ETV Bharat / state

ಲಸಿಕೆ ವಿತರಣೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ತಂಡ ರಚಿಸಿದ ಮೈಸೂರು ನಗರ ಪಾಲಿಕೆ

ಮನೆಮನೆಗೆ ತೆರಳಿ ಕೊರೊನಾ‌ ಲಸಿಕೆ ನೀಡಲು ರಾಜ್ಯದಲ್ಲಿಯೇ ಮೊದಲ ಬಾರಿಗೆ‌ ಮೊಬೈಲ್ ತಂಡವನ್ನು ಮೈಸೂರು ಮಹಾನಗರ ಪಾಲಿಕೆ ಆರಂಭಿಸಿದೆ.

author img

By

Published : Apr 30, 2021, 9:48 PM IST

Updated : Apr 30, 2021, 9:54 PM IST

mysore
mysore

ಮೈಸೂರು: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ, ಮತ್ತಷ್ಟು ಆ್ಯಕ್ಟಿವ್ ಆಗಿರುವ ಮೈಸೂರು ಮಹಾನಗರ ಪಾಲಿಕೆಯು, ಮನೆಮನೆಗೆ ತೆರಳಿ ಕೊರೊನಾ‌ ಲಸಿಕೆ ನೀಡಲು ರಾಜ್ಯದಲ್ಲಿಯೇ ಮೊದಲ ಬಾರಿಗೆ‌ ಮೊಬೈಲ್ ತಂಡವನ್ನು ರಚಿಸಿದೆ.

ಈಗಾಗಲೇ ಮೈಸೂರು ನಗರದಲ್ಲಿ 5 ಮೊಬೈಲ್ ಟೀಮ್ ಅನ್ನು ರಚನೆ ಮಾಡಲಾಗಿದ್ದು, ನಗರಪಾಲಿಕೆ ವ್ಯಾಪ್ತಿಯ ಆಯಾಯ ವಾರ್ಡ್​ಗಳಲ್ಲಿ ಸಂಘ - ಸಂಸ್ಥೆಗಳ ಸಹಕಾರದೊಂದಿಗೆ ನಿಗದಿ ಮಾಡಿದ ಸ್ಥಳದ ಆವರಣದಲ್ಲಿ ಈ ಮೊಬೈಲ್ ತಂಡವೂ ಆಗಮಿಸಿ ಲಸಿಕೆ ನೀಡಲಿದೆ. ಲಸಿಕೆ ಪಡೆಯಬೇಕೆನ್ನುವ ಜನರು ಆಧಾರ್, ಗುರುತಿನ ಚೀಟಿ ಇದ್ದರೆ ಸಾಕು, ಸ್ಥಳದಲ್ಲಿಯೇ ಲಸಿಕೆ ಸಿಗಲಿದೆ.

ಲಸಿಕೆ ವಿತರಣೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ತಂಡ ರಚಿಸಿದ ಮೈಸೂರು ನಗರ ಪಾಲಿಕೆ

ಗ್ರಾಮೀಣ ಭಾಗದಲ್ಲಿ ಈಗಾಗಲೇ ವೈದ್ಯರು ಲಸಿಕೆ ನೀಡುತ್ತಿದ್ದಾರೆ. ಅದರಂತೆ ಮೈಸೂರು ನಗರದಲ್ಲಿ ವೈದ್ಯರನ್ನೊಳಗೊಂಡ ತಂಡದಿಂದ ಲಸಿಕೆ ನೀಡಲಾಗುತ್ತಿದೆ. ಈ ಮೊಬೈಲ್ ತಂಡಕ್ಕೆ ಮೈಸೂರು ನಗರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಮುದಾಯ ಭವನಗಳು ವಿಶಾಲವಾದ ಸ್ಥಳಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನು ಮೊಬೈಲ್ ತಂಡ ಮಾಡಲಿದೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರುವ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಸಂಘ - ಸಂಸ್ಥೆಗಳು, ನಗರ ಪಾಲಿಕೆ ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ಜೋಡಿಸಿದ್ದಾರೆ. ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿರುವ, ಮುರುಗಮಠ ಸಮುದಾಯ ಭವನದಲ್ಲಿ ನಾಗರಿಕರಿಗೆ ಶುಕ್ರವಾರ ಮೊಬೈಲ್ ತಂಡದಿಂದ ಲಸಿಕೆ ನೀಡಲಾಯಿತು.

ಮೈಸೂರು: ಕೊರೊನಾ ಎರಡನೇ ಅಲೆ ಹೆಚ್ಚಾಗುತ್ತಿರುವುದರಿಂದ, ಮತ್ತಷ್ಟು ಆ್ಯಕ್ಟಿವ್ ಆಗಿರುವ ಮೈಸೂರು ಮಹಾನಗರ ಪಾಲಿಕೆಯು, ಮನೆಮನೆಗೆ ತೆರಳಿ ಕೊರೊನಾ‌ ಲಸಿಕೆ ನೀಡಲು ರಾಜ್ಯದಲ್ಲಿಯೇ ಮೊದಲ ಬಾರಿಗೆ‌ ಮೊಬೈಲ್ ತಂಡವನ್ನು ರಚಿಸಿದೆ.

ಈಗಾಗಲೇ ಮೈಸೂರು ನಗರದಲ್ಲಿ 5 ಮೊಬೈಲ್ ಟೀಮ್ ಅನ್ನು ರಚನೆ ಮಾಡಲಾಗಿದ್ದು, ನಗರಪಾಲಿಕೆ ವ್ಯಾಪ್ತಿಯ ಆಯಾಯ ವಾರ್ಡ್​ಗಳಲ್ಲಿ ಸಂಘ - ಸಂಸ್ಥೆಗಳ ಸಹಕಾರದೊಂದಿಗೆ ನಿಗದಿ ಮಾಡಿದ ಸ್ಥಳದ ಆವರಣದಲ್ಲಿ ಈ ಮೊಬೈಲ್ ತಂಡವೂ ಆಗಮಿಸಿ ಲಸಿಕೆ ನೀಡಲಿದೆ. ಲಸಿಕೆ ಪಡೆಯಬೇಕೆನ್ನುವ ಜನರು ಆಧಾರ್, ಗುರುತಿನ ಚೀಟಿ ಇದ್ದರೆ ಸಾಕು, ಸ್ಥಳದಲ್ಲಿಯೇ ಲಸಿಕೆ ಸಿಗಲಿದೆ.

ಲಸಿಕೆ ವಿತರಣೆಗೆ ರಾಜ್ಯದಲ್ಲಿಯೇ ಮೊದಲ ಬಾರಿಗೆ ಮೊಬೈಲ್ ತಂಡ ರಚಿಸಿದ ಮೈಸೂರು ನಗರ ಪಾಲಿಕೆ

ಗ್ರಾಮೀಣ ಭಾಗದಲ್ಲಿ ಈಗಾಗಲೇ ವೈದ್ಯರು ಲಸಿಕೆ ನೀಡುತ್ತಿದ್ದಾರೆ. ಅದರಂತೆ ಮೈಸೂರು ನಗರದಲ್ಲಿ ವೈದ್ಯರನ್ನೊಳಗೊಂಡ ತಂಡದಿಂದ ಲಸಿಕೆ ನೀಡಲಾಗುತ್ತಿದೆ. ಈ ಮೊಬೈಲ್ ತಂಡಕ್ಕೆ ಮೈಸೂರು ನಗರದಲ್ಲಿ ಉತ್ತಮ ಸ್ಪಂದನೆ ಸಿಕ್ಕಿದ್ದು, ಸಮುದಾಯ ಭವನಗಳು ವಿಶಾಲವಾದ ಸ್ಥಳಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆಯನ್ನು ಮೊಬೈಲ್ ತಂಡ ಮಾಡಲಿದೆ.

ಕೊರೊನಾ ಲಸಿಕೆ ಹಾಕಿಸಿಕೊಳ್ಳಲು ಬರುವ ಜನರಿಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕಾರ್ಯಕ್ಕೆ ಸಂಘ - ಸಂಸ್ಥೆಗಳು, ನಗರ ಪಾಲಿಕೆ ಸದಸ್ಯರು, ರಾಜಕೀಯ ಪಕ್ಷಗಳ ಮುಖಂಡರು ಜೋಡಿಸಿದ್ದಾರೆ. ಅಗ್ರಹಾರದ ಬಸವೇಶ್ವರ ರಸ್ತೆಯಲ್ಲಿರುವ, ಮುರುಗಮಠ ಸಮುದಾಯ ಭವನದಲ್ಲಿ ನಾಗರಿಕರಿಗೆ ಶುಕ್ರವಾರ ಮೊಬೈಲ್ ತಂಡದಿಂದ ಲಸಿಕೆ ನೀಡಲಾಯಿತು.

Last Updated : Apr 30, 2021, 9:54 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.