ETV Bharat / state

ಜುಬಿಲೆಂಟ್​ ಪ್ರಕರಣ ಸಿಬಿಐ ಅಲ್ಲ, ಎಫ್​ಬಿಐಗೆ ಬೇಕಾದರೂ ವಹಿಸಲಿ: ಶಾಸಕ ಹರ್ಷವರ್ಧನ್​​

author img

By

Published : May 23, 2020, 1:16 PM IST

ಜುಬಿಲೆಂಟ್​ ಕಾರ್ಖಾನೆಯ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಜಿ ಸಂಸದ ಆರ್​.ಧ್ರುವನಾರಾಯಣ್​ ಆಗ್ರಹಿಸಿದ್ದು, ಎಫ್​ಬಿಐಗೆ ಬೇಕಾದರೂ ವಹಿಸಿಕೊಳ್ಳಲಿ ಎಂದು ಶಾಸಕ ಹರ್ಷವರ್ಧನ್​ ಹೇಳಿದ್ದಾರೆ.

MLA Harshavardhan
ಶಾಸಕ ಹರ್ಷವರ್ಧನ್ ಪ್ರತಿಕ್ರಿಯೆ

ಮೈಸೂರು: ಜುಬಿಲೆಂಟ್​​ ಪ್ರಕರಣವನ್ನು ಸಿಬಿಐಗೆ ಅಲ್ಲ, ಎಫ್‌ಬಿಐಗೆ ಬೇಕಾದರೂ ವಹಿಸಲಿ ಎಂದು ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಸಂಸದ ಆರ್.ಧ್ರುವನಾರಾಯಣ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಶಾಸಕ ಹರ್ಷವರ್ಧನ್ ಪ್ರತಿಕ್ರಿಯೆ

ಮಾಜಿ ಸಂಸದ ಆರ್.ಧ್ರುವನಾರಾಯಣ ಮೇ 1ರಂದು ಸುದ್ದಿಗೋಷ್ಠಿ ನಡೆಸಿ, ಜುಬಿಲೆಂಟ್ ಪ್ರಕರಣದಲ್ಲಿ ಬಿಜೆಪಿ ಜನಪ್ರತಿನಿಧಿಗಳ ಹೇಳಿಕೆ ಭಿನ್ನವಾಗಿದೆ. ಸತ್ಯ ಹೊರ ಬರಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಹರ್ಷವರ್ಧನ್, ಸಿಬಿಐಗೆ ಅಲ್ಲ, ಎಫ್‌ಬಿಐ(ಫೆಡರೇಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ಗೆ ತನಿಖೆ ಮಾಡುವಂತೆ ಅವರು ಕೊಡಲೇಬೇಕು ಎಂದು ಗೇಲಿ ಮಾಡಿದರು.

ಕೊರೊನಾ ವೈರಸ್​ನಿಂದಾಗಿ ತೀವ್ರ ಪೆಟ್ಟು ಬಿದ್ದಿದ್ದು, ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಹೊರ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು. ಮುಂದಿನ ದಿನಗಳಲ್ಲಿ ನಂಜನಗೂಡು ಕೈಗಾರಿಕೆ ವಲಯಗಳಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳಿವೆ ಎಂದು ಇದೇ ವೇಳೆ ಹೇಳಿದರು.

ಮೈಸೂರು: ಜುಬಿಲೆಂಟ್​​ ಪ್ರಕರಣವನ್ನು ಸಿಬಿಐಗೆ ಅಲ್ಲ, ಎಫ್‌ಬಿಐಗೆ ಬೇಕಾದರೂ ವಹಿಸಲಿ ಎಂದು ನಂಜನಗೂಡು ಶಾಸಕ ಹರ್ಷವರ್ಧನ್, ಮಾಜಿ ಸಂಸದ ಆರ್.ಧ್ರುವನಾರಾಯಣ ವಿರುದ್ಧ ವ್ಯಂಗ್ಯವಾಡಿದ್ದಾರೆ.

ಶಾಸಕ ಹರ್ಷವರ್ಧನ್ ಪ್ರತಿಕ್ರಿಯೆ

ಮಾಜಿ ಸಂಸದ ಆರ್.ಧ್ರುವನಾರಾಯಣ ಮೇ 1ರಂದು ಸುದ್ದಿಗೋಷ್ಠಿ ನಡೆಸಿ, ಜುಬಿಲೆಂಟ್ ಪ್ರಕರಣದಲ್ಲಿ ಬಿಜೆಪಿ ಜನಪ್ರತಿನಿಧಿಗಳ ಹೇಳಿಕೆ ಭಿನ್ನವಾಗಿದೆ. ಸತ್ಯ ಹೊರ ಬರಬೇಕಾದರೆ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದ್ದರು. ಈ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಾಸಕ ಹರ್ಷವರ್ಧನ್, ಸಿಬಿಐಗೆ ಅಲ್ಲ, ಎಫ್‌ಬಿಐ(ಫೆಡರೇಷನ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್)ಗೆ ತನಿಖೆ ಮಾಡುವಂತೆ ಅವರು ಕೊಡಲೇಬೇಕು ಎಂದು ಗೇಲಿ ಮಾಡಿದರು.

ಕೊರೊನಾ ವೈರಸ್​ನಿಂದಾಗಿ ತೀವ್ರ ಪೆಟ್ಟು ಬಿದ್ದಿದ್ದು, ಎಲ್ಲಾ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ಹೊರ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು. ಮುಂದಿನ ದಿನಗಳಲ್ಲಿ ನಂಜನಗೂಡು ಕೈಗಾರಿಕೆ ವಲಯಗಳಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳಿವೆ ಎಂದು ಇದೇ ವೇಳೆ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.