ETV Bharat / state

ಬಾಳೆ-ಶುಂಠಿ ಬೆಳೆ ನಾಶ ಮಾಡಿದ ಕಾಡಾನೆ ಹಿಂಡು, ಪರಿಹಾರಕ್ಕಾಗಿ ರೈತರ ಆಗ್ರಹ - destroyed the banana-ginger crop

ಅರಣ್ಯ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದು, ಆನೆಗಳ ಹಾವಳಿ ತಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಬೆಳೆ ನಾಶಕ್ಕೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ..

wild elephant squad that destroyed the banana-ginger crop
ಬಾಳೆ-ಶುಂಠಿ ಬೆಳೆ ನಾಶ ಮಾಡಿದ ಕಾಡಾನೆ ಹಿಂಡು, ಪರಿಹಾರ ನೀಡುವಂತೆ ರೈತರ ಮನವಿ
author img

By

Published : Sep 22, 2020, 3:01 PM IST

Updated : Sep 22, 2020, 3:27 PM IST

ಮೈಸೂರು : ಜಮೀನಿಗೆ ನುಗ್ಗಿದ ಕಾಡಾ‌ನೆಗಳ ಹಿಂಡು, ಬಾಳೆ ಹಾಗೂ ಶುಂಠಿ ಬೆಳೆ ತಿಂದು-ತೇಗಿ ತುಳಿದು ನಾಶ ಮಾಡಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಜಿಎಂಹಳ್ಳಿ ಹಾಡಿಯಲ್ಲಿ ನಡೆದಿದೆ.

ಬಾಳೆ-ಶುಂಠಿ ಬೆಳೆ ನಾಶ ಮಾಡಿದ ಕಾಡಾನೆ ಹಿಂಡು, ಪರಿಹಾರಕ್ಕಾಗಿ ರೈತರ ಆಗ್ರಹ

ನಾಗರಹೊಳೆ ರಾಷ್ಟ್ರೀಯ ಉದ್ಯಾನವ‌ನ ವ್ಯಾಪ್ತಿಯ ಮೇಟಿಕುಪ್ಪೆ ಕಾಡಂಚಿನ ಗ್ರಾಮದಲ್ಲಿ‌‌ ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದು, ಆನೆಗಳ ಹಾವಳಿ ತಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಬೆಳೆ ನಾಶಕ್ಕೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ನಿಜಗುಣ ನಾಯಕ್ ಮತ್ತು ಸಂತೋಷ್ ಅವರ ಜಮೀನಿನಲ್ಲಿ ಬೆಳೆ ನಾಶವಾಗಿದ್ದು, ಇಬ್ಬರು ಆಕ್ರೋಶ ಹೊರ ಹಾಕಿದ್ದಾರೆ.

ಮೈಸೂರು : ಜಮೀನಿಗೆ ನುಗ್ಗಿದ ಕಾಡಾ‌ನೆಗಳ ಹಿಂಡು, ಬಾಳೆ ಹಾಗೂ ಶುಂಠಿ ಬೆಳೆ ತಿಂದು-ತೇಗಿ ತುಳಿದು ನಾಶ ಮಾಡಿರುವ ಘಟನೆ ಹೆಚ್ ಡಿ ಕೋಟೆ ತಾಲೂಕಿನ ಜಿಎಂಹಳ್ಳಿ ಹಾಡಿಯಲ್ಲಿ ನಡೆದಿದೆ.

ಬಾಳೆ-ಶುಂಠಿ ಬೆಳೆ ನಾಶ ಮಾಡಿದ ಕಾಡಾನೆ ಹಿಂಡು, ಪರಿಹಾರಕ್ಕಾಗಿ ರೈತರ ಆಗ್ರಹ

ನಾಗರಹೊಳೆ ರಾಷ್ಟ್ರೀಯ ಉದ್ಯಾನವ‌ನ ವ್ಯಾಪ್ತಿಯ ಮೇಟಿಕುಪ್ಪೆ ಕಾಡಂಚಿನ ಗ್ರಾಮದಲ್ಲಿ‌‌ ಆನೆ ಹಾವಳಿಯಿಂದ ರೈತರು ಕಂಗಾಲಾಗಿದ್ದಾರೆ. ಅರಣ್ಯ ಅಧಿಕಾರಿಗಳಿಗೆ ರೈತರು ಮಾಹಿತಿ ನೀಡಿದ್ದು, ಆನೆಗಳ ಹಾವಳಿ ತಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಅಲ್ಲದೇ, ಬೆಳೆ ನಾಶಕ್ಕೆ ಪರಿಹಾರ ಕಲ್ಪಿಸುವಂತೆ ಮನವಿ ಮಾಡಿದ್ದಾರೆ.

ನಿಜಗುಣ ನಾಯಕ್ ಮತ್ತು ಸಂತೋಷ್ ಅವರ ಜಮೀನಿನಲ್ಲಿ ಬೆಳೆ ನಾಶವಾಗಿದ್ದು, ಇಬ್ಬರು ಆಕ್ರೋಶ ಹೊರ ಹಾಕಿದ್ದಾರೆ.

Last Updated : Sep 22, 2020, 3:27 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.