ETV Bharat / state

ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ: ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ

ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿದ್ದ ಖಾಸಗಿ ಕಂಪನಿ ಸಿಬ್ಬಂದಿ ಕಣ್ಣಿಗೆ ಖಾರದಪುಡಿ ಎರಚಿ ಹಣ ದೋಚಿರುವ ಘಟನೆ ನಡೆದಿದೆ.

author img

By

Published : Jul 28, 2023, 3:49 PM IST

Updated : Jul 28, 2023, 7:10 PM IST

crime-6-lakh-robbery-by-throwing-chilli-powder-in-the-eyes-in-mysuru
ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ: ಖದೀಮನ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ

ಮೈಸೂರು: ಬ್ಯಾಂಕಿಗೆ ಹಣ ಕಟ್ಟಲು ಬಂದಿದ್ದ ಖಾಸಗಿ ಕಂಪನಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ, ಹಣವಿದ್ದ ಬ್ಯಾಗ್ ದೋಚಿ ಖದೀಮ ಪರಾರಿಯಾಗಿರುವ ಘಟನೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಬಿಲ್ ಕಲೆಕ್ಟರ್ ಆಗಿರುವ ಕೆ.ತುಳಸಿದಾಸ್ ಎಂಬುವವರ ಬಳಿ ಹಣವಿದ್ದ ಬ್ಯಾಗ್ ​ಅನ್ನು ಖದೀಮ ಬ್ಯಾಂಕಿನ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದಾನೆ.

6 ಲಕ್ಷ ಹಣವಿದ್ದ ಬ್ಯಾಗ್ ದರೋಡೆ: ತುಳಸಿದಾಸ್ ನಿತ್ಯ ಬೆಳಗ್ಗೆ ಬ್ಯಾಗ್​ನಲ್ಲಿ ಕಂಪನಿಯ ಹಣ ಇಟ್ಟುಕೊಂಡು ಬ್ಯಾಂಕ್​ಗೆ ಸಂದಾಯ ಮಾಡಲು ತೆರಳುತ್ತಿದ್ದರು. ನಿನ್ನೆ ಎಂದಿನಂತೆ ಬ್ಯಾಂಕ್​ಗೆ ಹಣ ಸಂದಾಯ ಮಾಡಲು ಕಂಪನಿಯ ವಾಹನದಿಂದ ಇಳಿದು, ಹಣವಿದ್ದ ಬ್ಯಾಗ್​ ಕೈನಲ್ಲಿ ಹಿಡಿದು ಬ್ಯಾಂಕ್​ ಬಳಿಗೆ ತೆರಳಲು ಮುಂದಾಗಿದ್ದರು. ಇದೇ ವೇಳೆ ಖದೀಮನೊಬ್ಬ ಏಕಾಏಕಿ ಬಂದು ತುಳಸಿದಾಸ್ ಕಣ್ಣಿಗೆ ಖಾರದಪುಡಿ ಎರಚಿ ಹಣವಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. ಕಳವಾದ ಬ್ಯಾಗ್​ನಲ್ಲಿ 6 ಲಕ್ಷ ನಗದು ಹಾಗೂ ಚೆಕ್​ಗಳಿದ್ದವು ಎಂದು ತಿಳಿದು ಬಂದಿದೆ. ಕಳ್ಳ ಕ್ಷಣಮಾತ್ರದಲ್ಲಿ ತುಳಸಿದಾಸ್ ಅವರ ಕೈನಲ್ಲಿದ್ದ ಬ್ಯಾಗ್ ಕಿತ್ತುಕೊಂಡು, ಬೈಕ್​ನಲ್ಲಿ ಕಾಯುತ್ತಿದ್ದ ಸಹಚರನೊಂದಿಗೆ ಪರಾರಿಯಾಗಿದ್ದಾನೆ.

ಪೂರ್ವ ಯೋಜಿತ ದರೋಡೆ ಎಂಬ ಶಂಕೆ: ಎಸ್​ಎಸ್​ಸಿ ಕಂಪನಿಯ ಬಿಲ್ ಕಲೆಕ್ಟರ್ ಕೆ.ತುಳಸಿದಾಸ್ ಪ್ರತಿದಿನ ಬೆಳಗ್ಗೆ ಹಣ ಸಂದಾಯ ಮಾಡಲು ಬ್ಯಾಂಕ್​ಗೆ ಬರುತ್ತಿರುವುದನ್ನು ಖದೀಮರು ಕೆಲವು ದಿನಗಳಿಂದ ನಿಗಾವಹಿಸಿ, ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಡಿಸಿಪಿ ಮುತ್ತುರಾಜ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Mangaluru crime: ಸುಲಿಗೆ ಪ್ರಕರಣದಲ್ಲಿ 23 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ

ದಾವಣಗೆರೆಯಲ್ಲಿ 33 ಲಕ್ಷ ಮೌಲ್ಯದ ಚಿನ್ನಾಭರಣಕ್ಕೆ ಕನ್ನ: ಮತ್ತೊಂದೆಡೆ, ಹಾಡಹಗಲೇ ಉಪನ್ಯಾಸಕರೊಬ್ಬರ ಮನೆಗೆ ಖದೀಮರು ಕನ್ನ ಹಾಕಿ, ಚಿನ್ನಾಭರಣ ಮತ್ತು ನಗದು ಸೇರಿ 33.66 ಲಕ್ಷ ರೂ ಎಗರಿಸಿ ಪಾರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಅಣ್ಣಮ್ಮ ಪ್ರೌಢಶಾಲೆಯ ಬಳಿಯ ಮನೆಯೊಂದರಲ್ಲಿ ನಡೆದಿತ್ತು.‌ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿದ್ದೇಶ್ವರಪ್ಪ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿತ್ತು. ಮನೆ ಮಾಲೀಕರಾದ ಸಿದ್ದೇಶ್ವರಪ್ಪ ಅವರ ಪತ್ನಿಯು ಪ್ರೌಢ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆ ತಮ್ಮ ಮನೆಗೆ ಬೀಗ ಹಾಕಿ ತಮ್ಮ ಪುತ್ರಿಯನ್ನು ದಾವಣಗೆರೆ ನಗರದ ಖಾಸಗಿ ಕಾಲೇಜಿಗೆ ಬಿಡಲು ತೆರಳಿದಾಗ ಘಟನೆ ನಡೆದಿತ್ತು. ಕಬ್ಬಿಣದ ಸರಳುಗಳನ್ನು ಕತ್ತರಿಸಿರುವ ಕಳ್ಳರು ಕಿಟಕಿಯ ಮೂಲಕ ಮನೆಯ ಬಾಗಿಲು ಮುರಿದು ಕೃತ್ಯ ಎಸಗಿದ್ದರು. ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಅದರಲ್ಲಿದ್ದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ, 17.80 ಲಕ್ಷ ರೂ ಮೌಲ್ಯದ ಬೆಳ್ಳಿ ಸೇರಿದಂತೆ 1.50 ಲಕ್ಷ ನಗದು ಹಣ ದೋಚಿ ಕಾಲ್ಕಿತ್ತಿದ್ದರು.

ಕಣ್ಣಿಗೆ ಖಾರದಪುಡಿ ಎರಚಿ 6 ಲಕ್ಷ ದರೋಡೆ

ಮೈಸೂರು: ಬ್ಯಾಂಕಿಗೆ ಹಣ ಕಟ್ಟಲು ಬಂದಿದ್ದ ಖಾಸಗಿ ಕಂಪನಿ ಸಿಬ್ಬಂದಿ ಕಣ್ಣಿಗೆ ಖಾರದ ಪುಡಿ ಎರಚಿ, ಹಣವಿದ್ದ ಬ್ಯಾಗ್ ದೋಚಿ ಖದೀಮ ಪರಾರಿಯಾಗಿರುವ ಘಟನೆ ನಗರದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ. ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದ ವ್ಯಾಪ್ತಿಯಲ್ಲಿ ಖಾಸಗಿ ಕಂಪನಿಯ ಬಿಲ್ ಕಲೆಕ್ಟರ್ ಆಗಿರುವ ಕೆ.ತುಳಸಿದಾಸ್ ಎಂಬುವವರ ಬಳಿ ಹಣವಿದ್ದ ಬ್ಯಾಗ್ ​ಅನ್ನು ಖದೀಮ ಬ್ಯಾಂಕಿನ ಮುಂದೆಯೇ ಅಪಹರಿಸಿಕೊಂಡು ಹೋಗಿದ್ದಾನೆ.

6 ಲಕ್ಷ ಹಣವಿದ್ದ ಬ್ಯಾಗ್ ದರೋಡೆ: ತುಳಸಿದಾಸ್ ನಿತ್ಯ ಬೆಳಗ್ಗೆ ಬ್ಯಾಗ್​ನಲ್ಲಿ ಕಂಪನಿಯ ಹಣ ಇಟ್ಟುಕೊಂಡು ಬ್ಯಾಂಕ್​ಗೆ ಸಂದಾಯ ಮಾಡಲು ತೆರಳುತ್ತಿದ್ದರು. ನಿನ್ನೆ ಎಂದಿನಂತೆ ಬ್ಯಾಂಕ್​ಗೆ ಹಣ ಸಂದಾಯ ಮಾಡಲು ಕಂಪನಿಯ ವಾಹನದಿಂದ ಇಳಿದು, ಹಣವಿದ್ದ ಬ್ಯಾಗ್​ ಕೈನಲ್ಲಿ ಹಿಡಿದು ಬ್ಯಾಂಕ್​ ಬಳಿಗೆ ತೆರಳಲು ಮುಂದಾಗಿದ್ದರು. ಇದೇ ವೇಳೆ ಖದೀಮನೊಬ್ಬ ಏಕಾಏಕಿ ಬಂದು ತುಳಸಿದಾಸ್ ಕಣ್ಣಿಗೆ ಖಾರದಪುಡಿ ಎರಚಿ ಹಣವಿದ್ದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದಾನೆ. ಕಳವಾದ ಬ್ಯಾಗ್​ನಲ್ಲಿ 6 ಲಕ್ಷ ನಗದು ಹಾಗೂ ಚೆಕ್​ಗಳಿದ್ದವು ಎಂದು ತಿಳಿದು ಬಂದಿದೆ. ಕಳ್ಳ ಕ್ಷಣಮಾತ್ರದಲ್ಲಿ ತುಳಸಿದಾಸ್ ಅವರ ಕೈನಲ್ಲಿದ್ದ ಬ್ಯಾಗ್ ಕಿತ್ತುಕೊಂಡು, ಬೈಕ್​ನಲ್ಲಿ ಕಾಯುತ್ತಿದ್ದ ಸಹಚರನೊಂದಿಗೆ ಪರಾರಿಯಾಗಿದ್ದಾನೆ.

ಪೂರ್ವ ಯೋಜಿತ ದರೋಡೆ ಎಂಬ ಶಂಕೆ: ಎಸ್​ಎಸ್​ಸಿ ಕಂಪನಿಯ ಬಿಲ್ ಕಲೆಕ್ಟರ್ ಕೆ.ತುಳಸಿದಾಸ್ ಪ್ರತಿದಿನ ಬೆಳಗ್ಗೆ ಹಣ ಸಂದಾಯ ಮಾಡಲು ಬ್ಯಾಂಕ್​ಗೆ ಬರುತ್ತಿರುವುದನ್ನು ಖದೀಮರು ಕೆಲವು ದಿನಗಳಿಂದ ನಿಗಾವಹಿಸಿ, ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಹೆಬ್ಬಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಡಿಸಿಪಿ ಮುತ್ತುರಾಜ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ. ಇನ್ನು ಖದೀಮನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: Mangaluru crime: ಸುಲಿಗೆ ಪ್ರಕರಣದಲ್ಲಿ 23 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಕೊನೆಗೂ ಬಂಧನ

ದಾವಣಗೆರೆಯಲ್ಲಿ 33 ಲಕ್ಷ ಮೌಲ್ಯದ ಚಿನ್ನಾಭರಣಕ್ಕೆ ಕನ್ನ: ಮತ್ತೊಂದೆಡೆ, ಹಾಡಹಗಲೇ ಉಪನ್ಯಾಸಕರೊಬ್ಬರ ಮನೆಗೆ ಖದೀಮರು ಕನ್ನ ಹಾಕಿ, ಚಿನ್ನಾಭರಣ ಮತ್ತು ನಗದು ಸೇರಿ 33.66 ಲಕ್ಷ ರೂ ಎಗರಿಸಿ ಪಾರಾರಿಯಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ಅಣ್ಣಮ್ಮ ಪ್ರೌಢಶಾಲೆಯ ಬಳಿಯ ಮನೆಯೊಂದರಲ್ಲಿ ನಡೆದಿತ್ತು.‌ ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಸಿದ್ದೇಶ್ವರಪ್ಪ ಎಂಬವರಿಗೆ ಸೇರಿದ ಮನೆಯಲ್ಲಿ ಕಳ್ಳತನ ಆಗಿತ್ತು. ಮನೆ ಮಾಲೀಕರಾದ ಸಿದ್ದೇಶ್ವರಪ್ಪ ಅವರ ಪತ್ನಿಯು ಪ್ರೌಢ ಶಾಲೆಯಲ್ಲಿ ಸರ್ಕಾರಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಗುರುವಾರ ಮಧ್ಯಾಹ್ನದ ವೇಳೆ ತಮ್ಮ ಮನೆಗೆ ಬೀಗ ಹಾಕಿ ತಮ್ಮ ಪುತ್ರಿಯನ್ನು ದಾವಣಗೆರೆ ನಗರದ ಖಾಸಗಿ ಕಾಲೇಜಿಗೆ ಬಿಡಲು ತೆರಳಿದಾಗ ಘಟನೆ ನಡೆದಿತ್ತು. ಕಬ್ಬಿಣದ ಸರಳುಗಳನ್ನು ಕತ್ತರಿಸಿರುವ ಕಳ್ಳರು ಕಿಟಕಿಯ ಮೂಲಕ ಮನೆಯ ಬಾಗಿಲು ಮುರಿದು ಕೃತ್ಯ ಎಸಗಿದ್ದರು. ಹಗಲು ಹೊತ್ತಿನಲ್ಲೇ ಮನೆಗೆ ನುಗ್ಗಿದ ಕಳ್ಳರು ಬೀರುವಿನ ಬೀಗ ಒಡೆದು ಅದರಲ್ಲಿದ್ದ 15 ಲಕ್ಷ ರೂ ಮೌಲ್ಯದ ಚಿನ್ನಾಭರಣ, 17.80 ಲಕ್ಷ ರೂ ಮೌಲ್ಯದ ಬೆಳ್ಳಿ ಸೇರಿದಂತೆ 1.50 ಲಕ್ಷ ನಗದು ಹಣ ದೋಚಿ ಕಾಲ್ಕಿತ್ತಿದ್ದರು.

Last Updated : Jul 28, 2023, 7:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.