ETV Bharat / state

ದೆಹಲಿ ದಾರ್ಮಿಕ ಸಭೆಗೆ ಹೋಗಿ ಬಂದಿದ್ದಾರೆಂದು ಸುಳ್ಳು ವದಂತಿ: ಮೈಸೂರಿನಲ್ಲಿ ಪ್ರಕರಣ ದಾಖಲು - ಕೊರೊನಾ ಲಾಕ್​ಡೌನ್​

ಕುವೆಂಪು ನಗರದಲ್ಲಿರುವ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್ ಮಾಲೀಕನಿಗೆ ಕೊರೊನಾ ವೈರಸ್ ಇದೆ. ಅವರು ದೆಹಲಿಯ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದಾರೆ ಎಂದು ಆ ಸೂಪರ್ ಮಾರ್ಕೆಟ್ ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿಲಾಗಿತ್ತು. ಈ ಬಗ್ಗೆ ಸೂಪರ್​ ಮಾರ್ಕೆಟ್​ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ವದಂತಿ
ಮೈಸೂರು
author img

By

Published : Apr 8, 2020, 11:49 AM IST

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಮಾರ್ಕೆಟ್‌ವೊಂದರ ಮಾಲೀಕರಿಗೆ ಕೊರೊನಾ ಸೋಂಕಿದೆ ಎಂಬ ಸುಳ್ಳು ಸುದ್ದಿ ವೈರಲ್ ಆಗಿದೆ. ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪು ನಗರದಲ್ಲಿರುವ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್ ಮಾಲೀಕನಿಗೆ ಕೊರೊನಾ ವೈರಸ್ ಇದೆ. ಅವರು ದೆಹಲಿಯ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದಾರೆ ಎಂದು ಆ ಸೂಪರ್ ಮಾರ್ಕೆಟ್ ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿಲಾಗಿದೆ.

ಈ ಸುಳ್ಳು ಸುದ್ದಿ ಸೂಪರ್ ಮಾರ್ಕೆಟ್​ನ ಮಾಲೀಕನ ಮೊಬೈಲ್​ಗೂ ತಲುಪಿದ್ದು, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ನಮ್ಮ ಶಾಖೆಗಳಿವೆ. ಈ ಸುದ್ದಿಯಿಂದಾಗಿ ನಮ್ಮ ನೌಕರರು ಹಾಗೂ ಗ್ರಾಹಕರು ಭಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್​ನ ಮಾಲೀಕ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೋಲಿಸರು ವಂದತಿ ಮೂಲಕ ಸಾರ್ವಜನಿಕರಿಗೆ ಭಯ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಮಾರ್ಕೆಟ್‌ವೊಂದರ ಮಾಲೀಕರಿಗೆ ಕೊರೊನಾ ಸೋಂಕಿದೆ ಎಂಬ ಸುಳ್ಳು ಸುದ್ದಿ ವೈರಲ್ ಆಗಿದೆ. ಈ ಸಂಬಂಧ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುವೆಂಪು ನಗರದಲ್ಲಿರುವ ಲಾಯಲ್ ವರ್ಲ್ಡ್ ಸೂಪರ್ ಮಾರ್ಕೆಟ್ ಮಾಲೀಕನಿಗೆ ಕೊರೊನಾ ವೈರಸ್ ಇದೆ. ಅವರು ದೆಹಲಿಯ ಧಾರ್ಮಿಕ ಸಭೆಗೆ ಹೋಗಿ ಬಂದಿದ್ದಾರೆ ಎಂದು ಆ ಸೂಪರ್ ಮಾರ್ಕೆಟ್ ಫೋಟೋ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವೈರಲ್ ಮಾಡಿಲಾಗಿದೆ.

ಈ ಸುಳ್ಳು ಸುದ್ದಿ ಸೂಪರ್ ಮಾರ್ಕೆಟ್​ನ ಮಾಲೀಕನ ಮೊಬೈಲ್​ಗೂ ತಲುಪಿದ್ದು, ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅನೇಕ ಕಡೆ ನಮ್ಮ ಶಾಖೆಗಳಿವೆ. ಈ ಸುದ್ದಿಯಿಂದಾಗಿ ನಮ್ಮ ನೌಕರರು ಹಾಗೂ ಗ್ರಾಹಕರು ಭಯಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಪರ್ ಮಾರ್ಕೆಟ್​ನ ಮಾಲೀಕ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಪೋಲಿಸರು ವಂದತಿ ಮೂಲಕ ಸಾರ್ವಜನಿಕರಿಗೆ ಭಯ ಉಂಟು ಮಾಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.