ETV Bharat / state

ಮೈಸೂರಲ್ಲಿ ಪಾರಂಪರಿಕ ಆಟಗಳ ಕಲರವ: ಪಗಡೆ ಆಡಿದ್ರು ಸಚಿವ ಸೋಮಣ್ಣ-ಸಂಸದ ಪ್ರತಾಪ ಸಿಂಹ

author img

By

Published : Oct 3, 2019, 12:59 PM IST

ಕಣ್ಣಾಮುಚ್ಚಾಲೆ, ಕುಂಟಾ ಬಿಲ್ಲೆ, ಹಾವು-ಏಣಿ, ಗೋಲಿ, ಚೌಕಬಾರ, ಮೂರು ಕಾಲಿನ ಓಟ, ಹುಲಿ-ಕುರಿ, ಚೌಕಾಬಾರ ಸೇರಿದಂತೆ ಇನ್ನಿತರ ಪಾರಂಪರಿಕ ಆಟಗಳಲ್ಲಿ ಭಾಗವಹಿಸಿ ಮೈಸೂರಿಗರು ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಇದೇ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಪಗಡೆ ಆಡುವ ಮೂಲಕ ಗಮನ ಸೆಳೆದರು.

ಮೈಸೂರು ದಸರಾ ಪಾರಂಪರಿಕ ಆಟಗಳ ಸ್ಪರ್ಧೆ

ಮೈಸೂರು: ನಾಡಹಬ್ಬದ ನಿಮಿತ್ತ ಸಾಂಸ್ಕೃತಿಕ ನಗರಿ ಕರುನಾಡಿನ ಸಂಪ್ರದಾಯವನ್ನು ಮೆಲುಕು ಹಾಕಲಾಗುತ್ತದೆ. ಅಂತೆಯೇ ನಗರದಲ್ಲಿ ದೇಶಿಯ ಆಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ನಗರದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಿದ್ದ ಪಾರಂಪರಿಕ ಆಟಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಅವರು ಪಗಡೆಯಾಡುವ ಮೂಲಕ ಚಾಲನೆ ನೀಡಿದರು‌‌.

ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಪಾರಂಪರಿಕ ಆಟಗಳ ಸ್ಪರ್ಧೆ

ಕಣ್ಣಾಮುಚ್ಚಾಲೆ, ಕುಂಟಾ ಬಿಲ್ಲೆ, ಹಾವು-ಏಣಿ, ಗೋಲಿ, ಚೌಕಬಾರ, ಮೂರು ಕಾಲಿನ ಓಟ, ಹುಲಿ-ಕುರಿ, ಚೌಕಾಬಾರ ಸೇರಿದಂತೆ ಇನ್ನಿತರ ಪಾರಂಪರಿಕ ಆಟಗಳಲ್ಲಿ ಹಲವು ಮಂದಿ ಭಾಗವಹಿಸಿ ಅಚ್ಚರಿ ಜೊತೆಗೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಇನ್ನು ಇದೇ ವೇಳೆ ಸಂಸದ ಪ್ರತಾಪ ಸಿಂಹ ಮತ್ತು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಪಗಡೆ ಆಟವಾಡಿ ಗಮನ ಸೆಳೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲ್ಯದ ನೆನಪುಗಳು ಮರುಕಳಿಸಿದವು ಎಂದು ಸಂತಸ ವ್ಯಕ್ತಪಡಿಸಿದರು‌.

ಹಗ್ಗ ಕಟ್ಟಾಗಿ ಬಿದ್ದ ಮಹಿಳೆ

ಹಗ್ಗ-ಜಗ್ಗಾಟದ ಉದ್ಘಾಟನೆ ವೇಳೆ ಪಾರಂಪರಿಕ ಆಟಗಳ ಸಮಿತಿ ಸದಸ್ಯೆವೋರ್ವರು ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದರು. ಹೀಗಾಗಿ ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.

ಮೈಸೂರು: ನಾಡಹಬ್ಬದ ನಿಮಿತ್ತ ಸಾಂಸ್ಕೃತಿಕ ನಗರಿ ಕರುನಾಡಿನ ಸಂಪ್ರದಾಯವನ್ನು ಮೆಲುಕು ಹಾಕಲಾಗುತ್ತದೆ. ಅಂತೆಯೇ ನಗರದಲ್ಲಿ ದೇಶಿಯ ಆಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ನಗರದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಿದ್ದ ಪಾರಂಪರಿಕ ಆಟಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಅವರು ಪಗಡೆಯಾಡುವ ಮೂಲಕ ಚಾಲನೆ ನೀಡಿದರು‌‌.

ಮೈಸೂರು ದಸರಾ ಪ್ರಯುಕ್ತ ಆಯೋಜಿಸಲಾಗಿದ್ದ ಪಾರಂಪರಿಕ ಆಟಗಳ ಸ್ಪರ್ಧೆ

ಕಣ್ಣಾಮುಚ್ಚಾಲೆ, ಕುಂಟಾ ಬಿಲ್ಲೆ, ಹಾವು-ಏಣಿ, ಗೋಲಿ, ಚೌಕಬಾರ, ಮೂರು ಕಾಲಿನ ಓಟ, ಹುಲಿ-ಕುರಿ, ಚೌಕಾಬಾರ ಸೇರಿದಂತೆ ಇನ್ನಿತರ ಪಾರಂಪರಿಕ ಆಟಗಳಲ್ಲಿ ಹಲವು ಮಂದಿ ಭಾಗವಹಿಸಿ ಅಚ್ಚರಿ ಜೊತೆಗೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು. ಇನ್ನು ಇದೇ ವೇಳೆ ಸಂಸದ ಪ್ರತಾಪ ಸಿಂಹ ಮತ್ತು ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರು ಪಗಡೆ ಆಟವಾಡಿ ಗಮನ ಸೆಳೆದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಾಲ್ಯದ ನೆನಪುಗಳು ಮರುಕಳಿಸಿದವು ಎಂದು ಸಂತಸ ವ್ಯಕ್ತಪಡಿಸಿದರು‌.

ಹಗ್ಗ ಕಟ್ಟಾಗಿ ಬಿದ್ದ ಮಹಿಳೆ

ಹಗ್ಗ-ಜಗ್ಗಾಟದ ಉದ್ಘಾಟನೆ ವೇಳೆ ಪಾರಂಪರಿಕ ಆಟಗಳ ಸಮಿತಿ ಸದಸ್ಯೆವೋರ್ವರು ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದರು. ಹೀಗಾಗಿ ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತವಾಯಿತು.

Intro:s


Body:s


Conclusion:ಪಗಡೆ ಆಡುವ ಮೂಲಕ ಪಾರಂಪರಿಕ ಆಟಕ್ಕೆ ಚಾಲನೆ ನೀಡಿದ ಸಚಿವ ಸೋಮಣ್ಣ
ಮೈಸೂರು: ಅಳಿಗುಳಿ ಮನೆ, ಹಗ್ಗಜಗ್ಗಾಟ, ಪಗಡೆ, ಬಿಲ್ಲುಬಾಣ, ಚಿನ್ನಿದಾಡು ಸೇರಿದಂತೆ ಹಲವು ದೇಶಿಯ ಆಟಗಳು ಇಂದಿಗೂ ಪಾರಂಪರಿಕ ಆಟಗಳು ಬಾಲ್ಯದ ನೆನಪುಗಳು ನೆನಪಿಗೆ ಬರುವಂತಾಯಿತು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಪಾರಂಪರಿಕ ಆಟಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪಸಿಂಹ ಅವರು ಪಗಡೆಯಾಡುವ ಮೂಲಕ ಚಾಲನೆ ನೀಡಿದರು‌‌.
ಕಣ್ಣಾಮುಚ್ಚಾಲೆ, ಕುಂಟಾಬಿಲ್ಲೆ, ಹಾವು-ಏಣಿ,ಗೋಲಿ, ಚೌಕಬಾರ, ಮೂರು ಕಾಲಿನ ಓಟ, ಹುಲಿ-ಕುರಿ, ಚೌಕಾಬಾರ ಸೇರಿದಂತೆ ಪಾರಂಪರಿಕ ಆಟಗಳಿಗೆ ಹಲವು ಮಂದಿ ಭಾಗವಹಿಸಿ ಅಚ್ಚರಿ ಜೊತೆಗೆ ಬಾಲ್ಯದ ದಿನಗಳನ್ನು ನೆನಪು ಮಾಡಿಕೊಂಡರು.
ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸೋಮಣ್ಣ ಸಂತಸ ವ್ಯಕ್ತಪಡಿಸಿದರು‌.

ಹಗ್ಗ ಕಟ್ಟಾಗಿ ಬಿದ್ದ ಮಹಿಳೆ: ಹಗ್ಗ-ಜಗ್ಗಾಟದ ಉದ್ಘಾಟನೆ ವೇಳೆ ಪಾರಂಪರಿಕ ಆಟಗಳ ಸಮಿತಿ ಸದಸ್ಯಯೋರ್ವರು ಹಗ್ಗ ತುಂಡಾಗಿದ್ದರಿಂದ ಕೆಳಗೆ ಬಿದ್ದು,ಆಯೋಜಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.


ETV Bharat Logo

Copyright © 2024 Ushodaya Enterprises Pvt. Ltd., All Rights Reserved.