ETV Bharat / state

ಶುಗರ್​​​ ಕಾರ್ಖಾನೆಯ ಡಿಸ್ಟಲರಿ ಘಟಕ ಮುಚ್ಚುವಂತೆ ರೈತರು, ಗ್ರಾಮಸ್ಥರ ಆಗ್ರಹ - undefined

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿ ಕಾರ್ಖಾನೆಯ ಡಿಸ್ಟಲರಿ ಘಟಕವನ್ನು ಮುಚ್ಚುವಂತೆ ಆಗ್ರಹಿಸಿ 8 ಗ್ರಾಮಗಳ ಜನರು ಪ್ರತಿಭಟನೆ ನಡೆಸಿದ್ದಾರೆ.

ಡಿಸ್ಟಲರಿ ಘಟಕ ಮುಚ್ಚುವಂತೆ 8 ಗ್ರಾಮಸ್ಥರ ಆಗ್ರಹ
author img

By

Published : Jun 26, 2019, 5:46 PM IST

ಮೈಸೂರು: ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಡಿಸ್ಟಲರಿ ಘಟಕ ಹೊರ ಬಿಡುತ್ತಿರುವ ತ್ಯಾಜ್ಯದ ನೀರು ಗ್ರಾಮಸ್ಥರ ಆರೋಗ್ಯ ಹಾಗೂ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ 8 ಗ್ರಾಮಸ್ಥರು ಹಾಗೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಘಟಕವನ್ನು ಮುಚ್ಚಬೇಕು ಎಂದು ವಿವಿಧ ರೈತಪರ ಸಂಘಟನೆಗಳು, ಗ್ರಾಮಸ್ಥರು ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೆತ್ತಿಕೊಂಡಿದ್ದಾರೆ.

ಡಿಸ್ಟಲರಿ ಘಟಕ ಮುಚ್ಚುವಂತೆ 8 ಗ್ರಾಮಸ್ಥರ ಆಗ್ರಹ

ಒಬ್ಬರ ಲಾಭಕ್ಕಾಗಿ ಸಾವಿರಾರು ಜನರನ್ನು ಸಂಕಷ್ಟಕ್ಕೆ ದೂಡುವುದು ಯಾವ ನ್ಯಾಯ? ಇಂಥ ನೀರನ್ನು ಅವರು ಕುಡಿದು ತೋರಿಸಲಿ. ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಕೃಷಿ, ಕೂಲಿ ಕಾರ್ಮಿಕರೇ ಆಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹೀಗೇ ಮುಂದುವರೆದರೆ 8 ಗ್ರಾಮಗಳ ಜನರ ಆರೋಗ್ಯದ ಜತೆಗೆ ಬದುಕು ಬೀದಿ ಪಾಲಾಗುತ್ತದೆ. ಇಲ್ಲಿನ ಗ್ರಾಮೀಣ ಸೊಗಡು, ಸಂಸ್ಕೃತಿಯು ಅಳಿವಿನಂಚಿಗೆ ಸರಿಯುತ್ತದೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಅನಿರ್ಧಿಷ್ಟಾವಧಿ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಮೈಸೂರು: ನಂಜನಗೂಡು ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಡಿಸ್ಟಲರಿ ಘಟಕ ಹೊರ ಬಿಡುತ್ತಿರುವ ತ್ಯಾಜ್ಯದ ನೀರು ಗ್ರಾಮಸ್ಥರ ಆರೋಗ್ಯ ಹಾಗೂ ಬೆಳೆಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಇದರಿಂದ 8 ಗ್ರಾಮಸ್ಥರು ಹಾಗೂ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೂಡಲೇ ಘಟಕವನ್ನು ಮುಚ್ಚಬೇಕು ಎಂದು ವಿವಿಧ ರೈತಪರ ಸಂಘಟನೆಗಳು, ಗ್ರಾಮಸ್ಥರು ಅನಿರ್ಧಿಷ್ಟಾವಧಿ ಪ್ರತಿಭಟನೆ ಕೈಗೆತ್ತಿಕೊಂಡಿದ್ದಾರೆ.

ಡಿಸ್ಟಲರಿ ಘಟಕ ಮುಚ್ಚುವಂತೆ 8 ಗ್ರಾಮಸ್ಥರ ಆಗ್ರಹ

ಒಬ್ಬರ ಲಾಭಕ್ಕಾಗಿ ಸಾವಿರಾರು ಜನರನ್ನು ಸಂಕಷ್ಟಕ್ಕೆ ದೂಡುವುದು ಯಾವ ನ್ಯಾಯ? ಇಂಥ ನೀರನ್ನು ಅವರು ಕುಡಿದು ತೋರಿಸಲಿ. ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಕೃಷಿ, ಕೂಲಿ ಕಾರ್ಮಿಕರೇ ಆಗಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಹೀಗೇ ಮುಂದುವರೆದರೆ 8 ಗ್ರಾಮಗಳ ಜನರ ಆರೋಗ್ಯದ ಜತೆಗೆ ಬದುಕು ಬೀದಿ ಪಾಲಾಗುತ್ತದೆ. ಇಲ್ಲಿನ ಗ್ರಾಮೀಣ ಸೊಗಡು, ಸಂಸ್ಕೃತಿಯು ಅಳಿವಿನಂಚಿಗೆ ಸರಿಯುತ್ತದೆ. ನಮ್ಮ ಬೇಡಿಕೆ ಈಡೇರಿಸುವವರೆಗೂ ಅನಿರ್ಧಿಷ್ಟಾವಧಿ ಹೋರಾಟವನ್ನು ಕೈಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

Intro:Body:ಬಣ್ಣಾರಿ ಅಮ್ಮನ್ ಡಿಸ್ಟಲರಿ ಘಟಕ ಮುಚ್ಚುವಂತೆ ಗ್ರಾಮಸ್ಥರ ಅನಿರ್ದಿಷ್ಟವಾಗಿ ಪ್ರತಿಭಟನೆ
ಮೈಸೂರು: ನಂಜನಗೂಡು ತಾಲ್ಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಡಿಸ್ಟಲರಿ ಘಟಕವನ್ನು ಮುಚ್ಚುವಂತೆ ೮ಗ್ರಾಮಸ್ಥರು ರೈತ ಸಂಘಟನೆಯೊಂದಿಗೆ ಜೊತೆಗೂಡಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಿದರು.
ಬಣ್ಣರಿ ಅಮ್ಮನ್ ಶುಗರ್ ಕಾರ್ಖಾನೆ ಒಳಗಿರುವ ಡಿಸ್ಟಲರಿ ಘಟಕದಿಂದ ಜಮೀನುಗಳ ಬೆಳೆಗಳ ಮೇಲೆ ತೊಂದರೆಯಾಗುತ್ತಿದ್ದೆ,ಅಲ್ಲದೇ ಕುಡಿಯುವ ‌ನೀರಿನ ಮೇಲೂ ಪರಿಣಾಮ ಬೀರುತ್ತಿದೆ .ಇಂತಹ ಘಟಕವನ್ನು ಮುಚ್ಚಿ ಸುತ್ತಮುತ್ತಲ ಗ್ರಾಮಸ್ಥರಿಗೂ ಹಾಗೂ ರೈತರಿಗೂ ಅನುಕೂಲ ಮಾಡಿಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಆದರೆ ಇದರ ಬಗ್ಗೆ ತಲೆ ಹಾಕದೇ ಆರಾಮಾಗಿದ್ದಾರೆ.ಆರೋಗ್ಯದ ಮೇಲೆ ಪರಿಣಾಮ ಬೀರಿದರೆ ಯಾರು ಹೊಣೆ ಎಂದು ಗ್ರಾಮಸ್ಥರ ಪ್ರಶ್ನೆಯಾಗಿದೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.