ETV Bharat / state

ಹುಣಸೂರಲ್ಲಿ ಡಿಕೆಶಿ ಪ್ರಚಾರ...ಏಕವಚನದಲ್ಲೇ ಹಳ್ಳಿಹಕ್ಕಿ ಮೇಲೆ ವಾಗ್ದಾಳಿ

author img

By

Published : Nov 27, 2019, 1:46 PM IST

ರಾಜಕೀಯ ನಿವೃತ್ತಿ ಪಡೆದುಕೊಂಡು ಮನೆಯಲ್ಲಿ ಕುಳಿತ್ತಿದ್ದ ವಿಶ್ವನಾಥ್​ಗೆ ಜೆಡಿಎಸ್, ಶಾಸಕ ಸ್ಥಾನ ಕೊಟ್ಟು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿತು‌. ಆದರೆ ಹಣದ ಆಮಿಷಕ್ಕೆ ವಿಶ್ವನಾಥ್​ ಬಲಿಯಾದ ಎಂದು ಏಕವಚನದಲ್ಲೇ ಡಿಕೆಶಿ ವಾಗ್ದಾಳಿ ನಡೆಸಿದರು.

ಹುಣಸೂರಲ್ಲಿ ಡಿಕೆಶಿ ಪ್ರಚಾರ, DKS spoke against Vishwanath
ಹುಣಸೂರಲ್ಲಿ ಡಿಕೆಶಿ ಪ್ರಚಾರ

ಮೈಸೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಹುಣಸೂರು ಉಪಚುನಾವಣೆಯ ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಕೆಂಡಾಮಂಡಲರಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಹುಣಸೂರಿನ ಬಿಳಿಕೆರೆ ಹೊಬಳಿಯ ಕೊಮ್ಮೆಗೌಡನಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು. ನಂತರ‌ ಆರತಿ ಬೆಳಗಿ ಮಹದೇಶ್ವರ ದೇವಸ್ಥಾನಕ್ಕೆ ಕಾರ್ಯಕರ್ತರು ಡಿ ಕೆ ಶಿವಕುಮಾರ್​ ಅವರನ್ನ ಬರಮಾಡಿಕೊಂಡರು.

ಹುಣಸೂರಲ್ಲಿ ಡಿಕೆಶಿ ಪ್ರಚಾರ

ಕೊಮ್ಮೆಗೌಡನಕೊಪ್ಪಲು ಗ್ರಾಮದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ನಿವೃತ್ತಿ ಪಡೆದುಕೊಂಡು ಮನೆಯಲ್ಲಿ ಕುಳಿತ್ತಿದ್ದ ವಿಶ್ವನಾಥ್​ಗೆ ಜೆಡಿಎಸ್, ಶಾಸಕ ಸ್ಥಾನ ಕೊಟ್ಟು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿತು‌.ಆದರೆ, ಅಧಿಕಾರ ಹಾಗೂ ಹಣದ ಆಮಿಷಕ್ಕಾಗಿ ದ್ರೋಹ ಮಾಡಿ ಬಿಜೆಪಿಗೆ ಹೋದ ಎಂದು ಏಕವಚನದಲ್ಲೇ ಟೀಕಿಸಿದರು.

ಮೈಸೂರು: ಮಾಜಿ ಸಚಿವ ಡಿ.ಕೆ. ಶಿವಕುಮಾರ್, ಹುಣಸೂರು ಉಪಚುನಾವಣೆಯ ಪ್ರಚಾರದ ಅಖಾಡಕ್ಕಿಳಿದಿದ್ದಾರೆ. ಮಾಜಿ ಸಚಿವ ವಿಶ್ವನಾಥ್ ವಿರುದ್ಧ ಕೆಂಡಾಮಂಡಲರಾಗಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಹುಣಸೂರಿನ ಬಿಳಿಕೆರೆ ಹೊಬಳಿಯ ಕೊಮ್ಮೆಗೌಡನಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು. ನಂತರ‌ ಆರತಿ ಬೆಳಗಿ ಮಹದೇಶ್ವರ ದೇವಸ್ಥಾನಕ್ಕೆ ಕಾರ್ಯಕರ್ತರು ಡಿ ಕೆ ಶಿವಕುಮಾರ್​ ಅವರನ್ನ ಬರಮಾಡಿಕೊಂಡರು.

ಹುಣಸೂರಲ್ಲಿ ಡಿಕೆಶಿ ಪ್ರಚಾರ

ಕೊಮ್ಮೆಗೌಡನಕೊಪ್ಪಲು ಗ್ರಾಮದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ನಿವೃತ್ತಿ ಪಡೆದುಕೊಂಡು ಮನೆಯಲ್ಲಿ ಕುಳಿತ್ತಿದ್ದ ವಿಶ್ವನಾಥ್​ಗೆ ಜೆಡಿಎಸ್, ಶಾಸಕ ಸ್ಥಾನ ಕೊಟ್ಟು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿತು‌.ಆದರೆ, ಅಧಿಕಾರ ಹಾಗೂ ಹಣದ ಆಮಿಷಕ್ಕಾಗಿ ದ್ರೋಹ ಮಾಡಿ ಬಿಜೆಪಿಗೆ ಹೋದ ಎಂದು ಏಕವಚನದಲ್ಲೇ ಟೀಕಿಸಿದರು.

Intro:ಡಿ.ಕೆ.ಶಿವಕುಮಾರ್ ಪ್ರಚಾರ


Body:ಡಿ.ಕೆ.ಶಿವಕುಮಾರ್ ಪ್ರಚಾರ


Conclusion:ಹುಣಸೂರು ಅಖಾಡಕ್ಕಿಳಿದ ಡಿ.ಕೆ.ಶಿವಕುಮಾರ್ , ಹರಿದು ಬಂದ ಜನಸಾಗರ
ಮೈಸೂರು: ಪೊಲಿಟಿಕಲ್ ಮಾಸ್ಟರ್ ಮೈಂಡ್ ಎಂದೇ ಬಿಂಬಿತವಾಗಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ಹುಣಸೂರು ಉಪಚುನಾವಣೆ ಅಖಾಡಕ್ಕಿಳಿದಿದ್ದಾರೆ.
ಹುಣಸೂರಿನ ಬಿಳಿಕೆರೆ ಹೋಬಳಿಯ ಕೊಮ್ಮೆಗೌಡನಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಅವರಿಗೆ ಪೂರ್ಣಕುಂಭದ ಮೂಲಕ ಸ್ವಾಗತ ಕೋರಲಾಯಿತು.ನಂತರ‌ ಅವರಿಗೆ ಆರತಿ ಬೆಳಗಿ ಮಹದೇಶ್ವರ ದೇವಸ್ಥಾನಕ್ಕೆ ಬರಮಾಡಿಕೊಳ್ಳಲಾಯಿತು.
ಮಹದೇಶ್ವರ ದೇವಸ್ಥಾನದಲ್ಲಿ ಮಂಗಳಾರತಿ ಸ್ವೀಕರಿಸಿ ನಂತರ ಪ್ರಚಾರದ ವಾಹನವೇರು ಕೊಮ್ಮೆಗೌಡನಕೊಪ್ಪಲು ಗ್ರಾಮಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ರಾಜಕೀಯ ರಿಟೈರ್ ಮೆಂಟ್ ತೆಗೆದುಕೊಂಡು ಮನೆಯಲ್ಲಿ ಕುಳಿತ್ತಿದ್ದ ವಿಶ್ವನಾಥ್ ಗೆ ಜೆಡಿಎಸ್ ಶಾಸಕ ಸ್ಥಾನ ಕೊಟ್ಟು ಪಕ್ಷದ ರಾಜ್ಯಾಧ್ಯಕ್ಷನಾಗಿ ಮಾಡಿತು‌.ಆದರೆ ಅಧಿಕಾರ ಹಾಗೂ ಹಣದ ಆಮಿಷಕ್ಕಾಗಿ ದ್ರೋಹ ಮಾಡಿ ಬಿಜೆಪಿ ಗೆ ಹೋದ ಎಂದು ಏಕವಚನದಲ್ಲಿ ಟೀಕಿಸಿದರು.
ಸಮ್ಮಿಶ್ರ ಸರ್ಕಾರ ಬೀಳಲು ಪ್ರಮುಖ ಪಾತ್ರ ವಹಿಸಿದ ವಿಶ್ವನಾಥ್ ಸೋಲಿಸಬೇಕು. ನಾನು ಜೈಲಿನಲ್ಲಿದ್ದಾಗ ಎಚ್.ಪಿ.ಮಂಜುನಾಥ್ ಗೆ ಟಿಕೆಟ್ ನೀಡುವಂತೆ ಪತ್ರ ಬರೆದಿದ್ದೆ ಎಂದರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.