ಮೈಸೂರು : ಕೆಆರ್ಎಸ್ ಹಿಂಭಾಗದಲ್ಲಿ ಡಿಸ್ನಿಲ್ಯಾಂಡ್ ಯೋಜನೆ ಬೇಡ. ಈ ಯೋಜನೆಯನ್ನು ಜಾರಿಗೆ ತರಲು ಹೋದರೆ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ ಸಂಸ್ಥೆ ಕಾನೂನು ಮೊರೆ ಹೋಗುತ್ತದೆ ಎಂದು ಸಂಸ್ಥೆ ಸಂಚಾಲಕ ಎಂ.ಲಕ್ಷ್ಮಣ್ ಸರ್ಕಾರಕ್ಕೆ ಎಚ್ಚರಿಸಿದರು.
ಓದಿ: ವಿಜಯ್ ಹಜಾರೆ ಟ್ರೋಫಿ ಫೈನಲ್: ಬಲಿಷ್ಠ ಮುಂಬೈ ಎದರಿಸಲು ಯುಪಿ ರಣತಂತ್ರ
ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ನ ಸಂಚಾಲಕ ಎಂ.ಲಕ್ಷ್ಮಣ್ ಮಾತನಾಡಿ, ಈ ಯೋಜನೆಗೆ 2 ಸಾವಿರ ಕೋಟಿ ಪ್ರಾಜೆಕ್ಟ್ ತಯಾರಿಸಲಾಗಿದೆ. 5 ಖಾಸಗಿ ಕಂಪನಿಗಳಿಗೆ ನೀಡಲು ತಿರ್ಮಾನಿಸಲಾಗಿದೆ.
ಈ ಯೋಜನೆಗೆ ಸರ್ಕಾರದ 331 ಎಕರೆ ಸರ್ಕಾರಿ ಜಮೀನು ಹಾಗೂ ರೈತರಿಂದ 400 ಎಕರೆ ಭೂಮಿಯನ್ನು ಸ್ವಾಧೀನ ಪಡೆಸಿಕೊಂಡು ಈ ಯೋಜನೆ ಮಾಡಲು ಹೊರಟಿದೆ.
ಆದರೆ, ಈ ಯೋಜನೆ ಮಾಡಿದರೆ ಕೆಆರ್ಎಸ್ ಡ್ಯಾಮ್ಗೆ ಅಪಾಯವಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ನದಿ ಪಾತ್ರದಲ್ಲಿ ಮಾಡಿದರೆ ಒಳ್ಳೆಯದು, ಅದನ್ನು ಬಿಟ್ಟು ಡ್ಯಾಮ್ ಹಿಂಭಾಗದಲ್ಲಿ ಮಾಡಿದರೆ ಅಪಾಯ. ಇಷ್ಟರ ಮೇಲೂ ಡಿಸ್ನಿ ಲ್ಯಾಂಡ್ ಯೋಜನೆ ಕೈಗೆತ್ತಿಕೊಂಡ್ರೇ, ಈ ಬಗ್ಗೆ ಕೋರ್ಟ್ ಮೊರೆ ಹೋಗುವುದಾಗಿ ಎಂ.ಲಕ್ಷ್ಮಣ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.