ಮೈಸೂರು: ದಸರಾ ಉದ್ಘಾಟನೆಗೆ ಆಗಮಿಸಿದ ಎಸ್. ಎಂ ಕೃಷ್ಣ ಅವರಿಗೆ ಸಾಂಪ್ರದಾಯಿಕ ಸ್ವಾಗತ ಕೋರಲಾಯಿತು.
ಬೆಂಗಳೂರಿನಿಂದ ಮೈಸೂರಿಗೆ ಆಗಮಿಸಿದ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ ಸೋಮಶೇಖರ್ ಅವರು ಕೊಲಂಬಿಯಾ ಏಷಿಯಾ ರಸ್ತೆಯ ಸಿಗ್ನಲ್ ಬಳಿ ಸಾಂಪ್ರದಾಯಿಕವಾಗಿ ಸ್ವಾಗತವನ್ನು ಕೋರಿ ಬರಮಾಡಿಕೊಂಡರು.
![former-chief-minister-s-m-krishna-visits-mysore-for-inagurate-dasara](https://etvbharatimages.akamaized.net/etvbharat/prod-images/kn-mys-04-smkrishnawelcomenews-7208092_06102021161041_0610f_1633516841_677.jpg)
ನಾಳೆ ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 8.15 ರಿಂದ 8.45 ರ ಶುಭ ಲಗ್ನದಲ್ಲಿ ನಾಡಹಬ್ಬ ದಸರಾಗೆ ಚಾಮುಂಡೇಶ್ವರಿ ದೇವಿಯ ಉತ್ಸವಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಎಸ್.ಎಂ ಕೃಷ್ಣ ಅವರು ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಇಂದು ನಗರದ ಖಾಸಗಿ ಹೋಟೆಲ್ನಲ್ಲಿ ಕುಟುಂಬ ಸಮೇತ ವಾಸ್ತವ್ಯ ಹೂಡಲಿದ್ದಾರೆ.
![former-chief-minister-s-m-krishna-visits-mysore-for-inagurate-dasara](https://etvbharatimages.akamaized.net/etvbharat/prod-images/kn-mys-04-smkrishnawelcomenews-7208092_06102021161041_0610f_1633516841_495.jpg)
ಓದಿ: ನಾಳೆಯಿಂದ ನಾಡಹಬ್ಬ.. ದಸರಾದಲ್ಲಿ ಏನೇನು ವಿಶೇಷ.. ಇಲ್ಲಿದೆ ಸಂಪೂರ್ಣ ಮಾಹಿತಿ