ETV Bharat / state

ಕಪಿಲೆ ಸೇರ್ತಿದೆ ಶೌಚಾಲಯದ ನೀರು:ಪುಣ್ಯ ಸ್ನಾನ ಮಾಡೋ ಭಕ್ತರೇ ಹುಷಾರ್!

author img

By

Published : May 19, 2019, 3:55 PM IST

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇಗುಲದ ಸಮೀಪದಲ್ಲಿರುವ ಕಪಿಲಾ ನದಿಗೆ ಸುಜಾತಫಾರಂನ ಒಳಚರಂಡಿ ನೀರು ಬಂದು ಸೇರುತ್ತಿದೆ.

ಕಪಿಲಾ ನದಿಗೆ ಸೇರುತ್ತಿದೆ ಸುಜಾತಫಾರಂನ ಒಳಚರಂಡಿ ನೀರು

ಮೈಸೂರು: 'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡುವ ಭಕ್ತರು ಎಚ್ಚರ ವಹಿಸಬೇಕಾಗಿದೆ.

ನೇತ್ರಾವತಿ ನದಿ ಬತ್ತಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಕ್ತರಿಗೆ ಪ್ರವಾಸವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜುಂಡೇಶ್ವರನ ದರ್ಶನ ಪಡೆಯಲು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಪುಣ್ಯ ಸ್ನಾನ ಮಾಡೋ ಭಕ್ತರೇ ಹುಷಾರ್!

ಇಲ್ಲಿಗೆ ಬರುವ ಭಕ್ತಾದಿಗಳು ದೇವರ ದರ್ಶನಕ್ಕೂ ಮುನ್ನ ಕಪಿಲಾ ನದಿಯಲ್ಲಿ ಮೀಯುವುದು ಸಂಪ್ರದಾಯ. ಕೆಲ ದಿನಗಳಿಂದ ಇಲ್ಲಿನ ಸುಜಾತಫಾರಂನ ಒಳಚರಂಡಿ ನೀರು ಕಪಿಲೆ ಸೇರುತ್ತಿದ್ದು,ನದಿ ಮಲಿನಗೊಳ್ತಿದೆ. ಆದರೆ, ಈ ಬಗ್ಗೆ ಮಾಹಿತಿ ಇರದ ಎಷ್ಟೋ ಭಕ್ತಾದಿಗಳು ಈಗಲೂ ನದಿಯಲ್ಲಿ ಮಿಂದೆದ್ದು ಬರುತ್ತಾರೆ.

ಈ ಬಗ್ಗೆ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮಲಿನ ನೀರು ನದಿ ಸೇರುವುದು ಹೀಗೆಯೇ ಮುಂದುವರೆದಲ್ಲಿ ಭಕ್ತರು ರೋಗ ರುಜಿನಗಳಿಂದ ಬಳಲುವ ದಿನ ದೂರವಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು: 'ದಕ್ಷಿಣ ಕಾಶಿ' ಎಂದೇ ಖ್ಯಾತಿ ಪಡೆದಿರುವ ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡುವ ಭಕ್ತರು ಎಚ್ಚರ ವಹಿಸಬೇಕಾಗಿದೆ.

ನೇತ್ರಾವತಿ ನದಿ ಬತ್ತಿರುವ ಹಿನ್ನಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಭಕ್ತರಿಗೆ ಪ್ರವಾಸವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ ಎಂದು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ನಂಜುಂಡೇಶ್ವರನ ದರ್ಶನ ಪಡೆಯಲು ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.

ಪುಣ್ಯ ಸ್ನಾನ ಮಾಡೋ ಭಕ್ತರೇ ಹುಷಾರ್!

ಇಲ್ಲಿಗೆ ಬರುವ ಭಕ್ತಾದಿಗಳು ದೇವರ ದರ್ಶನಕ್ಕೂ ಮುನ್ನ ಕಪಿಲಾ ನದಿಯಲ್ಲಿ ಮೀಯುವುದು ಸಂಪ್ರದಾಯ. ಕೆಲ ದಿನಗಳಿಂದ ಇಲ್ಲಿನ ಸುಜಾತಫಾರಂನ ಒಳಚರಂಡಿ ನೀರು ಕಪಿಲೆ ಸೇರುತ್ತಿದ್ದು,ನದಿ ಮಲಿನಗೊಳ್ತಿದೆ. ಆದರೆ, ಈ ಬಗ್ಗೆ ಮಾಹಿತಿ ಇರದ ಎಷ್ಟೋ ಭಕ್ತಾದಿಗಳು ಈಗಲೂ ನದಿಯಲ್ಲಿ ಮಿಂದೆದ್ದು ಬರುತ್ತಾರೆ.

ಈ ಬಗ್ಗೆ ಜನಪ್ರತಿನಿಧಿಗಳು ಹಾಗು ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಮಲಿನ ನೀರು ನದಿ ಸೇರುವುದು ಹೀಗೆಯೇ ಮುಂದುವರೆದಲ್ಲಿ ಭಕ್ತರು ರೋಗ ರುಜಿನಗಳಿಂದ ಬಳಲುವ ದಿನ ದೂರವಿಲ್ಲ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

Intro:ಶೌಚಾಲಯ‌ ನೀರುBody:ಕಪಿಲಾ ನದಿಗೆ ಹರಿದು ಬರುತ್ತಿದೆ ಶೌಚಾಲಯ ನೀರು
ನದಿಯಲ್ಲಿ ಸ್ನಾನ ಮಾಡುವಾಗ ಭಕ್ತರೇ ಹುಷಾರ್!
ಮೈಸೂರು: ದಕ್ಷಿಣ ಕಾಶಿ ಎಂದು ಖ್ಯಾತಿಗೊಳಿಸಿರುವ ನಂಜನಗೂಡು ತಾಲ್ಲೂಕಿನ ನಂಜುಂಡೇಶ್ವರ ದೇವಸ್ಥಾನದ ಸಮೀಪದಲ್ಲಿರುವ ಹೊಳೆಯಲ್ಲಿ ಸ್ನಾನ ಮಾಡುವ ಭಕ್ತರು ಎಚ್ಚರ ವಹಿಸುವುದು ಸೂಕ್ತ ಎನ್ನಲಾಗಿದೆ.
ಹೌದು, ನೇತ್ರವತಿ ನದಿ ಬತ್ತಿದ ಹಿನ್ನಲೆಯಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗಡೆ ಭಕ್ತರಿಗೆ ಪ್ರವಾಸವನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ ಎಂದು ಮನವಿ ಮಾಡಿದ್ದಾರೆ. ಇದರಿಂದ ಹಲವು ಭಕ್ತರು ನಂಜುಂಡೇಶ್ವರನ ದರ್ಶನ ಪಡೆಯಲು ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ.
ಹೆಚ್ಚಾಗುತ್ತಿರುವ ಭಕ್ತರು ಕಪಿಲಾ ನದಿಯಲ್ಲಿ ಮಿಂದೆದ್ದು ನಂಜುಂಡೇಶ್ವರ ದರ್ಶನ ಪಡೆಯಲು ಆಗಮಿಸುತ್ತಿದ್ದಾರೆ.ಆದರೆ ಕಪಿಲಾ ನದಿಗೆ ಒಳಚರಂಡಿ ನೀರು ಸದ್ದಿಲ್ಲದೇ ಹರಿದು ಬರುತ್ತಿರುವುದರಿಂದ ಇದರ ಕಡೆ ಗಮನ ಹರಿಸದ ಭಕ್ತರು, ಭಕ್ತಿಯಲ್ಲಿ ಮುಳುಗಿದ್ದಾರೆ.
ಒಳಚರಂಡಿ ನೀರು ಕಪಿಲಾ ನದಿಗೆ ಹೆಚ್ಚಾದಷ್ಟು ಭಕ್ತರಿಗೆ ರೋಗಾಣುಗಳು ಹರಡಿಕೊಳ್ಳುತ್ತದೆ. ಕೆಲ ದಿನಗಳ ಹಿಂದೆ ಸುಜಾತಫಾರಂನಲ್ಲಿ ಬಳಿಯಿಂದ ಶೌಚಾಲಯ ನೀರು, ಕಪಿಲಾ ನದಿಗೆ ಸೇರುತ್ತಿರುವುದರಿಂದ ನದಿಯೂ ಕೂಡ ಮತ್ತಷ್ಟು ಮಲಿನಗೊಳ್ಳುತ್ತಿದೆ.
ಇದರ ಬಗ್ಗೆ ಸ್ಥಳೀಯರು ಜನಪ್ರತಿನಿಧಿಗಳು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾದರೆ ಮುಂದೆ ಏನು ಮಾಡುವುದು ಎಂಬ ಚಿಂತೆ ಭಕ್ತದಾಗಿದೆ. Conclusion:ಶೌಚಾಲಯ ನೀರು

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.