ಮಂಡ್ಯ: ಪರಿಸರ ಸ್ನೇಹಿ ಉದ್ಯಮ ಕುರಿತ ಎರಡು ದಿನಗಳ ತರಬೇತಿ ಕಾರ್ಯಗಾರ ನಗರದಲ್ಲಿ ಆರಂಭವಾಗಿದೆ.
ಪರಿಸರಕ್ಕೆ ಪೂರಕವಾದ ಉದ್ಯೋಗವನ್ನು ಪ್ರೋತ್ಸಾಹಿಸುವ ಹಾಗೂ ಆರಂಭಿಸುವ ಕುರಿತ ಕಾರ್ಯಗಾರ ಇದಾಗಿದ್ದು, ವಿಕಾಸನ ಗ್ರಾಮೀಣ ಮತ್ತು ನಗರ ಅಭಿವೃದ್ಧಿ ಸಂಸ್ಥೆ, ವಿಶ್ವ ಯುವ ಕೇಂದ್ರ ನವದೆಹಲಿ ಸಹಯೋಗದಲ್ಲಿ ಕಾರ್ಯಗಾರ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಆಯೋಜನೆ ಮಾಡಲಾಗಿದೆ.
ಸ್ವಯಂ ಸೇವಾ ಸಂಸ್ಥೆಗಳು, ಸಮುದಾಯ ಆಧಾರಿತ ಸಂಘ ಸಂಸ್ಥೆಗಳಿಗಾಗಿ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಗಾರ ನಡೆಯುತ್ತಿದೆ. ವಿವಿಧ ಉದ್ಯಮಗಳ ಯಂತ್ರಗಳು ಉತ್ಪನ್ನಗಳು ಸೇರಿದಂತೆ ಕರಕುಶಲ ಸಾಮಗ್ರಿಗಳ ಮಾರಾಟ ಪ್ರದರ್ಶನ ಆಯೋಜನೆ ಮಾಡಲಾಗಿದೆ.