ETV Bharat / state

ಮೈಸೂರಲ್ಲಿ ಮೂವರು ಶ್ರೀಗಂಧದ ಮರಗಳ್ಳರ ಬಂಧನ

author img

By

Published : Jan 8, 2020, 4:49 AM IST

ಶ್ರೀಗಂಧದ ಮರಗಳ್ಳತ್ತನ ಆರೋಪದಲ್ಲಿ ವಿದ್ಯಾರಣ್ಯಪುರಂ ನಿವಾಸಿ ಸಂಪತ್ ಕುಮಾರ್, ಬೊಂಬು ಬಜಾರ್ ನಿವಾಸಿ ಪರಶುರಾಂ ಮತ್ತು ಶಾಂತಿನಗರದ ನಿವಾಸಿ ಸೈಯಿದ್ ರಹೀಮ್ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಸಿಸಿಬಿ ಪೊಲೀಸರು, 4 ಲಕ್ಷ ರೂ. ಮೌಲ್ಯದ 40 ಕೆ.ಜಿ. ಶ್ರೀಗಂಧದ ಮರದ ತುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.

mysur
ಶ್ರೀಗಂಧದ ಮರಗಳ್ಳರ ಬಂಧನ

ಮೈಸೂರು: ಶ್ರೀಗಂಧ ಮರಗಳ್ಳತನ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 4 ಲಕ್ಷ ರೂ. ಮೌಲ್ಯದ 40 ಕೆ.ಜಿ. ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರಂ ನಿವಾಸಿ ಸಂಪತ್ ಕುಮಾರ್ (32), ಬೊಂಬು ಬಜಾರ್ ನಿವಾಸಿ ಪರಶುರಾಂ (38) ಮತ್ತು ಶಾಂತಿನಗರದ ನಿವಾಸಿ ಸೈಯಿದ್ ರಹೀಮ್ (26) ಅವರನ್ನು ಬಂಧಿಸಲಾಗಿದೆ. ಕೆ.ಆರ್. ಠಾಣಾ ವ್ಯಾಪ್ತಿಯ ಗೌರಿಶಂಕರ ನಗರದ ಬಸ್​ ನಿಲ್ದಾಣದ ಮುಂಭಾಗ ಕಾರ್ಯಾಚರಣೆ ನಡೆಸಿ, ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಇಟ್ಟುಕೊಂಡು ನಿಂತಿದ್ದರು. ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಮೈಸೂರಿನ ಜೆಎಸ್‌ಎಸ್ ಮಠದ ಅವರಣದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 40 ಕೆ.ಜಿ. 7 ಶ್ರೀಗಂಧದ ಮರದ ತುಂಡುಗಳು ಹಾಗೂ ತೊಗಟೆ ತೆಗೆದಿದ್ದ ಶ್ರೀಗಂಧದ ಸಣ್ಣ- ಸಣ್ಣ ಚೂರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ಆರೋಪಿಗಳ ಇವರ ವಿರುದ್ಧ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ನಗರದ ಕೃಷ್ಣರಾಜ ಪೊಲೀಸ್ ಠಾಣೆಯ ಶ್ರೀಗಂಧ ಮರ ಕಳ್ಳತನ ಪ್ರಕರಣ ಸಹ ಬೆಳಕಿಗೆ ಬಂದಿದೆ.

ಮೈಸೂರು: ಶ್ರೀಗಂಧ ಮರಗಳ್ಳತನ ಮಾಡಿದ ಆರೋಪದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದು, ಅವರಿಂದ 4 ಲಕ್ಷ ರೂ. ಮೌಲ್ಯದ 40 ಕೆ.ಜಿ. ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವಿದ್ಯಾರಣ್ಯಪುರಂ ನಿವಾಸಿ ಸಂಪತ್ ಕುಮಾರ್ (32), ಬೊಂಬು ಬಜಾರ್ ನಿವಾಸಿ ಪರಶುರಾಂ (38) ಮತ್ತು ಶಾಂತಿನಗರದ ನಿವಾಸಿ ಸೈಯಿದ್ ರಹೀಮ್ (26) ಅವರನ್ನು ಬಂಧಿಸಲಾಗಿದೆ. ಕೆ.ಆರ್. ಠಾಣಾ ವ್ಯಾಪ್ತಿಯ ಗೌರಿಶಂಕರ ನಗರದ ಬಸ್​ ನಿಲ್ದಾಣದ ಮುಂಭಾಗ ಕಾರ್ಯಾಚರಣೆ ನಡೆಸಿ, ಎರಡು ಪ್ಲಾಸ್ಟಿಕ್ ಚೀಲಗಳಲ್ಲಿ ಶ್ರೀಗಂಧದ ಮರದ ತುಂಡುಗಳನ್ನು ಇಟ್ಟುಕೊಂಡು ನಿಂತಿದ್ದರು. ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದ್ದು, ಮೈಸೂರಿನ ಜೆಎಸ್‌ಎಸ್ ಮಠದ ಅವರಣದಲ್ಲಿ ಶ್ರೀಗಂಧದ ಮರ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ 4 ಲಕ್ಷ ರೂ. ಮೌಲ್ಯದ 40 ಕೆ.ಜಿ. 7 ಶ್ರೀಗಂಧದ ಮರದ ತುಂಡುಗಳು ಹಾಗೂ ತೊಗಟೆ ತೆಗೆದಿದ್ದ ಶ್ರೀಗಂಧದ ಸಣ್ಣ- ಸಣ್ಣ ಚೂರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಳೆಯ ಆರೋಪಿಗಳ ಇವರ ವಿರುದ್ಧ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿದೆ.

ನಗರದ ಕೃಷ್ಣರಾಜ ಪೊಲೀಸ್ ಠಾಣೆಯ ಶ್ರೀಗಂಧ ಮರ ಕಳ್ಳತನ ಪ್ರಕರಣ ಸಹ ಬೆಳಕಿಗೆ ಬಂದಿದೆ.

Intro:ಮರಗಳ್ಳರುBody: ಮೈಸೂರು:ಮೂವರು ಶ್ರೀಗಂಧದ ಮರಗಳ್ಳರನ್ನು ಬಂಧಿಸಿ,ಅವರಿಂದ ೪ ಲಕ್ಷ ರೂ.ಮೌಲ್ಯದ ೪೦ ಕೆ.ಜಿ.ತೂಕದ ಶ್ರೀಗಂಧದ ಮರದ ತುಂಡುಗಳನ್ನು ಸಿಸಿಬಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿದ್ಯಾರಣ್ಯಪುರಂ ನಿವಾಸಿ ಸಂಪತ್ ಕುಮಾರ್(೩೨), ಬೊಂಬು ಬಜಾರ್ ನಿವಾಸಿ ಪರಶುರಾಂ(೩೮), ಶಾಂತಿನಗರದ ನಿವಾಸಿ ಸೈಯಿದ್ ರಹೀಮ್(೨೬) ಬಂಧಿತರು. ಕೆ.ಆರ್.ಠಾಣಾ ವ್ಯಾಪ್ತಿಯ  ಗೌರಿಶಂಕರ ನಗರದ ಬಸ್ ಸ್ಟ್ಯಾಂಡ್ ಮುಂಭಾಗ ಕಾರ್ಯಾಚರಣೆ ನಡೆಸಿ, ಎರಡು ಪ್ಲಾಸ್ಟಿಕ್  ಚೀಲಗಳಲ್ಲಿ  ಅಕ್ರಮವಾಗಿ ಶ್ರೀಗಂಧದ ಮರದ ತುಂಡುಗಳನ್ನು ಇಟ್ಟುಕೊಂಡು ನಿಂತಿದ್ದ ಈ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ,ಮೈಸೂರಿನ  ಜೆಎಸ್‌ಎಸ್ ಮಠದ ಅವರಣದಲ್ಲಿ  ಶ್ರೀಗಂಧದ ಮರ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇವರಿಂದ ೪ ಲಕ್ಷ ರೂ.ಮೌಲ್ಯದ ೪೦ ಕೆ.ಜಿ.ತೂಕದ ೭ ಶ್ರೀಗಂಧದ ಮರದ ತುಂಡುಗಳು ಹಾಗೂ ತೊಗಟೆ ತೆಗೆದಿದ್ದ ಶ್ರೀಗಂಧದ ಸಣ್ಣ ಸಣ್ಣ ಪೀಸುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಳೆಯ ಆರೋಪಿಗಳ ಇವರ ವಿರುದ್ದ ಮೈಸೂರು ಜಿಲ್ಲೆಯ ಹುಣಸೂರು ಮತ್ತು ಕೊಡಗು ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳು ದಾಖಲಾಗಿರುವುದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಈ ಪತ್ತೆ ಕಾರ್ಯದಿಂದ ಮೈಸೂರು ನಗರ ಕೃಷ್ಣರಾಜ ಪೊಲೀಸ್ ಠಾಣೆಯ ೧ ಶ್ರೀಗಂಧ ಮರ ಕಳ್ಳತನ ಪ್ರಕರಣ ಪತ್ತೆಯಾಗಿದೆ.Conclusion:ಮರಗಳ್ಳರು
ETV Bharat Logo

Copyright © 2024 Ushodaya Enterprises Pvt. Ltd., All Rights Reserved.