ETV Bharat / state

ಲಾಕ್​​​ಡೌನ್​ ಮುಂದುವರೆಸುವುದು ಸರಿಯಲ್ಲ: ಮೈಸೂರಿನಲ್ಲಿ ವೈದ್ಯ ಅಭಿಮತ - Mysore doctor reaction about lock-down

ಲಾಕ್​​​ಡೌನ್​ ಮುಂದುವರೆಸಿದರೆ ಏನಾಗುತ್ತದೆ ಎಂದುಬುದರ ಬಗ್ಗೆ ಮೈಸೂರಿನಲ್ಲಿ ವೈದ್ಯರೊಬ್ಬರು ಏನು ಹೇಳಿದ್ದಾರೆ ಗೊತ್ತಾ?

Mysore doctor reaction about lock-down continue
ಹಿರಿಯ ವೈದ್ಯ ಡಾ.ಯೋಗಣ್ಣ
author img

By

Published : Apr 27, 2020, 4:39 PM IST

ಮೈಸೂರು: ಕೊರೊನಾ ವೈರಸ್​ ಒಂದೆರಡು ತಿಂಗಳಿಗೆ ನಾಶವಾಗುವುದಿಲ್ಲ. ಇದು ನಮ್ಮ ಜೊತೆ ಒಂದೆರಡು ವರ್ಷ ಇರಬಹುದು. ಇದನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೊರೊನಾ ವೈರಸ್ ಜೊತೆ ಬದುಕುವ ಪರ್ಯಾಯ ಮಾರ್ಗವನ್ನು ಕಂಡುಹಿಡಿಯಬೇಕೆಂದು ಹಿರಿಯ ವೈದ್ಯ ಡಾ. ಯೋಗಣ್ಣ ಹೇಳಿದರು.

ನಗರದಲ್ಲಿ ಲಾಕ್​ಡೌನ್​ ಹೇರಿಕೆ ಹಾಗೂ ಈ ವೈರಾಣು ಹರಡುವಿಕೆ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕನ್ನು ಹೋಗಲಾಡಿಸಲು 2 ತಿಂಗಳು ಲಾಕ್​​ಡೌನ್ ಮಾಡಿದ್ದು ಸರಿ. ಆದರೆ, ಲಾಕ್​​ಡೌನ್ ವಿಸ್ತರಿಸಿದರೆ ತೊಂದರೆ ಹೆಚ್ಚು. ಏಕೆಂದರೆ ಸಂಘ ಜೀವಿಯಾದ ಮನುಷ್ಯ ಯಾವಾಗಲೂ ಕ್ರಿಯಾಶೀಲನಾಗಲು ಇಚ್ಛಿಸುತ್ತಾನೆ. ಆದರೆ, ಮನೆಯಲ್ಲಿರುವುದರಿಂದ ಅವನ ಮನಸ್ಸಿನಲ್ಲಿ ಆತಂಕದ ಭಾವನೆಗಳು ಶುರುವಾಗುತ್ತವೆ. ಅದು ಕೊರೊನಾಕ್ಕಿಂತ ಅಪಾಯವಾದದ್ದು.

ಹಿರಿಯ ವೈದ್ಯ ಡಾ. ಯೋಗಣ್ಣ

ಒಂದೆರಡು ತಿಂಗಳಿಗೆ ಇದು ನಾಶವಾಗುತ್ತದೆ ಎಂದು ಅಂದುಕೊಂಡಿದ್ದರೆ ಅದು ನಮ್ಮ ಭ್ರಮೆ. ಇದು ಒಂದೆರಡು ವರ್ಷಗಳವರೆಗೂ ಇರಬಹುದು. ಈ ವೈರಸ್​​​​​ ಸಂಪೂರ್ಣವಾಗಿ ನಾಶವಾಗುವುದಿಲ್ಲ. ಹಾಗಾಗಿ ಸರ್ಕಾರ ಮತ್ತು ತಜ್ಞರು ಕೊರೊನಾ ಜೊತೆ ಬದುಕುವ ಪರ್ಯಾಯ ಮಾರ್ಗವನ್ನು ಸೃಷ್ಟಿಸಬೇಕು.

ಲಾಕ್​​​ಡೌನ್​ ಮುಂದುವರೆಸುವುದು ಒಳ್ಳೆಯದಲ್ಲ. ಈ ಬಗ್ಗೆ ಮೇ 3ರ ನಂತರ ಕೊರೊನಾ ಜೊತೆ ಬದುಕುವುದು ಹೇಗೆ ಎಂಬ ಬಗ್ಗೆ ಪರ್ಯಾಯ ಮಾರ್ಗ ಹುಡುಕಿ ಜನರಿಗೆ ಸರ್ಕಾರ ಮಾರ್ಗದರ್ಶನ ಮಾಡಬೇಕು ಎಂದು ಡಾ. ಯೋಗಣ್ಣ ಮನವಿ ಮಾಡಿದರು.

ಮೈಸೂರು: ಕೊರೊನಾ ವೈರಸ್​ ಒಂದೆರಡು ತಿಂಗಳಿಗೆ ನಾಶವಾಗುವುದಿಲ್ಲ. ಇದು ನಮ್ಮ ಜೊತೆ ಒಂದೆರಡು ವರ್ಷ ಇರಬಹುದು. ಇದನ್ನು ಸಂಪೂರ್ಣವಾಗಿ ನಾಶ ಮಾಡಲು ಸಾಧ್ಯವಿಲ್ಲ. ಹಾಗಾಗಿ ಕೊರೊನಾ ವೈರಸ್ ಜೊತೆ ಬದುಕುವ ಪರ್ಯಾಯ ಮಾರ್ಗವನ್ನು ಕಂಡುಹಿಡಿಯಬೇಕೆಂದು ಹಿರಿಯ ವೈದ್ಯ ಡಾ. ಯೋಗಣ್ಣ ಹೇಳಿದರು.

ನಗರದಲ್ಲಿ ಲಾಕ್​ಡೌನ್​ ಹೇರಿಕೆ ಹಾಗೂ ಈ ವೈರಾಣು ಹರಡುವಿಕೆ ಬಗ್ಗೆ ಈಟಿವಿ ಭಾರತ್​ ಜೊತೆ ಮಾತನಾಡಿದ ಅವರು, ಕೊರೊನಾ ವೈರಸ್ ಸೋಂಕನ್ನು ಹೋಗಲಾಡಿಸಲು 2 ತಿಂಗಳು ಲಾಕ್​​ಡೌನ್ ಮಾಡಿದ್ದು ಸರಿ. ಆದರೆ, ಲಾಕ್​​ಡೌನ್ ವಿಸ್ತರಿಸಿದರೆ ತೊಂದರೆ ಹೆಚ್ಚು. ಏಕೆಂದರೆ ಸಂಘ ಜೀವಿಯಾದ ಮನುಷ್ಯ ಯಾವಾಗಲೂ ಕ್ರಿಯಾಶೀಲನಾಗಲು ಇಚ್ಛಿಸುತ್ತಾನೆ. ಆದರೆ, ಮನೆಯಲ್ಲಿರುವುದರಿಂದ ಅವನ ಮನಸ್ಸಿನಲ್ಲಿ ಆತಂಕದ ಭಾವನೆಗಳು ಶುರುವಾಗುತ್ತವೆ. ಅದು ಕೊರೊನಾಕ್ಕಿಂತ ಅಪಾಯವಾದದ್ದು.

ಹಿರಿಯ ವೈದ್ಯ ಡಾ. ಯೋಗಣ್ಣ

ಒಂದೆರಡು ತಿಂಗಳಿಗೆ ಇದು ನಾಶವಾಗುತ್ತದೆ ಎಂದು ಅಂದುಕೊಂಡಿದ್ದರೆ ಅದು ನಮ್ಮ ಭ್ರಮೆ. ಇದು ಒಂದೆರಡು ವರ್ಷಗಳವರೆಗೂ ಇರಬಹುದು. ಈ ವೈರಸ್​​​​​ ಸಂಪೂರ್ಣವಾಗಿ ನಾಶವಾಗುವುದಿಲ್ಲ. ಹಾಗಾಗಿ ಸರ್ಕಾರ ಮತ್ತು ತಜ್ಞರು ಕೊರೊನಾ ಜೊತೆ ಬದುಕುವ ಪರ್ಯಾಯ ಮಾರ್ಗವನ್ನು ಸೃಷ್ಟಿಸಬೇಕು.

ಲಾಕ್​​​ಡೌನ್​ ಮುಂದುವರೆಸುವುದು ಒಳ್ಳೆಯದಲ್ಲ. ಈ ಬಗ್ಗೆ ಮೇ 3ರ ನಂತರ ಕೊರೊನಾ ಜೊತೆ ಬದುಕುವುದು ಹೇಗೆ ಎಂಬ ಬಗ್ಗೆ ಪರ್ಯಾಯ ಮಾರ್ಗ ಹುಡುಕಿ ಜನರಿಗೆ ಸರ್ಕಾರ ಮಾರ್ಗದರ್ಶನ ಮಾಡಬೇಕು ಎಂದು ಡಾ. ಯೋಗಣ್ಣ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.