ETV Bharat / state

ಕೊಲೆಯಾದವನ ಮೃತ ದೇಹ ಸಿಕ್ಕಿಲ್ಲ.. ಆದರೆ, ಚಿನ್ನದ ಚೈನ್​ಗಾಗಿ ಗೆಳೆಯನ ಕೊಂದ ಮೂವರು ಅಂದರ್​..!

author img

By

Published : Oct 15, 2019, 5:52 PM IST

ಬಂಗಾರದ ಚೈನ್​ಗಾಗಿ ಗೆಳೆಯನ್ನೇ ಕೊಲೆಗೈದ ಮೂವರು ಆರೋಪಿಗಳನ್ನು ಮೈಸೂರು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಕಿರಾತಕರು ಅಂದರ್

ಮೈಸೂರು:ಮೃತದೇಹ ಸಿಗುವ ಮುಂಚೆಯೇ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ಟೋಬರ್ 3ರಂದು ಯುವ ದಸರಾ ನೋಡಲು ಸ್ನೇಹಿತರೊಂದಿಗೆ ಬಂದಿದ್ದ ಕುವೆಂಪುನಗರ ನಿವಾಸಿ ರಾಹುಲ್(27)ನಾಪತ್ತೆಯಾಗಿದ್ದ. ಈ ಕುರಿತು ಅಕ್ಟೋಬರ್ 5ರಂದು ಕುವೆಂಪುನಗರ ಠಾಣೆಯಲ್ಲಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕಾರ್ಯ ಪ್ರವೃತ್ತರಾದ ಪೊಲೀಸರು ನಾಪತ್ತೆಯಾದ ಯುವಕನ ಮೊಬೈಲ್, ಕಾಲ್‌ಲಿಸ್ಟ್ ಜಾಡು ಹಿಡಿದು ಸ್ನೇಹಿತ ಸಂಜಯ್ ಎಂಬಾತನನ್ನು ಕರೆತಂದು ವಿಚಾರಣೆ ನಡೆಸಿದ್ದರು. ಆಗ ಆರೋಪಿ ತಾನೇ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇನ್ನು, ಕೊಲೆಯಾದ ರಾಹುಲ್ ತನ್ನ ಸ್ನೇಹಿತ ಸಂಜಯ್ ಬಳಿ ಚಿನ್ನದ ಸರ ಪಡೆದಿದ್ದ. ಆ ಸರವನ್ನು ವಾಪಸ್ ಕೊಡಲು ಸತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ಸಂಜಯ್ ರಾಹುಲ್ ಜೊತೆ ಜಗಳ ತೆಗೆದು ಕರವಸ್ತ್ರದಲ್ಲಿ ಕ್ಲೋರೋಪೋರಂ ಹಾಕಿ ರಾಹುಲ್​ ಮೂಗಿಗೆ ಹಿಡಿದ್ದಾನೆ. ಪ್ರಜ್ಞೆ ತಪ್ಪಿದ ರಾಹುಲ್​ನನ್ನು ಹೊಡೆದು ಸಾಯಿಸಿ ಕೊನೆಗೆ ಶವವನ್ನು ಬೈಕ್​ನಲ್ಲಿ ತೆಗೆದುಕೊಂಡು ಹೋಗಿ ಟಿ.ನರಸೀಪುರ ಬಳಿಯ ವರುಣಾ ನಾಲೆಗೆ ಎಸೆದಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿದ್ದು, ಈ ಸಂಬಂಧ ಲಕ್ಷ್ಮಿಪುರಂ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.

ಮೈಸೂರು:ಮೃತದೇಹ ಸಿಗುವ ಮುಂಚೆಯೇ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೊಲೀಸರು ಯಶಸ್ವಿಯಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಅಕ್ಟೋಬರ್ 3ರಂದು ಯುವ ದಸರಾ ನೋಡಲು ಸ್ನೇಹಿತರೊಂದಿಗೆ ಬಂದಿದ್ದ ಕುವೆಂಪುನಗರ ನಿವಾಸಿ ರಾಹುಲ್(27)ನಾಪತ್ತೆಯಾಗಿದ್ದ. ಈ ಕುರಿತು ಅಕ್ಟೋಬರ್ 5ರಂದು ಕುವೆಂಪುನಗರ ಠಾಣೆಯಲ್ಲಿ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕಾರ್ಯ ಪ್ರವೃತ್ತರಾದ ಪೊಲೀಸರು ನಾಪತ್ತೆಯಾದ ಯುವಕನ ಮೊಬೈಲ್, ಕಾಲ್‌ಲಿಸ್ಟ್ ಜಾಡು ಹಿಡಿದು ಸ್ನೇಹಿತ ಸಂಜಯ್ ಎಂಬಾತನನ್ನು ಕರೆತಂದು ವಿಚಾರಣೆ ನಡೆಸಿದ್ದರು. ಆಗ ಆರೋಪಿ ತಾನೇ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಇನ್ನು, ಕೊಲೆಯಾದ ರಾಹುಲ್ ತನ್ನ ಸ್ನೇಹಿತ ಸಂಜಯ್ ಬಳಿ ಚಿನ್ನದ ಸರ ಪಡೆದಿದ್ದ. ಆ ಸರವನ್ನು ವಾಪಸ್ ಕೊಡಲು ಸತಾಯಿಸುತ್ತಿದ್ದ. ಇದರಿಂದ ಕೋಪಗೊಂಡ ಸಂಜಯ್ ರಾಹುಲ್ ಜೊತೆ ಜಗಳ ತೆಗೆದು ಕರವಸ್ತ್ರದಲ್ಲಿ ಕ್ಲೋರೋಪೋರಂ ಹಾಕಿ ರಾಹುಲ್​ ಮೂಗಿಗೆ ಹಿಡಿದ್ದಾನೆ. ಪ್ರಜ್ಞೆ ತಪ್ಪಿದ ರಾಹುಲ್​ನನ್ನು ಹೊಡೆದು ಸಾಯಿಸಿ ಕೊನೆಗೆ ಶವವನ್ನು ಬೈಕ್​ನಲ್ಲಿ ತೆಗೆದುಕೊಂಡು ಹೋಗಿ ಟಿ.ನರಸೀಪುರ ಬಳಿಯ ವರುಣಾ ನಾಲೆಗೆ ಎಸೆದಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿದ್ದು, ಈ ಸಂಬಂಧ ಲಕ್ಷ್ಮಿಪುರಂ ಠಾಣೆಯಲ್ಲಿ ಆರೋಪಿಗಳ ವಿಚಾರಣೆ ಮುಂದುವರೆಸಿದ್ದಾರೆ.

Intro:ಮೈಸೂರು: ಮೃತದೇಹ ಸಿಗುವ ಮುಂಚೆಯೇ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ನಗರ ಪೋಲಿಸರು ಯಶಸ್ವಿಯಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.Body:





ಅಕ್ಟೋಬರ್ ೩ ರಂದು ಯುವದಸರಾ ನೋಡಲು ಸ್ನೇಹಿತರೊಂದಿಗೆ ಬಂದ ಕುವೆಂಪುನಗರ ನಿವಾಸಿ ರಾಹುಲ್ (೨೭) ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದು , ಅಕ್ಟೋಬರ್ ೫ ರಂದು ಕುವೆಂಪುನಗರ ಪೋಲಿಸರಿಗೆ ಪೋಷಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಪೋಲಿಸರು ಯುವಕ ನಾಪತ್ತೆಯಾಗಿರುವ ಸ್ಥಳ ಲಕ್ಷ್ಮೀಪುರಂ ಠಾಣಾ ವ್ಯಾಪ್ತಿಯಲ್ಲಿ ಬರುವುದರಿಂದ ಪ್ರಕರಣವನ್ನು ಲಕ್ಷ್ಮೀಪುರಂ ಠಾಣೆಗೆ ವರ್ಗಾಯಿಸಿದರು. ಈ ಬಗ್ಗೆ ತನಿಖೆ ಕೈಗೊಂಡ ಪೋಲಿಸರು ನಾಪತ್ತೆಯಾದ ಯುವಕನ ಮೊಬೈಲ್, ಕಾಲ್ ಲಿಸ್ಟ್ ತೆಗೆದು ಅತಿ ಹೆಚ್ಚು ಬಾರಿ ಫೋನ್ ನಲ್ಲಿ ಮಾತಾನಾಡಿದ ಸ್ನೇಹಿತ ಸಂಜಯ್ ಎಂಬುವವರನ್ನು ಕರೆ ತಂದು ವಿಚಾರಣೆ ನಡೆಸಿದಾಗ, ಈತ ನಾನೇ ಸ್ನೇಹಿತರೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ.


ಏತಕ್ಕಾಗಿ ಕೊಲೆ ?

ಕೊಲೆಯಾದ ರಾಹುಲ್ ತನ್ನ ಸ್ನೇಹಿತ ಸಂಜಯ್ ಬಳಿ ಚಿನ್ನದ ಸರ ಪಡೆದಿದ್ದ , ಆ ಸರವನ್ನು ವಾಪಸ್ ಕೊಡಲು ಸತಾಯಿಸುತ್ತಿದ್ದ ಇದರಿಂದ ಕೋಪಗೊಂಡ ಸಂಜಯ್ ಅಕ್ಟೋಬರ್ ೩ ರಂದು ಯುವದಸರಾ ನೋಡಲು ಬಂದ ಸಂದರ್ಭದಲ್ಲಿ ತನ್ನ ಸ್ನೇಹಿತರೊಂದಿಗೆ ರಾಹುಲ್ ಜೊತೆ ಜಗಳ ತೆಗೆದು ಸಂಜಯ್ ಕರವಸ್ತ್ರದಲ್ಲಿ ಕ್ಲೋಪೋರಂ ಹಾಕಿ ರಾಹುಲ್ ನ ಮೂಗಿಗೆ ಹಿಡಿದ. ಈ ಸಂದರ್ಭದಲ್ಲಿ ಪ್ರಜ್ಞೆ ತಪ್ಪಿದ ರಾಹುಲ್ ನನ್ನು ಹೊಡೆದು ಸಾಯಿಸಿದ್ದು ಕೊನೆಗೆ ಆತನನ್ನು ದ್ವಿಚಕ್ರ ವಾಹನದ ಮಧ್ಯೆ ಕೂರಿಸಿಕೊಂಡು ತಿ.ನರಸೀಪುರ ಬಳಿ ಇರುವ ವರುಣಾ ನಾಲೆಗೆ ಎಸೆದಿದ್ದಾರೆ. ಮೃತದೇಹ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿದ್ದು. ಈ ಸಂಬಂಧ ಲಕ್ಷ್ಮೀಪುರಂ ಠಾಣೆಯಲಿ ಪ್ರಕರಣ ದಾಖಲಿಸಿಕೊಂಡು ೩ ಆರೋಪಿಗಳನ್ನು ಪೋಲಿಸರು ಜೈಲಿಗೆ ಅಟ್ಟಿದ್ದಾರೆ, ಮೃತದೇಹ ಸಿಗುವ ಮೊದಲೇ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.