ETV Bharat / state

ನಾರಾಯಣ ಗೌಡರ ಅಪೇಕ್ಷೆಯಂತೆ ಎಲ್ಲಾ ಕೆಲಸ ಈಡೇರಲಿದೆ: ಸಿಎಂ ಬಿಎಸ್​ವೈ - Huge Health Fair at K R Pete of Mandya

ನಾನು ಜೀವನದಲ್ಲಿ ಅನೇಕ ಶಾಸಕರನ್ನು ನೋಡಿದ್ದೀನಿ. ಆದರೆ, ನಾರಾಯಣಗೌಡ ಅವರಂತಹ ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ. ಅವರು ಹೇಳಿದಂತೆ ತಾಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಬಿಎಸ್​ವೈ ಭರವಸೆ ನೀಡಿದರು.

ಬೃಹತ್ ಆರೋಗ್ಯ ಮೇಳ
author img

By

Published : Nov 9, 2019, 4:19 PM IST

ಮಂಡ್ಯ: ನಾರಾಯಣಗೌಡರು ಅಪೇಕ್ಷೆಪಟ್ಟ ಕೆಲಸವೆಲ್ಲ ಸರ್ಕಾರದಿಂದ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚುನಾವಣಾಸ್ತ್ರ ಪ್ರಯೋಗಿಸಿದ್ದಾರೆ.

ಕೆ.ಆರ್. ಪೇಟೆಯಲ್ಲಿ ಜಿಲ್ಲಾಡಳಿತ ಅಯೋಜಿಸಿದ್ದ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ನಾನು ಜೀವನದಲ್ಲಿ ಅನೇಕ ಶಾಸಕರನ್ನು ನೋಡಿದ್ದೀನಿ. ಆದರೆ, ನಾರಾಯಣಗೌಡರಂಥ ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ. ಅವರು ಹೇಳಿದಂತೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮೆಡಿಕಲ್ ಕಾಲೇಜು ಆರಂಭಿಸಲು ಚರ್ಚೆ ನಡೆಸಿ ಶೀಘ್ರದಲ್ಲಿ ತಾಲೂಕಿಗೆ ಸಿಹಿ ಸುದ್ದಿ ನೀಡಲಾಗುವುದು. ಬಹುಗ್ರಾಮ ಯೋಜನೆ, ನಾಲಾ ಆಧುನೀಕರಣ, ಹೈಟೆಕ್ ಪಾರ್ಕ್​, ಆರ್​ಟಿಒ ಪ್ರಾದೇಶಿಕ ಕಚೇರಿ ತೆರೆಯಲು ಕೇಳಿದ್ದಾರೆ‌. ಅವರ ಅಪೇಕ್ಷೆಯಂತೆ ಮಾದರಿ ತಾಲೂಕು ಮಾಡುತ್ತೇನೆ ಎಂದರು.

ಬೃಹತ್ ಆರೋಗ್ಯ ಮೇಳಕ್ಕೆ ಸಿಎಂ ಚಾಲನೆ

ಇದಕ್ಕೂ ಮೊದಲು ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿ ಬಗ್ಗೆ ಚರ್ಚಿಸಿ 700 ಕೋಟಿ ರೂ ಕೇಳಿದ್ದೆ. ಅವರು 1 ಸಾವಿರ ಕೋಟಿ ರೂ ಕೋಟ್ಟಿದ್ದಾರೆ. ಏತ ನೀರಾವರಿ ಮಾಡಿಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಬಿಎಸ್​ವೈ ರೀತಿಯ ರಾಜಕಾರಣಿಯ ಸಹಕಾರ ಪಡೆದು ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ. ಇಷ್ಟೇ ಅಲ್ಲದೆ ನನ್ನ ವೈಯಕ್ತಿಕ ಆದಾಯದಿಂದಲೂ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇನೆ ಎಂದು ಹೇಳಿದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಸಕ್ಕರೆ ಕಾರ್ಖಾನೆಗಳನ್ನು ತೆರೆದು ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಿಎಂಗೆ ಮನವಿ ಮಾಡಿದರು.

ಮಂಡ್ಯ: ನಾರಾಯಣಗೌಡರು ಅಪೇಕ್ಷೆಪಟ್ಟ ಕೆಲಸವೆಲ್ಲ ಸರ್ಕಾರದಿಂದ ಈಡೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚುನಾವಣಾಸ್ತ್ರ ಪ್ರಯೋಗಿಸಿದ್ದಾರೆ.

ಕೆ.ಆರ್. ಪೇಟೆಯಲ್ಲಿ ಜಿಲ್ಲಾಡಳಿತ ಅಯೋಜಿಸಿದ್ದ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ, ನಾನು ಜೀವನದಲ್ಲಿ ಅನೇಕ ಶಾಸಕರನ್ನು ನೋಡಿದ್ದೀನಿ. ಆದರೆ, ನಾರಾಯಣಗೌಡರಂಥ ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ. ಅವರು ಹೇಳಿದಂತೆ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.

ಮೆಡಿಕಲ್ ಕಾಲೇಜು ಆರಂಭಿಸಲು ಚರ್ಚೆ ನಡೆಸಿ ಶೀಘ್ರದಲ್ಲಿ ತಾಲೂಕಿಗೆ ಸಿಹಿ ಸುದ್ದಿ ನೀಡಲಾಗುವುದು. ಬಹುಗ್ರಾಮ ಯೋಜನೆ, ನಾಲಾ ಆಧುನೀಕರಣ, ಹೈಟೆಕ್ ಪಾರ್ಕ್​, ಆರ್​ಟಿಒ ಪ್ರಾದೇಶಿಕ ಕಚೇರಿ ತೆರೆಯಲು ಕೇಳಿದ್ದಾರೆ‌. ಅವರ ಅಪೇಕ್ಷೆಯಂತೆ ಮಾದರಿ ತಾಲೂಕು ಮಾಡುತ್ತೇನೆ ಎಂದರು.

ಬೃಹತ್ ಆರೋಗ್ಯ ಮೇಳಕ್ಕೆ ಸಿಎಂ ಚಾಲನೆ

ಇದಕ್ಕೂ ಮೊದಲು ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿ ಬಗ್ಗೆ ಚರ್ಚಿಸಿ 700 ಕೋಟಿ ರೂ ಕೇಳಿದ್ದೆ. ಅವರು 1 ಸಾವಿರ ಕೋಟಿ ರೂ ಕೋಟ್ಟಿದ್ದಾರೆ. ಏತ ನೀರಾವರಿ ಮಾಡಿಕೊಡುವ ಬಗ್ಗೆ ಭರವಸೆ ಕೊಟ್ಟಿದ್ದಾರೆ. ಬಿಎಸ್​ವೈ ರೀತಿಯ ರಾಜಕಾರಣಿಯ ಸಹಕಾರ ಪಡೆದು ತಾಲೂಕಿನ ಅಭಿವೃದ್ಧಿ ಮಾಡುತ್ತೇನೆ. ಇಷ್ಟೇ ಅಲ್ಲದೆ ನನ್ನ ವೈಯಕ್ತಿಕ ಆದಾಯದಿಂದಲೂ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದೇನೆ ಎಂದು ಹೇಳಿದರು.

ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಸಕ್ಕರೆ ಕಾರ್ಖಾನೆಗಳನ್ನು ತೆರೆದು ರೈತರ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಿಎಂಗೆ ಮನವಿ ಮಾಡಿದರು.

Intro:ಬಿ.ಎಸ್.ಯಡಿಯೂರಪ್ಪ


Body:ಬ.ಎಸ್.ಯಡಿಯೂರಪ್ಪ


Conclusion:ನಾರಾಯಣಗೌಡರು ಅಪೇಕ್ಷ ಕೆಲಸವೇ ಈಡೇರಲಿದೆ: ಸಿಎಂ ಬಿಎಸ್ ವೈ
ಮೈಸೂರು: ನಾರಾಯಣಗೌಡ ಅವರು ಅಪೇಕ್ಷ ಪಟ್ಟ ಕೆಲಸವೆಲ್ಲ ಸರ್ಕಾರದಿಂದ ನೆರವೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿವೃದ್ಧಿ ಕಾರ್ಯಗಳ ನೆಪದಲ್ಲಿ ಚುನಾವಣೆ ಅಸ್ತ್ರದ ನೆನಪು ಮಾಡಿದ್ದಾರೆ.
ಕೆ.ಆರ್.ಪಟ್ಟಣದ ಕೃಷ್ಣರಾಜ ಪೇಟೆ ಶಿಕ್ಷಕರ ಭವನದಲ್ಲಿ ಮೈದಾನದಲ್ಲಿ ಜಿಲ್ಲಾಡಳಿತದಿಂದ ಏರ್ಪಡಿಸಿದ್ದ ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಾನು ಜೀವನದಲ್ಲಿ ಅನೇಕ ಶಾಸಕರನ್ನು ನೋಡಿದ್ದೀನಿ.ಆದರೆ ನಾರಾಯಣಗೌಡ ಅವರಂತಹ ಪ್ರಾಮಾಣಿಕ ಹಾಗೂ ಒಳ್ಳೆಯ ವ್ಯಕ್ತಿಯನ್ನು ನೋಡಿಲ್ಲ.ಅವರು ಹೇಳಿದಂತೆ ತಾಲ್ಲೂಕನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಮೆಡಿಕಲ್ ಕಾಲೇಜು ಆರಂಭಿಸಲು ಚರ್ಚೆ ನಡೆಸಿ ಶೀಘ್ರದಲ್ಲಿ ತಾಲ್ಲೂಕಿಗೆ ಸಿಹಿ ಸುದ್ದಿ ನೀಡಲಾಗುವುದು.ಬಹುಗ್ರಾಮ ಯೋಜನೆ, ನಾಲಾ ಆಧುನೀಕರಣ, ಹೈಟೆಕ್ ಪಾಕ್೯, ಆರ್ ಟಿಒ ಪ್ರಾದೇಶಿಕ ಕಚೇರಿ ತೆರೆಯಲು ಕೇಳಿದ್ದಾರೆ‌.ಆಕ್ಷೇಪಯಂತೆ ಮಾದರಿ ತಾಲ್ಲೂಕು ಮಾಡುತ್ತೀನಿ ಎಂದರು.
ಪಾಂಡವಪುರ ಷುಗರ್ಸ್ ಹಾಗೂ ಮಂಡ್ಯ ಮೈಷುಗಸ್೯ ಕಾರ್ಖಾನೆಯನ್ನು ಖಾಸಗಿ ಅವರಿಗೆ ನೀಡಿ ಅಭಿವೃದ್ಧಿ ಮಾಡಿ,ಕಬ್ಬು ಬೆಳೆಗಾರರ ಸಮಸ್ಯೆ ನಿಗಿಸಲಾಗುವುದು ಎಂದು ತಿಳಿಸಿದರು.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.