ETV Bharat / state

ಮದುವೆ ನಿಶ್ಚಯವಾಗಿದ್ದ ಯುವಕನ ಮೇಲೆ ಹಲ್ಲೆ: ಸಿಕ್ಕಿಬಿದ್ದ ಆರೋಪಿ ಯಾರು ಗೊತ್ತಾ.?

ಯುವತಿಯೊಬ್ಬಳು ತಾನು ಮದುವೆಯಾಗಬೇಕಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

author img

By

Published : Mar 5, 2020, 11:34 AM IST

Mysore
ಮದುವೆ ನಿಶ್ಚಿತವಾಗಿದ್ದ ಯುವಕನ ಮೇಲೆ ಹಲ್ಲೆ

ಮೈಸೂರು: ಯುವತಿಯೊಬ್ಬಳು ತಾನು ಮದುವೆಯಾಗಬೇಕಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಬುಧವಾರ ರವಿಕುಮಾರ್ ಎಂಬ ಯುವಕ ಹಲ್ಲೆಗೊಳಗಾಗಿದ್ದು, ಇನ್ನು ಈತನಿಗೆ ಇದೇ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಿತವಾಗಿತ್ತು. ಮಾರ್ಚ್ 13 ರಂದು ವಿವಾಹವಾಗಬೇಕಿತ್ತು. ಆದರೆ, ನಡು ರಸ್ತೆಯಲ್ಲೇ ಹಲ್ಲೆಗೊಳಗಾಗಿ ಒದ್ದಾಡುತ್ತಿದ್ದ ಯುವಕನನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಈ ಕುರಿತು ತನಿಖೆ ಕೈಗೊಂಡ ಬೆಟ್ಟದಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯಿಂದಲೇ ಕೃತ್ಯ:

ರವಿಕುಮಾರ್ ಅವರಿಗೆ ಗ್ರಾಮದ ಯುವತಿ ಅರುಣಿ ಅವರೊಂದಿಗೆ ಮದುವೆ ನಿಶ್ಚಿತವಾಗಿದ್ದು, ಇಬ್ಬರಿಗೂ 2 ತಿಂಗಳ ಹಿಂದೆ ನಿಶ್ಚಿತಾರ್ಥವೂ ಸಹ ಆಗಿತ್ತು. ಆದರೆ, ಅರುಣಿಗೆ ಮದುವೆಯಾಗಲು ಇಷ್ಟವಿಲ್ಲದೇ ಮನೆಯವರ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಿದ್ದಳು. ಹೀಗೆ ರವಿಕುಮಾರ್​ಗೆ ಫೋನ್ ಮಾಡಿ ಬೆಟ್ಟದಪುರಕ್ಕೆ ಕರೆಸಿಕೊಂಡು ಕಣ್ಣಿಗೆ ಕೈಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾಳೆ. ಮದುವೆ ಇಷ್ಟವಿಲ್ಲ ಎಂಬ ಕಾರಣಕ್ಕೆ ರವಿಕುಮಾರ್​ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಬೆಟ್ಟದಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೈಸೂರು: ಯುವತಿಯೊಬ್ಬಳು ತಾನು ಮದುವೆಯಾಗಬೇಕಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಂಧನಕ್ಕೊಳಗಾಗಿರುವ ಘಟನೆ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ನಡೆದಿದೆ.

ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಬುಧವಾರ ರವಿಕುಮಾರ್ ಎಂಬ ಯುವಕ ಹಲ್ಲೆಗೊಳಗಾಗಿದ್ದು, ಇನ್ನು ಈತನಿಗೆ ಇದೇ ಗ್ರಾಮದ ಯುವತಿಯೊಂದಿಗೆ ಮದುವೆ ನಿಶ್ಚಿತವಾಗಿತ್ತು. ಮಾರ್ಚ್ 13 ರಂದು ವಿವಾಹವಾಗಬೇಕಿತ್ತು. ಆದರೆ, ನಡು ರಸ್ತೆಯಲ್ಲೇ ಹಲ್ಲೆಗೊಳಗಾಗಿ ಒದ್ದಾಡುತ್ತಿದ್ದ ಯುವಕನನ್ನ ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಈ ಕುರಿತು ತನಿಖೆ ಕೈಗೊಂಡ ಬೆಟ್ಟದಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಯುವತಿಯಿಂದಲೇ ಕೃತ್ಯ:

ರವಿಕುಮಾರ್ ಅವರಿಗೆ ಗ್ರಾಮದ ಯುವತಿ ಅರುಣಿ ಅವರೊಂದಿಗೆ ಮದುವೆ ನಿಶ್ಚಿತವಾಗಿದ್ದು, ಇಬ್ಬರಿಗೂ 2 ತಿಂಗಳ ಹಿಂದೆ ನಿಶ್ಚಿತಾರ್ಥವೂ ಸಹ ಆಗಿತ್ತು. ಆದರೆ, ಅರುಣಿಗೆ ಮದುವೆಯಾಗಲು ಇಷ್ಟವಿಲ್ಲದೇ ಮನೆಯವರ ಒತ್ತಡಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಿದ್ದಳು. ಹೀಗೆ ರವಿಕುಮಾರ್​ಗೆ ಫೋನ್ ಮಾಡಿ ಬೆಟ್ಟದಪುರಕ್ಕೆ ಕರೆಸಿಕೊಂಡು ಕಣ್ಣಿಗೆ ಕೈಗೆ ಬಟ್ಟೆ ಕಟ್ಟಿ ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದ್ದಾಳೆ. ಮದುವೆ ಇಷ್ಟವಿಲ್ಲ ಎಂಬ ಕಾರಣಕ್ಕೆ ರವಿಕುಮಾರ್​ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲು ಯತ್ನಿಸಿದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾಳೆ. ಬೆಟ್ಟದಪುರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.