ಮೈಸೂರು : ಬಿಸಿಲಿನ ತಾಪ ತಾಳಲಾರದೆ ಕಿಟ್ ಪಡೆಯಲು ಬಂದಿದ್ದ ಜನ ಸಿಕ್ಕಸಿಕ್ಕ ಕಿಟ್ಗಳನ್ನ ಹೊತ್ತೊಯ್ದ ಘಟನೆ ಹುಣಸೂರು ಪಟ್ಟಣದಲ್ಲಿ ನಡೆದಿದೆ.
![people who carried the kits Can not tolerate sunburn](https://etvbharatimages.akamaized.net/etvbharat/prod-images/kn-mys-9-food-kit-distribution-news-7208092_01052020203006_0105f_1588345206_32.jpg)
ಹುಣಸೂರು ಪಟ್ಟಣದ ಮುನೇಶ್ವರಕಾವಲ್ ಮೈದಾನದಲ್ಲಿ ಲಾಕ್ಡೌನ್ನಿಂದ ಸಂಕಷ್ಟಕ್ಕೊಳಗಾದವರಿಗೆ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಜಿ ಮಂತ್ರಿ ಹೆಚ್ ವಿಶ್ವನಾಥ್ ಹಾಗೂ ಸಿ ಹೆಚ್ ವಿಜಯಶಂಕರ್ ಅವರು ಸಾಂಕೇತಿಕವಾಗಿ ಕಿಟ್ ವಿತರಿಸುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಬಿಸಿಲಿನಲ್ಲಿ ನಿಂತಿದ್ದ ಜನ, ವೇದಿಕೆಗೆ ನುಗ್ಗಿ ತಮಗೆ ಸಿಕ್ಕಸಿಕ್ಕ ಪಡಿತರ ಕಿಟ್ಗಳನ್ನ ತೆಗೆದುಕೊಂಡರು.
![people who carried the kits Can not tolerate sunburn](https://etvbharatimages.akamaized.net/etvbharat/prod-images/kn-mys-9-food-kit-distribution-news-7208092_01052020203006_0105f_1588345206_666.jpg)
ಈ ಸಂದರ್ಭದಲ್ಲಿ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸಪಟ್ಟರು. ಕಾರ್ಯಕ್ರಮದಲ್ಲಿ 200 ಮಂದಿಗೆ ಮಾತ್ರ ಪಡಿತರ ಕಿಟ್ ಹಾಗೂ ತರಕಾರಿ ವಿತರಿಸಲು ಆಯೋಜಿಸಲಾಗಿತ್ತು. ಆದರೆ, ಜನರು ಹೆಚ್ಚಾಗಿ ಬಂದ ಕಾರಣ ಈ ರೀತಿ ಗುಂಪು ಗುಂಪಾಗಿ ಮುಗಿಬಿದ್ದು ಸಿಕ್ಕ ಸಿಕ್ಕ ಕಿಟ್ಗಳನ್ನ ತೆಗೆದಕೊಂಡು ಹೋಗಿದ್ದಾರೆ.