ETV Bharat / state

ಜಿಲ್ಲೆಯ ಅಭಿವೃದ್ಧಿಗಾಗಿ ಬಿಎಸ್‌ವೈ ಬಳಿ ಹೋದರೆ ತಪ್ಪೇನಿದೆ: ಚಲುವರಾಯಸ್ವಾಮಿ ಪ್ರಶ್ನೆ - mandya latest news

ಒಂದು ವಾರದಲ್ಲಿ ಕೆ.ಆರ್.ಪೇಟೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಒಂದೂವರೆ ವರ್ಷ ಒಳ್ಳೆಯದೋ ಕೆಟ್ಟದ್ದೋ ಅಧಿಕಾರ ಅನುಭವಿಸಿದ್ದೇವೆ. ಮೈತ್ರಿ ಮಾಡಿಕೊಂಡರೂ ಅಸಮಾಧಾನವಿಲ್ಲ. ಮೈತ್ರಿಗೆ ನಮ್ಮ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ಅವರಿಗೆ ದೊಡ್ಡವರಿಗೆ ಬಿಟ್ಟ ವಿಚಾರ ಎಂದರು.

ಚಲುವರಾಯಸ್ವಾಮಿ
author img

By

Published : Aug 3, 2019, 6:17 PM IST

ಮಂಡ್ಯ: ಅನರ್ಹ ಶಾಸಕರ ವಿಚಾರವಾಗಿ ಸುಪ್ರಿಂಕೋರ್ಟ್ ತೀರ್ಪು ಏನೇ ಬರಲಿ ರಾಜಕೀಯ ಪಕ್ಷಗಳು ಉಪಚುನಾವಣೆ ಸಿದ್ಧತೆಯಲ್ಲಿವೆ. 17 ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿ ನೇಮಕ ಮಾಡಿದೆ. ನಮಗೂ ಉಸ್ತುವಾರಿ ನೀಡಲಾಗಿದೆ. ಒಂದು ವಾರದಲ್ಲಿ ಸಭೆ ಕರೆದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿ, ಒಂದು ವಾರದಲ್ಲಿ ಕೆ.ಆರ್.ಪೇಟೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಒಂದೂವರೆ ವರ್ಷ ಒಳ್ಳೆಯದೋ ಕೆಟ್ಟದ್ದೋ ಅಧಿಕಾರ ಅನುಭವಿಸಿದ್ದೇವೆ. ಮೈತ್ರಿ ಮಾಡಿಕೊಂಡರೂ ಅಸಮಾಧಾನವಿಲ್ಲ. ಮೈತ್ರಿಗೆ ನಮ್ಮ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ಅವರಿಗೆ ದೊಡ್ಡವರಿಗೆ ಬಿಟ್ಟ ವಿಚಾರ ಎಂದರು.

ಚಲುವರಾಯಸ್ವಾಮಿ

ಜೆಡಿಎಸ್ ನಾಯಕರು ಜಿಲ್ಲೆಗೆ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕಾವೇರಿ ನೀರು ಬಿಡುಗಡೆ ಸಂದರ್ಭವೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ನೀರು ಬಿಟ್ಟರು. ಸೋಲಿನ ನಂತರ ಅಂದಿನ ಸಿಎಂ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಆಯೋಗದ ನಿರ್ಧಾರ ಕೇಳದೇ ನೀರನ್ನು ಬಿಟ್ಟರು. ಇದರಲ್ಲೇ ಗೊತ್ತಾಗುತ್ತೆ ಅವರಿಗೆ ಮಂಡ್ಯದ ಮೇಲೆ ಎಷ್ಟು ಸಿಟ್ಟಿದೆ ಅನ್ನೋದು ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್​ವೈ ಬಗ್ಗೆ ಮೆಚ್ಚುಗೆ:
ಯಡಿಯೂರಪ್ಪ ಓರ್ವ ಹೋರಾಟಗಾರ. ಹೋರಾಟ ಮಾಡಿಕೊಂಡು ಬಂದವರು. 105 ಸೀಟು ಗೆದ್ದರೂ ಸಿಎಂ ಆಗಲು ಆಗಲಿಲ್ಲ. 17 ಜನ ಯಾವ ಕಾರಣಕ್ಕೆ ಹೋದರೋ ಗೊತ್ತಿಲ್ಲ. ಯಡಿಯೂರಪ್ಪಗೆ ಅವಕಾಶ ಸಿಕ್ಕಿದೆ. ನಮ್ಮ ಜಿಲ್ಲೆಯ ಓರ್ವ ಮಗ ಸಿಎಂ ಆಗಿದ್ದಾರೆ. ಮತ್ತೊಮ್ಮೆ ಅವಕಾಶ ಸಿಗೋದು ಕಡಿಮೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪಗೆ ಮನವಿ ಮಾಡುವುದರಲ್ಲಿ ತಪ್ಪು ಏನಿದೆ ಎಂದು ಪ್ರಶ್ನೆ ಮಾಡಿದರು.

ಮಂಡ್ಯ: ಅನರ್ಹ ಶಾಸಕರ ವಿಚಾರವಾಗಿ ಸುಪ್ರಿಂಕೋರ್ಟ್ ತೀರ್ಪು ಏನೇ ಬರಲಿ ರಾಜಕೀಯ ಪಕ್ಷಗಳು ಉಪಚುನಾವಣೆ ಸಿದ್ಧತೆಯಲ್ಲಿವೆ. 17 ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿ ನೇಮಕ ಮಾಡಿದೆ. ನಮಗೂ ಉಸ್ತುವಾರಿ ನೀಡಲಾಗಿದೆ. ಒಂದು ವಾರದಲ್ಲಿ ಸಭೆ ಕರೆದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿ, ಒಂದು ವಾರದಲ್ಲಿ ಕೆ.ಆರ್.ಪೇಟೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಒಂದೂವರೆ ವರ್ಷ ಒಳ್ಳೆಯದೋ ಕೆಟ್ಟದ್ದೋ ಅಧಿಕಾರ ಅನುಭವಿಸಿದ್ದೇವೆ. ಮೈತ್ರಿ ಮಾಡಿಕೊಂಡರೂ ಅಸಮಾಧಾನವಿಲ್ಲ. ಮೈತ್ರಿಗೆ ನಮ್ಮ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ಅವರಿಗೆ ದೊಡ್ಡವರಿಗೆ ಬಿಟ್ಟ ವಿಚಾರ ಎಂದರು.

ಚಲುವರಾಯಸ್ವಾಮಿ

ಜೆಡಿಎಸ್ ನಾಯಕರು ಜಿಲ್ಲೆಗೆ ಯಾವ ರೀತಿ ಅಭಿವೃದ್ಧಿ ಮಾಡಿದ್ದಾರೆ ಎಂಬುದು ಕಾವೇರಿ ನೀರು ಬಿಡುಗಡೆ ಸಂದರ್ಭವೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ನೀರು ಬಿಟ್ಟರು. ಸೋಲಿನ ನಂತರ ಅಂದಿನ ಸಿಎಂ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಆಯೋಗದ ನಿರ್ಧಾರ ಕೇಳದೇ ನೀರನ್ನು ಬಿಟ್ಟರು. ಇದರಲ್ಲೇ ಗೊತ್ತಾಗುತ್ತೆ ಅವರಿಗೆ ಮಂಡ್ಯದ ಮೇಲೆ ಎಷ್ಟು ಸಿಟ್ಟಿದೆ ಅನ್ನೋದು ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಿಎಸ್​ವೈ ಬಗ್ಗೆ ಮೆಚ್ಚುಗೆ:
ಯಡಿಯೂರಪ್ಪ ಓರ್ವ ಹೋರಾಟಗಾರ. ಹೋರಾಟ ಮಾಡಿಕೊಂಡು ಬಂದವರು. 105 ಸೀಟು ಗೆದ್ದರೂ ಸಿಎಂ ಆಗಲು ಆಗಲಿಲ್ಲ. 17 ಜನ ಯಾವ ಕಾರಣಕ್ಕೆ ಹೋದರೋ ಗೊತ್ತಿಲ್ಲ. ಯಡಿಯೂರಪ್ಪಗೆ ಅವಕಾಶ ಸಿಕ್ಕಿದೆ. ನಮ್ಮ ಜಿಲ್ಲೆಯ ಓರ್ವ ಮಗ ಸಿಎಂ ಆಗಿದ್ದಾರೆ. ಮತ್ತೊಮ್ಮೆ ಅವಕಾಶ ಸಿಗೋದು ಕಡಿಮೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪಗೆ ಮನವಿ ಮಾಡುವುದರಲ್ಲಿ ತಪ್ಪು ಏನಿದೆ ಎಂದು ಪ್ರಶ್ನೆ ಮಾಡಿದರು.

Intro:ಮಂಡ್ಯ: ಅನರ್ಹ ಶಾಸಕರ ವಿಚಾರವಾಗಿ ಸುಪ್ರಿಂ ಕೋರ್ಟ್ ತೀರ್ಪು ಏನೇ ಬರಲಿ  ರಾಜಕೀಯ ಪಕ್ಷಗಳು ಉಪಚುನಾವಣೆಗೆ ಸಿದ್ಧತೆಯಲ್ಲಿವೆ. 17 ಕ್ಷೇತ್ರಗಳಿಗೆ ಕಾಂಗ್ರೆಸ್ ಉಸ್ತುವಾರಿ ನೇಮಕ ಮಾಡಿದೆ. ನಮಗೂ ಉಸ್ತುವಾರಿ ನೀಡಲಾಗಿದೆ. ಒಂದು ವಾರದಲ್ಲಿ ಸಭೆ ಕರೆದು ಸ್ಥಳೀಯ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು ಎಂದು ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ತಿಳಿಸಿದರು.

ಮಾಧ್ಯಮಗಳ ಜೊತೆ ಮಾತನಾಡಿ,  ಒಂದು ವಾರದಲ್ಲಿ ಕೆ.ಆರ್.ಪೇಟೆ ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುವುದು. ಒಂದುವರೆ ವರ್ಷ ಒಳ್ಳೆಯದು ಕೆಟ್ಟದ್ದು ಅಧಿಕಾರ ಅನುಭವಿಸಿದ್ದೇವೆ. ಮೈತ್ರಿ ಮಾಡಿಕೊಂಡರೂ ಅಸಮಧಾನವಿಲ್ಲ. ಮೈತ್ರಿಗೆ ನಮ್ಮ ವಿರೋಧವಿಲ್ಲ. ನಾವು ಮಧ್ಯೆ ಪ್ರವೇಶ ಮಾಡಿ ಬೇಡ ಎಂದು ಹೇಳುವುದು ಸೂಕ್ತವಲ್ಲ. ಮೈತ್ರಿ ಮಾಡಿಕೊಳ್ಳುವುದು ಅವರಿಗೆ ಬಿಟ್ಟ ವಿಚಾರ ಎಂದರು.

ಜೆಡಿಎಸ್ ನಾಯಕರು ಜಿಲ್ಲೆಗೆ ಯಾವ ರೀತಿ ಅಭಿವೃದ್ಧಿ ಮಾಡಿದ್ದೇರೆ ಎಂಬುದು ಕಾವೇರಿ ನೀರು ಬಿಡುಗಡೆ ಸಂದರ್ಭವೇ ಒಂದೇ ಸಾಕ್ಷಿ. ಚುನಾವಣೆ ಸಂದರ್ಭದಲ್ಲಿ ನೀರು ಬಿಟ್ಟರು. ಸೋಲಿನ ನಂತರ ಅಂದಿನ ಸಿಎಂ ಕುಮಾರಸ್ವಾಮಿ ಕೇಂದ್ರಕ್ಕೆ ಹೋಗಿ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು ಆಯೋಗದ ನಿರ್ಧಾರ ಕೇಳದೇ ನೀರನ್ನು ಬಿಟ್ಟರು. ಇದರಲ್ಲೇ ಗೊತ್ತಾಗುತ್ತೆ ಅವರಿಗೆ ಮಂಡ್ಯದ ಮೇಲೆ ಎಷ್ಟು ಸಿಟ್ಟಿದೆ ಅನ್ನೋದು. ಪ್ರೀತಿ ಎಷ್ಟಿದೆ ಅನ್ನೋದು ಎಂದು ಲೇವಡಿ ಮಾಡಿದರು.

ಇಷ್ಟ ಇದ್ದೋ ಇಲ್ಲದೋ ಸರ್ಕಾರ ಮಾಡಲಾಗಿದೆ. ಮೈತ್ರಿ ವರಷ್ಟರಿಗೆ ಬಿಟ್ಟಿದ್ದು, ನಾನು ಮಧ್ಯೆ ಹೋಗಿ ಮೈತ್ರಿ ವಿಚಾರವಾಗಿ ಹೇಳುವುದು ಸೂಕ್ತವಲ್ಲ. ವರಿಷ್ಠರು ಏನೇ ತೀರ್ಮಾನ ತೆಗೆದುಕೊಂಡರು ಸಂತೊಷ ಎಂದರು.

ನಾನು ಅಭ್ಯರ್ಥಿ ಅಲ್ಲ: ಉಪಚುನಾವಣೆಯಲ್ಲಿ ನಾನು ಅಭ್ಯರ್ಥಿ ಆಗೋದಿಲ್ಲ ಎಂದು ಹೇಳಿದ್ದೇನೆ. ಸಾರ್ವತ್ರಿಕ ಚುನಾವಣೆಯಲ್ಲಿ ಮಾತ್ರ ಸ್ಪರ್ಧೆಮಾಡವೆ ಎಂದ ಅವರು, ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಕಾಂಗ್ರೆಸ್ ಸಿಗಲಿದೆ. ಎಲ್ಲವೂ ಪ್ರೀ ಮೆಚ್ಯೂರ್ ವಾತಾವರಣ ಇದೆ. ವಾತಾವರಣ ನೋಡೋಣ. ಹೆಚ್ಚಿನ ವೇಗವಾಗಿ ಜೆಡಿಎಸ್ ಮುಖಂಡರು ಹೋಗುತ್ತಿದ್ದಾರೆ. ಚುನಾವಣೆ ಸಂಬಂಧ ಸಭೆಗಳನ್ನು ಮಾಡುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿಗಿಂತ ಜೆಡಿಎಸ್ ಚುನಾವಣೆ ಎದುರಿಸಲು ವೇಗವಾಗಿದೆ ಎಂದರು.

ಮೈತ್ರಿಯಾದರೂ ಮತದಾರರ ತೀರ್ಮಾನವೇ ಅಂತಿಮ. ನಾವು ಗೆಲುವಿನ ತೀರ್ಮಾನ ಮಾಡಲು ಸಾಧ್ಯವಿಲ್ಲ. ಮೈತ್ರಿ ಮಾಡಿಕೊಂಡರೇ ಮುಂದೆ ಇನ್ನೂ ಎಷ್ಟು ವರ್ಷ ನೋವು ಅನುಭವಿಸಬೇಕೋ ಅನುಭವಿಸೋಣ. ಮಂಡ್ಯದಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. 7ಕ್ಕೆ 7 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್ ಪ್ರಚಾರ ನನಗೂ ಆಶ್ಚರ್ಯ ಮೂಡಿಸಿದೆ ಎಂದರು.

ಬಿಎಸ್ ವೈ ಬಗ್ಗೆ ಮೆಚ್ಚುಗೆ: ಯಡಿಯೂರಪ್ಪ ಓರ್ವ ಹೋರಾಟಗಾರ. ಹೋರಾಟ ಮಾಡಿಕೊಂಡು ಬಂದವರು. 105 ಸೀಟು ಗೆದ್ದರೂ ಸಿಎಂ ಆಗಲು ಆಗಲಿಲ್ಲ. 17 ಜನ ಯಾವ ಕಾರಣಕ್ಕೆ ಹೋದರೋ ಗೊತ್ತಿಲ್ಲ. ಯಡಿಯೂರಪ್ಪಗೆ ಅವಕಾಶ ಸಿಕ್ಕಿದೆ. ನಮ್ಮ ಜಿಲ್ಲೆಯ ಓರ್ವ ಮಗ ಸಿಎಂ ಆಗಿದ್ದಾರೆ. ಮತ್ತೊಮ್ಮೆ ಅವಕಾಶ ಸಿಗೋದು ಕಡಿಮೆ. ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಯಡಿಯೂರಪ್ಪಗೆ ಮನವಿ ಮಾಡುವುದರಲ್ಲಿ ತಪ್ಪು ಏನಿದೆ. ಅಭಿವೃದ್ಧಿ ಮುಖ್ಯ. ರಾಜ್ಯದ ಸಮಸ್ಯೆ ಬಗೆಹರಿಸಲು ಉತ್ತಮ ಆಡಳಿತ ನೀಡುತ್ತಾರೆ ಎಂಬ ನಂಬಿಕೆ ಇದೆ ಎಂದರು.

ಸಿದ್ದಾರ್ಥ ಆತ್ಮಹತ್ಯೆ  ಪ್ರಕರಣ: ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಣೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಬೇಕು. ಮತ್ತೊಬ್ಬ ಸಿದ್ದಾರ್ಥರನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ಸಮಸ್ಯೆ ಬಂದಂತಹ ಉದ್ಯಮಿಗಳನ್ನು ಕರೆದು ಸರ್ಕಾರಗಳು ಸಮಸ್ಯೆ ಪರಿಹರಿಸಬೇಕು. ದೇಶ ದ್ರೋಹಿಗಳಿಗೆ ಅನುಕೂಲ ಮಾಡಿಕೊಟ್ಟಿದ್ದನ್ನು ನಾವು ನೋಡಿದ್ದೇವೆ. ತೆರಿಗೆ ಕಳ್ಳರಿಗೂ ಅವಕಾಶ ನೀಡಿದ್ದನ್ನು ನೋಡಿದ್ದೇವೆ. ಆತ್ಮಹತ್ಯೆಗೆ ತೆರಿಗೆ ಇಲಾಖೆ ಹೊಣೆಯಲ್ಲ. ಸರ್ಕಾರಗಳು ಸಹಾಯ ಹಸ್ತ ಚಾಚಬೇಕು. ಇತ್ತೀಚೆಗೆ ನ್ಯಾಚುರಲ್ ಜೆಸ್ಟೀಸ್ ಹೋಗುಬಿಟ್ಟಿದೆ. ಸರ್ಕಾರ ಇರಬಹುದು, ಸಂಸ್ಥೆಗಳು ಇರಬಹುದು ಎಲ್ಲಿಯೂ ಇಲ್ಲವಾಗಿದೆ. ಅನ್ಯಾಯ ಹೆಚ್ಚಾಗುತ್ತಿದೆ. ಇದು ಆಗಬಾರದು ಎಂದರು.

Body:ಯತೀಶ್ ಬಾಬುConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.