ETV Bharat / state

ಪರೀಕ್ಷೆಗೆ ತಡ... ಅವಸರದಲ್ಲಿ ಬೈಕ್​ ಓಡಿಸಿದ ವಿದ್ಯಾರ್ಥಿ ವಿದ್ಯುತ್​ ಕಂಬಕ್ಕೆ ಡಿಕ್ಕಿ ಹೊಡೆದು ಸಾವು

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ವಿದ್ಯಾರ್ಥಿಗಳ ಬೈಕ್‍. ಘಟನೆಯಿಂದ ಓರ್ವ ಸ್ಥಳದಲ್ಲೇ ಸಾವು. ಮತ್ತೊಬ್ಬನಿಗೆ ಗಾಯ. ಸಂಬಂಧಿಗಳಿಂದ ಬೈಕ್ ಪಡೆದು ಹೊರಟವರು ಆಸ್ಪತ್ರೆಗೆ ದಾಖಲು.

author img

By

Published : Mar 27, 2019, 5:09 PM IST

Updated : Mar 27, 2019, 5:18 PM IST

ಅಪಘಾತವಾದ ಬೈಕ್

ಮೈಸೂರು: ಪರೀಕ್ಷೆ ಬರೆಯಲು ಅವಸರವಾಗಿ ಇಬ್ಬರು ವಿದ್ಯಾರ್ಥಿಗಳು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಗಾಯಗೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

accident
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ

ತಾಲೂಕಿನ ಹಗಿನವಾಳು ಗ್ರಾಮದ ಮಣಿಕಂಠ(16) ಮೃತ. ಆತನ ಸ್ನೇಹಿತ ದರ್ಶನ್(16) ಗಾಯಗೊಂಡಿದ್ದಾನೆ.

ಇಬ್ಬರು ಯುವಕರು ಹಗಿನವಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದು, ಕಸುವಿನಹಳ್ಳಿ ಪ್ರೌಢಶಾಲೆಯಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಸಮಯ ಮೀರುತ್ತಿದೆ ಎಂದು ಗಾಬರಿಗೊಂಡ ಇಬ್ಬರು ಸಂಬಂಧಿಗಳಿಂದ ಬೈಕ್ ಪಡೆದು ಹೊರಟ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಘಟನೆ ನಡೆದ ಕೂಡಲೇ ಸಾರ್ವಜನಿಕರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೈಸೂರು: ಪರೀಕ್ಷೆ ಬರೆಯಲು ಅವಸರವಾಗಿ ಇಬ್ಬರು ವಿದ್ಯಾರ್ಥಿಗಳು ಬೈಕ್‍ನಲ್ಲಿ ಹೋಗುತ್ತಿದ್ದ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೋರ್ವ ಗಾಯಗೊಂಡಿರುವ ಘಟನೆ ನಂಜನಗೂಡಿನಲ್ಲಿ ನಡೆದಿದೆ.

accident
ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿ

ತಾಲೂಕಿನ ಹಗಿನವಾಳು ಗ್ರಾಮದ ಮಣಿಕಂಠ(16) ಮೃತ. ಆತನ ಸ್ನೇಹಿತ ದರ್ಶನ್(16) ಗಾಯಗೊಂಡಿದ್ದಾನೆ.

ಇಬ್ಬರು ಯುವಕರು ಹಗಿನವಾಳು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದು, ಕಸುವಿನಹಳ್ಳಿ ಪ್ರೌಢಶಾಲೆಯಲ್ಲಿ ಪರೀಕ್ಷೆ ನಿಗದಿಯಾಗಿತ್ತು. ಆದರೆ ಸಮಯ ಮೀರುತ್ತಿದೆ ಎಂದು ಗಾಬರಿಗೊಂಡ ಇಬ್ಬರು ಸಂಬಂಧಿಗಳಿಂದ ಬೈಕ್ ಪಡೆದು ಹೊರಟ ಸಂದರ್ಭದಲ್ಲಿ ಈ ಅವಘಡ ನಡೆದಿದೆ. ಘಟನೆ ನಡೆದ ಕೂಡಲೇ ಸಾರ್ವಜನಿಕರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

sample description
Last Updated : Mar 27, 2019, 5:18 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.