ETV Bharat / state

ಮೈಸೂರಿನಲ್ಲಿ ವಿಚಿತ್ರ ಘಟನೆ.. ಕಂಡವರಿಗೆಲ್ಲ ಡ್ರಾಪ್ ಕೊಡುವ ಮುನ್ನ ಎಚ್ಚರ!

author img

By

Published : Jul 15, 2021, 5:19 PM IST

ಮೈಸೂರು ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ಖದೀಮನೋರ್ವ ತನಗೆ ಡ್ರಾಪ್​​ ಕೊಟ್ಟ ವ್ಯಕ್ತಿಯ ಸ್ಕೂಟಿಯನ್ನೇ ಅಪಹರಿಸಿ ಪರಾರಿಯಾಗಿರುವ ವಿಚಿತ್ರ ಘಟನೆ ನಡೆದಿದೆ.

Unknown person thefted scooter in Mysore
ಡ್ರಾಪ್ ಕೊಟ್ಟವನ ಸ್ಕೂಟಿ ಕದ್ದು ಖದೀಮ ಪರಾರಿ

ಮೈಸೂರು: ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಡ್ರಾಪ್ ಕೊಟ್ಟ ವ್ಯಕ್ತಿಯ ಸ್ಕೂಟಿಯನ್ನೇ ಖದೀಮನೋರ್ವ ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೈಸೂರಿನ ಯರಗನಹಳ್ಳಿ ನಿವಾಸಿ ರಂಗಸ್ವಾಮಿ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೆಲ್ಲಹಳ್ಳಿ ಗ್ರಾಮದವರಿಗೆ ಡ್ರಾಪ್ ನೀಡುವಂತೆ ಮನವಿ ಮಾಡಿದ್ದಾನೆ. ಈ ವೇಳೆ ರಂಗಸ್ವಾಮಿ ಮೆಲ್ಲಹಳ್ಳಿಗೆ ಡ್ರಾಪ್ ನೀಡಿದ್ದಾನೆ. ಇಲ್ಲೇ ಮನೆಯಿದೆ, ಹೋಗಿ ಎರಡು ನಿಮಿಷ ಬರುತ್ತೀನಿ ಎಂದೇಳಿ ಚಾಲಾಕಿ ಸ್ಕೂಟಿ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಸ್ಕೂಟಿ ಕೊಟ್ಟ ರಂಗಸ್ವಾಮಿ ಎಷ್ಟೇ ಕಾದರು ವ್ಯಕ್ತಿ ಬರದಿದ್ದಾಗ ಗಾಬರಿಗೊಂಡು ವರುಣಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಓದಿ: ಮಂಗಳೂರು ಸಲೂನ್​ನಲ್ಲಿ ಮಹಿಳೆ ಮೇಲೆ ಹಲ್ಲೆ, ದರೋಡೆ: ಸಿಸಿಟಿವಿ ಆಧರಿಸಿ ಆರೋಪಿ ಅರೆಸ್ಟ್​

ಮೈಸೂರು: ಜಿಲ್ಲೆಯಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಡ್ರಾಪ್ ಕೊಟ್ಟ ವ್ಯಕ್ತಿಯ ಸ್ಕೂಟಿಯನ್ನೇ ಖದೀಮನೋರ್ವ ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಮೆಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೈಸೂರಿನ ಯರಗನಹಳ್ಳಿ ನಿವಾಸಿ ರಂಗಸ್ವಾಮಿ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಮೆಲ್ಲಹಳ್ಳಿ ಗ್ರಾಮದವರಿಗೆ ಡ್ರಾಪ್ ನೀಡುವಂತೆ ಮನವಿ ಮಾಡಿದ್ದಾನೆ. ಈ ವೇಳೆ ರಂಗಸ್ವಾಮಿ ಮೆಲ್ಲಹಳ್ಳಿಗೆ ಡ್ರಾಪ್ ನೀಡಿದ್ದಾನೆ. ಇಲ್ಲೇ ಮನೆಯಿದೆ, ಹೋಗಿ ಎರಡು ನಿಮಿಷ ಬರುತ್ತೀನಿ ಎಂದೇಳಿ ಚಾಲಾಕಿ ಸ್ಕೂಟಿ ತೆಗೆದುಕೊಂಡು ಪರಾರಿಯಾಗಿದ್ದಾನೆ.

ಸ್ಕೂಟಿ ಕೊಟ್ಟ ರಂಗಸ್ವಾಮಿ ಎಷ್ಟೇ ಕಾದರು ವ್ಯಕ್ತಿ ಬರದಿದ್ದಾಗ ಗಾಬರಿಗೊಂಡು ವರುಣಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಓದಿ: ಮಂಗಳೂರು ಸಲೂನ್​ನಲ್ಲಿ ಮಹಿಳೆ ಮೇಲೆ ಹಲ್ಲೆ, ದರೋಡೆ: ಸಿಸಿಟಿವಿ ಆಧರಿಸಿ ಆರೋಪಿ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.