೆ ಬೆಂಗಳೂರಿನಿಂದ ಕುಂದಾಪುರಕ್ಕೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇದಾದ ನಂತರ ರಾಯಚೂರಿನಲ್ಲಿದ್ದ ಅವರ ಪತ್ನಿಗೆ ಈ ವಿಷಯ ತಿಳಿದು ಆಘಾತಕ್ಕೊಳಗಾಗಿದ್ದಾರೆ.

ಅಪಘಾತದಲ್ಲಿ ಪತಿ ಸಾವು: ದುಃಖ ತಾಳಲಾರದೆ ಮಗು ಕೊಂದು ಪತ್ನಿ ಆತ್ಮಹತ್ಯೆ

ಗಂಡನ ಅಗಲಿಕೆಯ ಸುದ್ದಿ ಅರಗಿಸಿಕೊಳ್ಳಲಾಗದೆ ರಾತ್ರಿ 10 ಗಂಟೆ ಸುಮಾರಿಗೆ ತಮ್ಮ ಆರು ತಿಂಗಳ ಮಗು ಅಭಿರಾಮನನ್ನು ಕೊಂದು ತಾವೂ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರಿಂದ ಒಂದಿಡೀ ಕುಟುಂಬವೇ ದುರಂತದಲ್ಲಿ ಅಂತ್ಯಗೊಂಡಿದೆ. ಅಪಘಾತದ ಬಗ್ಗೆ ಮಂಗಳೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೆ, ಇತ್ತ ಲಿಂಗಸೂಗೂರು ಪೊಲೀಸರು ಕಮ್ಮಾರ ಮನೆಗೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಹುಬ್ಬಳಿಯಲ್ಲಿ ಪರಿಸ್ಥಿತಿ ಹತೋಟಿಗೆ ಬಂದಿದೆ: ಗೃಹ ಸಚಿವ ಆರಗ ಜ್ಞಾನೇಂದ್ರ

Last Updated : Apr 17, 2022, 2:12 PM IST

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.