ETV Bharat / state

ರಸ್ತೆಯಲ್ಲೇ ಒಕ್ಕಣೆ... ವಾಹನ ಸವಾರರಿಗೆ ತೊಂದರೆ - okkane in road

ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿರುವುದರಿಂದ ವಾಹನ ಸವಾರರು ಇನ್ನಿಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.

ರಸ್ತೆಯಲ್ಲಿ ಒಕ್ಕಣೆ.. ವಾಹನ ಸವಾರರಿಗೆ ಸಂಕಷ್ಟ
ರಸ್ತೆಯಲ್ಲಿ ಒಕ್ಕಣೆ.. ವಾಹನ ಸವಾರರಿಗೆ ಸಂಕಷ್ಟ
author img

By

Published : Dec 18, 2019, 6:36 PM IST

ಮೈಸೂರು: ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತದ ಒಕ್ಕಣೆ ಜೊರಾಗಿಯೇ ನಡೆಯುತ್ತಿದೆ. ದವಸ ಧಾನ್ಯಗಳನ್ನು ಮನೆಗೆ ಕೊಂಡೊಯ್ಯಲು ರೈತರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ರಸ್ತೆಯಲ್ಲಿ ಒಕ್ಕಣೆ.. ವಾಹನ ಸವಾರರಿಗೆ ಸಂಕಷ್ಟ

ಧನುರ್ಮಾಸ ಬಂತೆಂದರೆ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ತಾವು ವರ್ಷದಿಂದ ಹೊಲಗಲ್ಲಿ ಬಂದಂತಹ ಫಸನ್ನು ಸಂಕ್ರಾಂತಿ ಹಬ್ಬದೊಳಗೆ ಮನೆಗೆ ತುಂಬಿಸಿಕೊಂಡು ಸಂತಸ ಪಡುತ್ತಾರೆ. ಈ ನಡುವೆ ಡಿಸೆಂಬರ್​ನಲ್ಲಿ ಕೊಯ್ಲು ಮಾಡಿದ ರಾಗಿ, ಭತ್ತ, ಕಾಳುಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕಾಗಿರುವುದರಿಂದ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೆ. ಇದರಿಂದ ರಸ್ತೆ ಮೇಲೆ ದವಸ ಧಾನ್ಯಗಳನ್ನು ಹರಡುವುದರಿಂದ ಬಸ್, ಕಾರು ಹಾಗೂ ಬೈಕ್ ಸವಾರರಿಗೆ ರಸ್ತೆಗಳಲ್ಲಿ ಹೋಗುವುದು ಕಷ್ಟವಾಗ್ತಿದೆ ಅನ್ನೋ ಆರೋಪಗಳು ವ್ಯಕ್ತವಾಗಿವೆ.

ಜಿಲ್ಲಾ ಪಂಚಾಯತ್​ ವತಿಯಿಂದ ಒಕ್ಕಣೆ ಕೇಂದ್ರಗಳನ್ನು ತೆರೆದಿದ್ದಾರೆ. ಆದ್ರೆ ಅಲ್ಲಿಗೆ ಹೋಗದ ರೈತರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ಜಿ.ಪಂ‌ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಿ ಅನಾಹುತ ತಪ್ಪಿಸಬೇಕೆಂಬುದು ವಾಹನ ಸವಾರರ ಮಾತಾಗಿದೆ.

ಮೈಸೂರು: ಜಿಲ್ಲೆಯಲ್ಲಿ ರಾಗಿ ಹಾಗೂ ಭತ್ತದ ಒಕ್ಕಣೆ ಜೊರಾಗಿಯೇ ನಡೆಯುತ್ತಿದೆ. ದವಸ ಧಾನ್ಯಗಳನ್ನು ಮನೆಗೆ ಕೊಂಡೊಯ್ಯಲು ರೈತರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರಿಂದ ವಾಹನ ಸವಾರರು ಪರದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ರಸ್ತೆಯಲ್ಲಿ ಒಕ್ಕಣೆ.. ವಾಹನ ಸವಾರರಿಗೆ ಸಂಕಷ್ಟ

ಧನುರ್ಮಾಸ ಬಂತೆಂದರೆ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ತಾವು ವರ್ಷದಿಂದ ಹೊಲಗಲ್ಲಿ ಬಂದಂತಹ ಫಸನ್ನು ಸಂಕ್ರಾಂತಿ ಹಬ್ಬದೊಳಗೆ ಮನೆಗೆ ತುಂಬಿಸಿಕೊಂಡು ಸಂತಸ ಪಡುತ್ತಾರೆ. ಈ ನಡುವೆ ಡಿಸೆಂಬರ್​ನಲ್ಲಿ ಕೊಯ್ಲು ಮಾಡಿದ ರಾಗಿ, ಭತ್ತ, ಕಾಳುಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕಾಗಿರುವುದರಿಂದ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಾರೆ. ಇದರಿಂದ ರಸ್ತೆ ಮೇಲೆ ದವಸ ಧಾನ್ಯಗಳನ್ನು ಹರಡುವುದರಿಂದ ಬಸ್, ಕಾರು ಹಾಗೂ ಬೈಕ್ ಸವಾರರಿಗೆ ರಸ್ತೆಗಳಲ್ಲಿ ಹೋಗುವುದು ಕಷ್ಟವಾಗ್ತಿದೆ ಅನ್ನೋ ಆರೋಪಗಳು ವ್ಯಕ್ತವಾಗಿವೆ.

ಜಿಲ್ಲಾ ಪಂಚಾಯತ್​ ವತಿಯಿಂದ ಒಕ್ಕಣೆ ಕೇಂದ್ರಗಳನ್ನು ತೆರೆದಿದ್ದಾರೆ. ಆದ್ರೆ ಅಲ್ಲಿಗೆ ಹೋಗದ ರೈತರು ರಸ್ತೆಯಲ್ಲಿಯೇ ಒಕ್ಕಣೆ ಮಾಡುತ್ತಿದ್ದಾರೆ. ಇದರ ಬಗ್ಗೆ ಜಿ.ಪಂ‌ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಿ ಅನಾಹುತ ತಪ್ಪಿಸಬೇಕೆಂಬುದು ವಾಹನ ಸವಾರರ ಮಾತಾಗಿದೆ.

Intro:ರಸ್ತೆಯಲ್ಲಿ ಒಕ್ಕಣೆ


Body:ರಸ್ತೆಯಲ್ಲಿ ಒಕ್ಕಣೆ


Conclusion:ರೈತರಿಗೆ 'ಒಕ್ಕಣೆ' ಶ್ರಮ, ರಸ್ತೆಗಳಲ್ಲಿ‌ ಸಂಚಾರ ಮಾಡುವುದೇ ಪರಿಶ್ರಮ
ಮೈಸೂರು: ಧವಸ ಧಾನ್ಯಗಳನ್ನು ಮನೆಗೆ ಸೇರಿಸಿಕೊಳ್ಳಬೇಕು ಎಂದು ತಾವು ಬೆಳೆದಿರುವ ಧವಸ ಧಾನ್ಯಗಳನ್ನು ಮೊದಲಿಗೆ ಒಕ್ಕಣೆ ಮಾಡಲು 'ಶ್ರಮ' ಹಾಕುತ್ತಿದ್ದರೆ,ಇತ್ತ ರಸ್ತೆಯಲ್ಲಿ ವಾಹನಗಳನ್ನು ಸಂಚಾರ ಮಾಡುವುದೇ 'ಪರಿಶ್ರಮ' ವಾಗಿದೆ‌‌.
ಹೌದು, ಧನುರ್ಮಾಸ ಬಂತೆಂದರೆ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ. ತಾವು ವರ್ಷದಿಂದ ಜಮೀನು ಹಾಗೂ ಹೊಲಗಳಲ್ಲಿ ದುಡಿದ ಶ್ರಮದ ಪ್ರತಿಫಲವನ್ನು 'ಸಂಕ್ರಾಂತಿ'ಗೆ ಹಬ್ಬದೊಳಗೆ ಮನೆ ತುಂಬಿಸಿಕೊಂಡು ಸಂತಸ ಪಡುತ್ತಾರೆ.
ಈ ನಡುವೆ ಡಿಸೆಂಬರ್ ಮಾಸದಲ್ಲಿ ತಾವು ಕೊಯ್ಲು ಮಾಡಿದ ರಾಗಿ, ಭತ್ತ, ಕಾಳುಗಳನ್ನು ಚೆನ್ನಾಗಿ ಒಣಗಿಸಿಕೊಳ್ಳಬೇಕಾಗಿರುವುದರಿಂದ ರಸ್ತೆಯಲ್ಲಿ 'ಒಕ್ಕಣೆ'ಮಾಡುತ್ತಾರೆ.ಇದರಿಂದ ರಸ್ತೆ ಮೇಲೆ ಧವಸ ಧಾನ್ಯಗಳನ್ನು ಹರಡುವುದರಿಂದ ಬಸ್, ಕಾರು, ಬೈಕ್ ಸವಾರರಿಗೆ ಒಕ್ಕಣೆ ಇರುವ ರಸ್ತೆಗಳಲ್ಲಿ ಹೋಗುವುದು ಕಷ್ಟವಾಗಲಿದೆ.
ಧವಸ ಧಾನ್ಯಗಳ ಹುಲ್ಲಿನ ಕಿಡಿ ವಾಹನಗಳಿಗೆ ತಗಲಿದರೆ ಏನು ಮಾಡುವುದು ಎಂಬ ಚಿಂತ ಬಸ್,ಲಾರಿ, ಕಾರುಗಳ ಸವಾರರಿಗೆ ಕಾಡಿದರೆ, ಬೈಕ್ ಸವಾರರು ಎಲ್ಲಿ‌ ಸ್ಕಿಡ್ ಆಗಿ ಬೀಳುತ್ತೀನಿ ಎಂಬ ಆತಂಕದಿಂದಲ್ಲೇ ಹೋಗುತ್ತಾರೆ.
ನಂಜನಗೂಡು ಹುಲ್ಲಹಳ್ಳಿ ಮಾರ್ಗ ಮಧ್ಯ ಸಾರಿಗೆ ಬಸ್ ಒಕ್ಕಣೆ ಹಾಕಿದ ರಸ್ತೆಯಲ್ಲಿ ಸಿಲುಕಿ ಮುಂದೆ ಹೋಗಲು ಸಾಕಷ್ಟು ಸಮಯ ತೆಗೆದುಕೊಂಡಿತ್ತು. ಜಿಲ್ಲಾ ಪಂಚಾಯಿತಿ ವತಿಯಿಂದ ಒಕ್ಕಣೆ ಕೇಂದ್ರಗಳನ್ನು ತೆರೆದಿದ್ದರು. ಅಲ್ಲಿಗೆ ಹೋಗಾದ ರೈತರು ರಸ್ತೆಯಲ್ಲಿಯೇ ಒಕ್ಕಣೆ ನಡೆಸುತ್ತಿದ್ದಾರೆ.
ಇದರ ಬಗ್ಗೆ ಜಿಪಂ‌ ಅಧಿಕಾರಿಗಳು ರೈತರಿಗೆ ಅರಿವು ಮೂಡಿಸಿ ಅನಾಹುತ ತಪ್ಪಿಸಬೇಕೆಂಬುದು ವಾಹನ ಸವಾರರ ಮಾತಾಗಿದೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.