ETV Bharat / state

ಸಿ ಹೆಚ್​ ವಿಜಯಶಂಕರ್​ ಬಿಜೆಪಿ ಸೇರಲು ಸಜ್ಜು: ಸಚಿವ ವಿ. ಸೋಮಣ್ಣ ಹೇಳಿದ್ದೇನು? - V.somanna reaction in mysore

ಲೋಕಸಭೆ ಚುನಾವಣೆ ವೇಳೆ ಮಾಜಿ ಸಚಿವ ಸಿ ಹೆಚ್​ ವಿಜಯಶಂಕರ್​​ಗೆ ಪಕ್ಷ ಬಿಟ್ಟು ಹೋಗದಂತೆ ನಾನು ಹೇಳಿದ್ದೆ. ಆದ್ರೆ ಅವರು ಮಾತು ಕೇಳದೆ ಹೋಗಿದ್ರು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದ್ದಾರೆ. ಇದೀಗ ಮತ್ತೆ ಬಿಜೆಪಿ ಸೇರುವುದಾಗಿ ವಿಜಯಶಂಕರ್​ ಹೇಳಿರುವ ಬೆನ್ನಲ್ಲೇ ಸಚಿವ ಸೋಮಣ್ಣ ಈ ಪ್ರತಿಕ್ರಿಯೆ ನೀಡಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ
author img

By

Published : Oct 24, 2019, 3:45 PM IST

ಮೈಸೂರು: ಮೋದಿ ಅಲೆಗೆ ತರಗೆಲೆ ತರ ಕೊಚ್ಚಿ ಹೋಗ್ತಿಯಾ ಪಕ್ಷ ಬಿಟ್ಟು ಹೋಗಬೇಡ ಅಂದಿದ್ದೆ. ಆದ್ರೆ ಸಿ.ಹೆಚ್. ವಿಜಯಶಂಕರ್ ಆಗ ನನ್ನ ಮಾತನ್ನು ಕೇಳಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮಯದಲ್ಲಿ ಪಕ್ಷ ಬಿಟ್ಟು ಹೋಗಬೇಡ ಎಂದು ನಾನೇ ಹೇಳಿದ್ದೆ‌. ಆದರೆ ನನ್ನ ಮಾತು ಕೇಳದೆ ಹೋಗಿದ್ದರು. ಆದರೀಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಅಥವಾ ಬೇಡವಾ ಎಂಬುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ತೀರ್ಮಾನವನ್ನು ಅವರೇ ಕೈಗೊಳ್ಳುತ್ತಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಇನ್ನು ಬಿಜೆಪಿ ಸರ್ಕಾರದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ನಡೆಯುತ್ತಿದೆ. ಹಿಂದಿನ ಸಮ್ಮಿಶ್ರ ಸರ್ಕಾರ ನೆರೆ ಹಾವಳಿ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಂಡಿದೆ ಅನ್ನೋದು ಜನರಿಗೆ ಗೊತ್ತಿದೆ. ಮಳೆಯಿಂದ ಪದೇ ಪದೇ ಹಾನಿಗೊಳಗಾಗುವ ಪ್ರದೇಶಗಳನ್ನು ಸ್ಥಳಾಂತರ ಮಾಡಿ, ಜನರಿಗೆ ಶಾಶ್ವತ ಪರಿಹಾರಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.

ಮೈಸೂರು: ಮೋದಿ ಅಲೆಗೆ ತರಗೆಲೆ ತರ ಕೊಚ್ಚಿ ಹೋಗ್ತಿಯಾ ಪಕ್ಷ ಬಿಟ್ಟು ಹೋಗಬೇಡ ಅಂದಿದ್ದೆ. ಆದ್ರೆ ಸಿ.ಹೆಚ್. ವಿಜಯಶಂಕರ್ ಆಗ ನನ್ನ ಮಾತನ್ನು ಕೇಳಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ನಗರದ ಜಲದರ್ಶಿನಿ ಸರ್ಕಾರಿ ಅತಿಥಿ ಗೃಹದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಸಮಯದಲ್ಲಿ ಪಕ್ಷ ಬಿಟ್ಟು ಹೋಗಬೇಡ ಎಂದು ನಾನೇ ಹೇಳಿದ್ದೆ‌. ಆದರೆ ನನ್ನ ಮಾತು ಕೇಳದೆ ಹೋಗಿದ್ದರು. ಆದರೀಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಅಥವಾ ಬೇಡವಾ ಎಂಬುದು ಪಕ್ಷದ ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಈ ಬಗ್ಗೆ ತೀರ್ಮಾನವನ್ನು ಅವರೇ ಕೈಗೊಳ್ಳುತ್ತಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ

ಇನ್ನು ಬಿಜೆಪಿ ಸರ್ಕಾರದಲ್ಲಿ ನೆರೆ ಪರಿಹಾರ ಕಾರ್ಯ ತುರ್ತಾಗಿ ನಡೆಯುತ್ತಿದೆ. ಹಿಂದಿನ ಸಮ್ಮಿಶ್ರ ಸರ್ಕಾರ ನೆರೆ ಹಾವಳಿ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಂಡಿದೆ ಅನ್ನೋದು ಜನರಿಗೆ ಗೊತ್ತಿದೆ. ಮಳೆಯಿಂದ ಪದೇ ಪದೇ ಹಾನಿಗೊಳಗಾಗುವ ಪ್ರದೇಶಗಳನ್ನು ಸ್ಥಳಾಂತರ ಮಾಡಿ, ಜನರಿಗೆ ಶಾಶ್ವತ ಪರಿಹಾರಗಳನ್ನು ಕಲ್ಪಿಸಲಾಗುವುದು ಎಂದು ಸಚಿವ ಸೋಮಣ್ಣ ತಿಳಿಸಿದರು.

Intro:ಸಚಿವ ವಿ.ಸೋಮಣ್ಣ ಬೈಟ್


Body:ಸಚಿವ ವಿ.ಸೋಮಣ್ಣ


Conclusion:ಮೋದಿ ಅಲೆಗೆ ತರಗೆಲೆ ತರ ಕೊಚ್ಚಿ ಹೋಗ್ತಿಯಾ ಹೋಗ್ಬೇಡಿ ಅಂದಿದೆ: ವಿ.ಸೋಮಣ್ಣ
ಮೈಸೂರು: ಮೋದಿ ಅಲೆಗೆ ತರಗೆಲೆ ತರ ಕೊಚ್ಚಿ ಹೋಗ್ತಿಯಾ ಪಕ್ಷ ಬಿಟ್ಟು ಹೋಗಬೇಡ ಅಂದಿದ್ದೆ, ಸಿ.ಎಚ್.ವಿಜಯಶಂಕರ್ ಅವರು ನನ್ನ ಮಾತು ಕೇಳಲಿಲ್ಲವೆಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು‌.
ಮೈಸೂರಿನ ಜಲದರ್ಶಿನಿ ಸರ್ಕಾರಿ ಅತಿಥಿಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಹೋಗಬೇಡ ಅಂದು ಆಗ ನಾನು ಹೇಳಿದೆ‌.ಆದರೀಗ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾ ಬೇಡವೇ ಎಂಬುವುದು ಪಕ್ಷದ ಹೈಕಮಾಂಡ್ ಹಾಗೂ ರಾಜ್ಯದ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ.ಅವರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು.
ಬಾಲಕಿ ದೇವರ ಸಮಾನ, ಆಕೆಗೆ ಪತ್ರ ಕೊಟ್ಟು ಓದಿಸಿ,ಸರ್ಕಾರ ಕೆಟ್ಟ ಹೆಸರು ತರಲು ಪ್ರಯತ್ನಿಸುತ್ತಿದ್ದಾರೆ.ಆದರೆ ಜನರಿಗೂ ವಿಚಾರ ಗೊತ್ತಿದೆ.ಬಿಜೆಪಿ ಸರ್ಕಾರದಲ್ಲಿ ನೆರೆ ಪರಿಹಾರ ತುರ್ತಾಗಿ ನಡೆಯುತ್ತಿದೆ.ಹಿಂದಿನ ಸಮ್ಮಿಶ್ರ ಸರ್ಕಾರ ನೆರೆ ಹಾವಳಿ ಸಂದರ್ಭದಲ್ಲಿ ಯಾವ ರೀತಿ ನಡೆದುಕೊಂಡಿದೆ.ಜನರಿಗೆ ಗೊತ್ತಿದೆ ಎಂದು ಹೇಳಿದರು.
ಮಳೆಯಿಂದ ಪದೇ ಪದೇ ಹಾನಿಗೊಳಗಾಗುವ ಪ್ರದೇಶಗಳನ್ನು ಸ್ಥಳಾಂತರ ಮಾಡಿ,ಜನರಿಗೆ ಯೋಗ್ಯವಾದ ಶಾಶ್ವತ ಪರಿಹಾರಗಳನ್ನು ನೀಡಲಾಗುವುದು.ಕೊಡಗು ಜಿಲ್ಲೆಯ ತೋರ ಗ್ರಾಮದಲ್ಲಿ ಕೆಲವರು ಅಲ್ಲಿಯೇ ಮನೆ ಕಟ್ಟಿಕೊಡಿ ಎಂದು ಮನವಿ ಮಾಡಿದರು.ಆದರೆ ಅವರಿಗೆ ಮನವರಿಕೆ ಮಾಡಿದ್ದಾನೆ.ಕೆಲವರು ತೋರೆ ಗ್ರಾಮ ಬಿಟ್ಟು ಹೋಗಲು ಒಪ್ಪಿದ್ದಾರೆ ಎಂದರು.
ಮಹಾರಾಷ್ಟ್ರ ಹಾಗೂ ಹರಿಯಾಣದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ.ಮೋದಿ ಹಾಗೂ ಅಮಿತ್ ಶಾ ಅವರ ಆಡಳಿತಕ್ಕೆ ಜನ ಮೆಚ್ಚಿದ್ದಾರೆ ಎಂದು ಹೇಳಿದರು‌.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.