ETV Bharat / state

ಮಹಿಳೆಯ ಹಣ, ಚಿನ್ನಾಭರಣ ಕುಟುಂಬದವರಿಗೆ ಒಪ್ಪಿಸಿದ 108 ಆರೋಗ್ಯ ಕವಚ ಸಿಬ್ಬಂದಿ - ಮಹಿಳೆಯ ಹಣ, ಚಿನ್ನಾಭರಣ ಕುಂಟಂಬದವರಿಗೆ ನೀಡಿದ 108 ಸಿಬ್ಬಂಧಿಗಳು

ನಿನ್ನೆ ಮಾನವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಕಾರ್ ರಸ್ತೆ ಬದಿಯ ತಡೆಗೋಡೆ‌ಗೆ ಡಿಕ್ಕಿ ಹೊಡೆದ ಪರಿಣಾಮ ಕಂಪ್ಲಿ ಮೂಲದ ಪತಿ ಪಂಚಯ್ಯ ಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತ್ನಿ ಶಾಂತಮ್ಮ ಗಾಯಗೊಂಡಿದ್ದರು.

108 health care workers who are humanitarian in Raichur
ಮಾನವೀಯತೆ ಮೆರೆದ 108 ಸಿಬ್ಬಂಧಿಗಳು
author img

By

Published : Jun 25, 2021, 11:03 AM IST

ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ‌ಸೇರಿಸಿ ಅವರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣವನ್ನು ಕುಟುಂಬಸ್ಥರಿಗೆ ವಾಪಸ್ ನೀಡುವ ಮೂಲಕ 108 ಆರೋಗ್ಯ ಕವಚ ಸಿಬ್ಬಂದಿಗಳು ಕರ್ತವ್ಯನಿಷ್ಠೆ ತೋರಿದ್ದಾರೆ.

2,66,350 ರೂಪಾಯಿ ನಗದು, 3 ಬಂಗಾರದ ಸರ, 3 ಬಂಗಾರದ ಉಂಗುರ, ಮೊಬೈಲ್ ಫೋನ್, ವಾಚ್, ದಾಖಲೆಗಳನ್ನ ಕುಟುಂಬಸ್ಥರಿಗೆ ಮರಳಿ ನೀಡುವ ಮೂಲಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ ಮಾನವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಕಾರ್ ರಸ್ತೆ ಬದಿಯ ತಡೆಗೋಡೆ‌ಗೆ ಡಿಕ್ಕಿ ಹೊಡೆದ ಪರಿಣಾಮ ಕಂಪ್ಲಿ ಮೂಲದ ಪತಿ ಪಂಚಯ್ಯ ಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತ್ನಿ ಶಾಂತಮ್ಮ ಗಾಯಗೊಂಡಿದ್ದರು. ಗಾಯಗೊಂಡ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಘಟನೆ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಾನವಿಯಲ್ಲಿ ಕಾರು ಅಪಘಾತ: ಪತಿ ಸಾವು, ಪತ್ನಿ ಗಂಭೀರ

ರಾಯಚೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ‌ಸೇರಿಸಿ ಅವರಲ್ಲಿದ್ದ ಲಕ್ಷಾಂತರ ರೂಪಾಯಿ ಹಣ, ಚಿನ್ನಾಭರಣವನ್ನು ಕುಟುಂಬಸ್ಥರಿಗೆ ವಾಪಸ್ ನೀಡುವ ಮೂಲಕ 108 ಆರೋಗ್ಯ ಕವಚ ಸಿಬ್ಬಂದಿಗಳು ಕರ್ತವ್ಯನಿಷ್ಠೆ ತೋರಿದ್ದಾರೆ.

2,66,350 ರೂಪಾಯಿ ನಗದು, 3 ಬಂಗಾರದ ಸರ, 3 ಬಂಗಾರದ ಉಂಗುರ, ಮೊಬೈಲ್ ಫೋನ್, ವಾಚ್, ದಾಖಲೆಗಳನ್ನ ಕುಟುಂಬಸ್ಥರಿಗೆ ಮರಳಿ ನೀಡುವ ಮೂಲಕ ಸಿಬ್ಬಂದಿ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ ಮಾನವಿ ತಾಲೂಕಿನ ಬೋಮ್ಮನಾಳ ಕ್ರಾಸ್ ಬಳಿ ಕಾರ್ ರಸ್ತೆ ಬದಿಯ ತಡೆಗೋಡೆ‌ಗೆ ಡಿಕ್ಕಿ ಹೊಡೆದ ಪರಿಣಾಮ ಕಂಪ್ಲಿ ಮೂಲದ ಪತಿ ಪಂಚಯ್ಯ ಸ್ವಾಮಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಪತ್ನಿ ಶಾಂತಮ್ಮ ಗಾಯಗೊಂಡಿದ್ದರು. ಗಾಯಗೊಂಡ ಮಹಿಳೆಯನ್ನು ಆಂಬ್ಯುಲೆನ್ಸ್ ಮೂಲಕ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಘಟನೆ ಕುರಿತು ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಾನವಿಯಲ್ಲಿ ಕಾರು ಅಪಘಾತ: ಪತಿ ಸಾವು, ಪತ್ನಿ ಗಂಭೀರ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.