ಮೈಸೂರು: ಸಂವಿಧಾನದ ಮೇಲೆ ಸವಾರಿ ನಡೆಯುತ್ತಿದ್ದು, ಪ್ರಜೆಗಳು ಚಾಟಿ ತೆಗೆದುಕೊಂಡು ಬೀಸೋ ಕಾಲ ಬಂದಿದೆ ಎಂದು ಮಾಜಿ ಸಚಿವ ಎಚ್.ಸಿ. ಮಹದೇವಪ್ಪ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಎಚ್.ಸಿ.ಮಹದೇವಪ್ಪ ಸಂವಿಧಾನದ ಮೇಲೆ ಒಂದರ ಮೇಲೊಂದು ರೀತಿಯಲ್ಲಿ ಪ್ರಭುತ್ವದ ಸವಾರಿ ನಡೆಯುತ್ತಿದೆ. ನ್ಯಾಯಾಲಯದಿಂದ ತೀರ್ಪುಗಳು ಬರುತ್ತಿವೆ. ಈ ತೀರ್ಪನ್ನು ಪ್ರಶ್ನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ಜಾವಾಬ್ದಾರಿಯಾಗಬೇಕು ಎಂದರು.