ETV Bharat / state

ಹಣ ಸಂಪಾದನೆಗೆಂದು ಮನೆ ಬಿಟ್ಟ ಬಂದ ವ್ಯಕ್ತಿಗೆ ತವರು ಸೇರಲು ನೆರವಾದ ಎನ್​ಜಿಒ ಅಧಿಕಾರಿಗಳು!

author img

By

Published : May 27, 2020, 12:19 AM IST

Updated : May 27, 2020, 1:05 AM IST

ಕಳೆದ 3 ವರ್ಷಗಳ ಹಿಂದೆ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ತಮ್ಮ ಕಿರಿಯ ಮಗನ ಮದುವೆಗೆ ಹಣ ಸಂಪಾದಿಸಲೆಂದು ಬಂದು ಮೈಸೂರಿನಲ್ಲಿ ಸಿಲುಕಿಕೊಂಡಿದ್ದರು. ಈ ವ್ಯಕ್ತಿಯ ಸಹಾಯಕ್ಕೆ ಬಂದ ಎನ್​ಜಿಒವೊಂದು ಪಾಲಿಕೆ, ಪೊಲೀಸ್​ ಅಧಿಕಾರಿಗಳ ನೆರವಿನೊಂದಿಗೆ ಆತನ ಕುಟುಂಬವನ್ನು ಕಂಡು ಹಿಡಿದು ತವರು ಸೇರಲು ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದೆ.

NGO officers to helped a Uttar pradesh man
ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಎನ್​ಜಿಒ ಸ್ಪಂದನೆ

ಮೈಸೂರು: ಮೂರು ವರ್ಷಗಳ ಹಿಂದೆ ಮಗನ ಮದುವೆಗೆ ಹಣ ಸಂಪಾದನೆ ಮಾಡಬೇಕೆಂದು ಮನೆ ಬಿಟ್ಟು ಬಂದ ವ್ಯಕ್ತಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಸಂಕಷ್ಟದಲ್ಲಿದ್ದ ಈ ವ್ಯಕ್ತಿಗೆ ನಗರದ ಎನ್​ಜಿಒವೊಂದು ಸ್ಪಂದಿಸಿದೆ.

ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳ ಸಹಾಯ ಪಡೆದು ಎನ್​ಜಿಓ ಅಧಿಕಾರಿಗಳು ವ್ಯಕ್ತಿಯ ಕುಟುಂಬವನ್ನು ಹುಡುಕಿ, ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಉತ್ತರ ಪ್ರದೇಶದ ಸಹರಾನ್​ಪುರ್ ಜಿಲ್ಲೆಯ ರಾಜುಪುರ್ ಗ್ರಾಮ ಕರಮ್ ಸಿಂಗ್ ಎಂಬಾತ ಕಳೆದ 3 ವರ್ಷಗಳ ಹಿಂದೆ ತಮ್ಮ ಕಿರಿಯ ಮಗನ ಮದುವೆಗೆ ಹಣ ಸಂಪಾದನೆ ಮಾಡಲೆಂದು ಹೊರಟಿದ್ದರು. ಆದರೆ ರೈಲಿನಲ್ಲಿ ಸಂಚರಿಸುತ್ತಿದ್ದ ಇವರು ದಾರಿ ತಪ್ಪಿ ಮೈಸೂರಿಗೆ ಬಂದಿದ್ದರು. ಭಾಷೆ ಸಮಸ್ಯೆಯಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.

ಲಾಕ್​​ಡೌನ್ ಸಮಯದಲ್ಲಿ ರಸ್ತೆ ಪಕ್ಕ ವಾಸವಾಗಿದ್ದ ವೃದ್ಧನನ್ನು ಕಂಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು, ಖಾಸಗಿ ಎಸ್​ಜಿಓಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿ ಕರಮ್​ ಸಿಂಗ್​ ಅವರನ್ನು ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.

ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಎನ್​ಜಿಒ ಸ್ಪಂದನೆ

ಈ ವೇಳೆ ಕರಮ್​ ಸಿಂಗ್​ ಹಿಂದಿ ಚಿತ್ರ ಗೀತೆಗಳನ್ನು ಹಾಡುತ್ತಿರುವುದನ್ನು ಆಲಿಸಿದ ಸಂಘಟಕರು, ಆತನನ್ನು ವಿಚಾರಿಸಿದಾಗ ಉತ್ತರ ಪ್ರದೇಶದ ಸಹರಾನ್​ಪುರ್ ಜಿಲ್ಲೆಯ ರಾಜುಪುರ್ ಗ್ರಾಮದವರು ಎಂಬ ವಿಚಾರ ತಿಳಿದು ಅವರ ಕುಟುಂಬದ ಕುರಿತು ಮಾಹಿತಿ ಕಲೆ ಹಾಕಿದರು.

ನೆರವಿಗೆ ಬಂದ ಪೊಲೀಸರು:

ಬಳಿಕ ನಗರದ ದೇವರಾಜ್​ ಅರಸು ಪೊಲೀಸರ ಸಹಕಾರದಿಂದ ಉತ್ತರ ಪ್ರದೇಶದ ರಾಜುಪುರ್​ ಪೊಲೀಸ್ ಠಾಣೆ​ಗೆ ಈತನ‌ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಈ‌ ಮನವಿಗೆ ಸ್ಪಂದಿಸಿದ ಅಲ್ಲಿನ ಪೊಲೀಸರು, ಕರಮ್​ಸಿಂಗ್​ ಅವರ ಗ್ರಾಮಕ್ಕೆ ಹೋಗಿ ಈತನ ಕುಟುಂಬದವರ ಕುರಿತಾದ ಮಾಹಿತಿ ಕಲೆ ಹಾಕಿ ಮಕ್ಕಳನ್ನು ಪತ್ತೆ ಹಚ್ಚಿದರು. ನಂತರ ಅವರ ಮಗನ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿಸಿದಾಗ ಕರಮ್ ಸಿಂಗ್​ರನ್ನು ಅವರು ಮಗನ ಗುರುತು ಹಿಡಿದರು.

ಕಳೆದ ಮೂರು ವರ್ಷಗಳಿಂದ ಮೈಸೂರಲ್ಲಿದ್ದ ಕರಮ್​ ಸಿಂಗ್​ ತಮ್ಮ ಕುಟುಂಬದವರ ನೆನೆಪಾಗಿದ್ದು, ತಂದೆಯನ್ನು ಕಂಡು ಮಕ್ಕಳು ಸಂತಸಗೊಂಡರು. ಇನ್ನು ಕರಮ್​ ಸಿಂಗ್​ ಜೂನ್​. 01 ರಂದು ರೈಲಿನ ಮೂಲಕ ತವರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎನ್​ಜಿಒ ಮುಖ್ಯಸ್ಥ ಎಂ.ಪಿ. ವರ್ಷ ಈಟಿವಿ ಭಾರತ್​ಗೆ ತಿಳಿಸಿದರು.

ಮೈಸೂರು: ಮೂರು ವರ್ಷಗಳ ಹಿಂದೆ ಮಗನ ಮದುವೆಗೆ ಹಣ ಸಂಪಾದನೆ ಮಾಡಬೇಕೆಂದು ಮನೆ ಬಿಟ್ಟು ಬಂದ ವ್ಯಕ್ತಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಸಂಕಷ್ಟದಲ್ಲಿದ್ದ ಈ ವ್ಯಕ್ತಿಗೆ ನಗರದ ಎನ್​ಜಿಒವೊಂದು ಸ್ಪಂದಿಸಿದೆ.

ಇಲ್ಲಿನ ಮಹಾನಗರ ಪಾಲಿಕೆ ಅಧಿಕಾರಿಗಳ ಸಹಾಯ ಪಡೆದು ಎನ್​ಜಿಓ ಅಧಿಕಾರಿಗಳು ವ್ಯಕ್ತಿಯ ಕುಟುಂಬವನ್ನು ಹುಡುಕಿ, ತವರಿಗೆ ಕಳುಹಿಸುವ ವ್ಯವಸ್ಥೆ ಮಾಡಿದ್ದಾರೆ.

ಉತ್ತರ ಪ್ರದೇಶದ ಸಹರಾನ್​ಪುರ್ ಜಿಲ್ಲೆಯ ರಾಜುಪುರ್ ಗ್ರಾಮ ಕರಮ್ ಸಿಂಗ್ ಎಂಬಾತ ಕಳೆದ 3 ವರ್ಷಗಳ ಹಿಂದೆ ತಮ್ಮ ಕಿರಿಯ ಮಗನ ಮದುವೆಗೆ ಹಣ ಸಂಪಾದನೆ ಮಾಡಲೆಂದು ಹೊರಟಿದ್ದರು. ಆದರೆ ರೈಲಿನಲ್ಲಿ ಸಂಚರಿಸುತ್ತಿದ್ದ ಇವರು ದಾರಿ ತಪ್ಪಿ ಮೈಸೂರಿಗೆ ಬಂದಿದ್ದರು. ಭಾಷೆ ಸಮಸ್ಯೆಯಿಂದ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು.

ಲಾಕ್​​ಡೌನ್ ಸಮಯದಲ್ಲಿ ರಸ್ತೆ ಪಕ್ಕ ವಾಸವಾಗಿದ್ದ ವೃದ್ಧನನ್ನು ಕಂಡ ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು, ಖಾಸಗಿ ಎಸ್​ಜಿಓಗೆ ಕರೆದುಕೊಂಡು ಹೋಗಿ ಆರೋಗ್ಯ ತಪಾಸಣೆ ನಡೆಸಿ ಕರಮ್​ ಸಿಂಗ್​ ಅವರನ್ನು ವಸತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದ್ದರು.

ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಎನ್​ಜಿಒ ಸ್ಪಂದನೆ

ಈ ವೇಳೆ ಕರಮ್​ ಸಿಂಗ್​ ಹಿಂದಿ ಚಿತ್ರ ಗೀತೆಗಳನ್ನು ಹಾಡುತ್ತಿರುವುದನ್ನು ಆಲಿಸಿದ ಸಂಘಟಕರು, ಆತನನ್ನು ವಿಚಾರಿಸಿದಾಗ ಉತ್ತರ ಪ್ರದೇಶದ ಸಹರಾನ್​ಪುರ್ ಜಿಲ್ಲೆಯ ರಾಜುಪುರ್ ಗ್ರಾಮದವರು ಎಂಬ ವಿಚಾರ ತಿಳಿದು ಅವರ ಕುಟುಂಬದ ಕುರಿತು ಮಾಹಿತಿ ಕಲೆ ಹಾಕಿದರು.

ನೆರವಿಗೆ ಬಂದ ಪೊಲೀಸರು:

ಬಳಿಕ ನಗರದ ದೇವರಾಜ್​ ಅರಸು ಪೊಲೀಸರ ಸಹಕಾರದಿಂದ ಉತ್ತರ ಪ್ರದೇಶದ ರಾಜುಪುರ್​ ಪೊಲೀಸ್ ಠಾಣೆ​ಗೆ ಈತನ‌ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಈ‌ ಮನವಿಗೆ ಸ್ಪಂದಿಸಿದ ಅಲ್ಲಿನ ಪೊಲೀಸರು, ಕರಮ್​ಸಿಂಗ್​ ಅವರ ಗ್ರಾಮಕ್ಕೆ ಹೋಗಿ ಈತನ ಕುಟುಂಬದವರ ಕುರಿತಾದ ಮಾಹಿತಿ ಕಲೆ ಹಾಕಿ ಮಕ್ಕಳನ್ನು ಪತ್ತೆ ಹಚ್ಚಿದರು. ನಂತರ ಅವರ ಮಗನ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿಸಿದಾಗ ಕರಮ್ ಸಿಂಗ್​ರನ್ನು ಅವರು ಮಗನ ಗುರುತು ಹಿಡಿದರು.

ಕಳೆದ ಮೂರು ವರ್ಷಗಳಿಂದ ಮೈಸೂರಲ್ಲಿದ್ದ ಕರಮ್​ ಸಿಂಗ್​ ತಮ್ಮ ಕುಟುಂಬದವರ ನೆನೆಪಾಗಿದ್ದು, ತಂದೆಯನ್ನು ಕಂಡು ಮಕ್ಕಳು ಸಂತಸಗೊಂಡರು. ಇನ್ನು ಕರಮ್​ ಸಿಂಗ್​ ಜೂನ್​. 01 ರಂದು ರೈಲಿನ ಮೂಲಕ ತವರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಎನ್​ಜಿಒ ಮುಖ್ಯಸ್ಥ ಎಂ.ಪಿ. ವರ್ಷ ಈಟಿವಿ ಭಾರತ್​ಗೆ ತಿಳಿಸಿದರು.

Last Updated : May 27, 2020, 1:05 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.