ETV Bharat / state

ಸರ್ಕಾರ ಕಿತ್ತು ಹಾಕೋಕೆ ಅದೇನು ಗೋಲಿ ಆಟವೇ, ಬಿಜೆಪಿಯವರಿಗೆ ಸೆನ್ಸ್​​ ಇಲ್ಲ: ಸಿದ್ದರಾಮಯ್ಯ - undefined

ಯಡಿಯೂರಪ್ಪ ಎಷ್ಟು ದಿನಗಳಿಂದ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಅದೇನು ಗೋಲಿ ಆಟವೇ? ಅವರಿಗೆ ಸೆನ್ಸ್ ಇಲ್ಲ ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಸಿದ್ದರಾಮಯ್ಯ
author img

By

Published : Apr 15, 2019, 1:40 PM IST

ಮೈಸೂರು: ಚುನಾವಣೆಯ ನಂತರ ಸರ್ಕಾರವನ್ನು ಕಿತ್ತು ಹಾಕೋಕೆ ಅದೇನು ಗೋಲಿ ಆಟವೇ? ಬಿಜೆಪಿ ಅವರಿಗೆ ಸೆನ್ಸ್ ಇಲ್ಲ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇಂದು ಅವರ ಮನೆಯ ಹತ್ತಿರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಚುನಾವಣೆಯ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳುವ ಬಗ್ಗೆ ಕೋಪದಿಂದಲೇ ಪ್ರತಿಕ್ರಿಯಿಸಿದದರು. ಯಡಿಯೂರಪ್ಪ ಎಷ್ಟು ದಿನಗಳಿಂದ ಇದೇ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ನನಗಿಂತ ಮೊದಲಿಂದಲೂ ಈ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ಅವರ ಕೈಯಲ್ಲಿ ಸರ್ಕಾರವನ್ನು ಕಿತ್ತು ಹಾಕಲು ಆಗಿದೆಯಾ? ಅದೇನು ಗೋಲಿ ಆಟವೇ? ಅವರಿಗೆ ಸೆನ್ಸ್ ಇಲ್ಲ ಅಷ್ಟೇ. ಮೂವತ್ತು ಕೋಟಿ ಖರ್ಚು ಮಾಡಿ ಎಂಎಲ್ಎಗಳನ್ನು ಕೊಂಡುಕೊಳ್ಳಲು ಆಗುತ್ತಾ? ಬಿಜೆಪಿ ಅವರಿಗೆ ಮಾನ ಮಾರ್ಯಾದೆ ಇಲ್ಲ. ಬುದ್ಧಿನೂ ಇಲ್ಲ. ಅದೊಂದು ಪೊಲಿಟಿಕಲ್​ ಪಾರ್ಟಿನಾ, ಅವರೊಬ್ಬ ಲೀಡರಾ ಎಂದು ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ

ಲೋಕಸಭೆ ಗೆದ್ದರೆ ನನ್ನ ರಾಜಕೀಯ ಮುಗಿಯುತ್ತದೆ ಎಂಬ ಯಡಿಯೂರಪ್ಪರ ಹೇಳಿಕೆಗೆ ಪ್ರತಿಕ್ತಿಯಿಸಿ, ಅವರು ಏನಾದರೂ ಮಾತನಾಡಲಿ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಜನರು ಬುದ್ಧಿವಂತರಿದ್ದಾರೆ. ಅವರಿಗೆ ಇವರು ಮಾಡುತ್ತಿರುವ ಯೋಜನೆಗಳ ಬಗ್ಗೆ ಅರಿವಿದೆ. ನಾವು ತಿಳಿದುಕೊಂಡಿದ್ದೀವಿ ಅವರು ಪದ್ದರು ಅಂತ. ನಮಗಿಂತ ಬುದ್ಧಿವಂತರು ಅವರು ಎಂದರು.

ಸಿದ್ದು ಯು ಟರ್ನ್:

ನಿನ್ನೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಇಂದು ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲುವುದಿಲ್ಲ. ಇನ್ನೂ ನಾಲ್ಕು ವರ್ಷ ಇದೆ. ಯೋಚನೆ ಮಾಡುತ್ತೇನೆ ಎಂದರು.

ಐಟಿ ಕಚೇರಿಯ ಮುಂದೆ ಪ್ರತಿಭಟನೆಗೆ ಸಂಬಂಧಿಸಿದಂತೆ ನನಗೂ ನೋಟಿಸ್ ಬಂದಿದೆ. ಉತ್ತರ ನೀಡಲು 15 ದಿನಗಳ ಕಾಲಾವಕಾಶ ಕೇಳಿದ್ದೇನೆ. ಇನ್ನೂ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವೈನಾಡು ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ಅವರ ಮಾತು ಪ್ರಧಾನಮಂತ್ರಿಯ ರೀತಿಯಲ್ಲಿ ಇಲ್ಲ. ಸಂತೆಯಲ್ಲಿ ನಿಂತು ವ್ಯಾಪಾರ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

ಮೈಸೂರು: ಚುನಾವಣೆಯ ನಂತರ ಸರ್ಕಾರವನ್ನು ಕಿತ್ತು ಹಾಕೋಕೆ ಅದೇನು ಗೋಲಿ ಆಟವೇ? ಬಿಜೆಪಿ ಅವರಿಗೆ ಸೆನ್ಸ್ ಇಲ್ಲ ಎಂದು ಸಿದ್ದರಾಮಯ್ಯ, ಯಡಿಯೂರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಇಂದು ಅವರ ಮನೆಯ ಹತ್ತಿರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಯಡಿಯೂರಪ್ಪ ಚುನಾವಣೆಯ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳುವ ಬಗ್ಗೆ ಕೋಪದಿಂದಲೇ ಪ್ರತಿಕ್ರಿಯಿಸಿದದರು. ಯಡಿಯೂರಪ್ಪ ಎಷ್ಟು ದಿನಗಳಿಂದ ಇದೇ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ನನಗಿಂತ ಮೊದಲಿಂದಲೂ ಈ ರೀತಿ ಹೇಳಿಕೊಂಡು ಬರುತ್ತಿದ್ದಾರೆ. ಅವರ ಕೈಯಲ್ಲಿ ಸರ್ಕಾರವನ್ನು ಕಿತ್ತು ಹಾಕಲು ಆಗಿದೆಯಾ? ಅದೇನು ಗೋಲಿ ಆಟವೇ? ಅವರಿಗೆ ಸೆನ್ಸ್ ಇಲ್ಲ ಅಷ್ಟೇ. ಮೂವತ್ತು ಕೋಟಿ ಖರ್ಚು ಮಾಡಿ ಎಂಎಲ್ಎಗಳನ್ನು ಕೊಂಡುಕೊಳ್ಳಲು ಆಗುತ್ತಾ? ಬಿಜೆಪಿ ಅವರಿಗೆ ಮಾನ ಮಾರ್ಯಾದೆ ಇಲ್ಲ. ಬುದ್ಧಿನೂ ಇಲ್ಲ. ಅದೊಂದು ಪೊಲಿಟಿಕಲ್​ ಪಾರ್ಟಿನಾ, ಅವರೊಬ್ಬ ಲೀಡರಾ ಎಂದು ಬಿಜೆಪಿ ಮೇಲೆ ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ

ಲೋಕಸಭೆ ಗೆದ್ದರೆ ನನ್ನ ರಾಜಕೀಯ ಮುಗಿಯುತ್ತದೆ ಎಂಬ ಯಡಿಯೂರಪ್ಪರ ಹೇಳಿಕೆಗೆ ಪ್ರತಿಕ್ತಿಯಿಸಿ, ಅವರು ಏನಾದರೂ ಮಾತನಾಡಲಿ. ಅದಕ್ಕೆ ನಾನು ಪ್ರತಿಕ್ರಿಯೆ ನೀಡಲ್ಲ. ಜನರು ಬುದ್ಧಿವಂತರಿದ್ದಾರೆ. ಅವರಿಗೆ ಇವರು ಮಾಡುತ್ತಿರುವ ಯೋಜನೆಗಳ ಬಗ್ಗೆ ಅರಿವಿದೆ. ನಾವು ತಿಳಿದುಕೊಂಡಿದ್ದೀವಿ ಅವರು ಪದ್ದರು ಅಂತ. ನಮಗಿಂತ ಬುದ್ಧಿವಂತರು ಅವರು ಎಂದರು.

ಸಿದ್ದು ಯು ಟರ್ನ್:

ನಿನ್ನೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಇಂದು ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮಾತ್ರ ಚುನಾವಣೆಗೆ ನಿಲ್ಲುವುದಿಲ್ಲ. ಇನ್ನೂ ನಾಲ್ಕು ವರ್ಷ ಇದೆ. ಯೋಚನೆ ಮಾಡುತ್ತೇನೆ ಎಂದರು.

ಐಟಿ ಕಚೇರಿಯ ಮುಂದೆ ಪ್ರತಿಭಟನೆಗೆ ಸಂಬಂಧಿಸಿದಂತೆ ನನಗೂ ನೋಟಿಸ್ ಬಂದಿದೆ. ಉತ್ತರ ನೀಡಲು 15 ದಿನಗಳ ಕಾಲಾವಕಾಶ ಕೇಳಿದ್ದೇನೆ. ಇನ್ನೂ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುವ ನರೇಂದ್ರ ಮೋದಿ ಅವರು ರಾಹುಲ್ ಗಾಂಧಿ ವೈನಾಡು ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ. ಅವರ ಮಾತು ಪ್ರಧಾನಮಂತ್ರಿಯ ರೀತಿಯಲ್ಲಿ ಇಲ್ಲ. ಸಂತೆಯಲ್ಲಿ ನಿಂತು ವ್ಯಾಪಾರ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.

Intro:ಮೈಸೂರು: ಚುನಾವಣೆಯ ನಂತರ ಸರ್ಕಾರವನ್ನು ಕಿತ್ತು ಹಾಕುವುದು ಗೋಲಿ ಆಟನಾ, ಬಿಜೆಪಿ ಅವರಿಗೆ ಸೆನ್ಸ್ ಇಲ್ಲ ಎಂದು ಸಿದ್ದರಾಮಯ್ಯ ಯಡಿಯೂರಪ್ಪ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.


Body:ಇಂದು ಅವರ ಮನೆಯ ಹತ್ತಿರ ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ ಯಡಿಯೂರಪ್ಪ ಚುನಾವಣೆಯ ನಂತರ ಸರ್ಕಾರ ಬಿದ್ದು ಹೋಗುತ್ತದೆ ಎಂದು ಪದೇ ಪದೇ ಹೇಳುವ ಬಗ್ಗೆ ಕೋಪದಿಂದಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಯಡಿಯೂರಪ್ಪ ಎಷ್ಟು ದಿನಗಳಿಂದ ಇದೇ ರೀತಿ ಹೇಳಿಕೊಂಡು ಬರುತ್ತಿದ್ದಾರೆ.
ಅವರ ಕೈಯಲ್ಲಿ ಚುನಾಯಿತ ಸರ್ಕಾರವನ್ನು ಕಿತ್ತು ಹಾಕಲು ಅದೇನು ಗೋಲಿ ಆಟವಾ ಸೆನ್ಸ್ ಇಲ್ಲ ಅಷ್ಟೇ ದುಡ್ಡಿದ್ದರೆ ಎಂಎಲ್ಎ ಗಳನ್ನು ಕೊಂಡುಕೊಂಡು ಸರ್ಕಾರವನ್ನು ಕಿತ್ತು ಹಾಕುವ ಬಗ್ಗೆ ಮಾತನಾಡುವ ಬಿಜೆಪಿ ಅವರಿಗೆ ಬುದ್ದಿ ಇಲ್ಲ, ಮಾನ ಮರ್ಯಾದೆ ಇಲ್ಲ, ತತ್ವ ಸಿದ್ದಾಂತವಿಲ್ಲ, ಬಿಜೆಪಿ ಒಂದು ರಾಜಕೀಯ ಪಕ್ಷನಾ ಅವನೊಬ್ಬ ಲೀಡರ್ ಹಾ ಎಂದು ವಾಗ್ದಾಳಿ ನಡೆಸಿದರು.

ಸಿದ್ದು ಯುಟರ್ನ್: ನೆನ್ನೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದ ಸಿದ್ದರಾಮಯ್ಯ ಇಂದು ನಾನು ಚಾಮುಂಡೇಶ್ವರಿ ಇಂದ ಮಾತ್ರ ಚುನಾವಣೆಗೆ ನಿಲ್ಲುವುದಿಲ್ಲ ಇನ್ನೂ ನಾಲ್ಕು ವರ್ಷ ಇದೇ ಯೋಚನೆ ಮಾಡುತ್ತೇನೆ ಎಂದು ಯುಟರ್ನ್ ಮಾಡಿದ ಸಿದ್ದರಾಮಯ್ಯ ಐಟಿ ಕಚೇರಿಯ ಮುಂದೆ ಪ್ರತಿಭಟನೆಗೆ ಸಂಬಂಧಿಸಿದಂತೆ ನನಗೂ ನೋಟಿಸ್ ಬಂದಿದೆ ಉತ್ತರ ನೀಡಲು ೧೫ ದಿನಗಳ ಕಾಲಾವಕಾಶ ಕೇಳಿದ್ದೇನೆ ಎಂದರು.
ಇನ್ನೂ ಭಾವನಾತ್ಮಕ ವಿಚಾರಗಳ ಬಗ್ಗೆ ಮಾತನಾಡುವ ನರೇಂದ್ರ ಮೋದಿ ರಾಹುಲ್ ಗಾಂಧಿ ವೈನಾಡು ಸ್ಪರ್ಧೆಯ ಬಗ್ಗೆ ಮಾತನಾಡುತ್ತಾರೆ ಅವರ ಮಾತು ಪ್ರಧಾನ ಮಂತ್ರಿಯ ರೀತಿಯಲ್ಲಿ ಇಲ್ಲ ಸಂತೆಯಲ್ಲಿ ನಿಂತು ವ್ಯಾಪಾರ ಮಾಡುವ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಪ್ರಧಾನಮಂತ್ರಿಯ ವಿರುದ್ದ ವಾಗ್ದಾಳಿ ನಡೆಸಿ ಕೇಂದ್ರದ ಬಿಜೆಪಿ ಸರ್ಕಾರ ೧೦೦ ರಷ್ಟು ಭ್ರಷ್ಟ ಸರ್ಕಾರ ಎಂದರು.


Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.