ETV Bharat / state

ಸಾಂಪ್ರದಾಯಿಕ ಮೇಕೆ ಸಾಕಾಣಿಕೆಯಲ್ಲೇ ಆದಾಯ ಕಂಡ ಯುವ ರೈತ

ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಂಡ ಯುವ ರೈತ ಅಶೋಕ್. ಓದಿರೋದು ಪದವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಉದ್ಯೋಗ ಮಾಡಿಕೊಂಡಿದ್ದ ಈತ, ತಂದೆ ಕಾಲವಾದ ನಂತರ ತನ್ನೂರಿಗೆ ಬಂದು ಸೇರಿಕೊಂಡು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಮೇಕೆ ಸಾಕಾಣಿಕೆ ಮಾಡಿ, ಈಗ ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ.

author img

By

Published : Sep 11, 2019, 5:04 AM IST

ಸಾಂಪ್ರದಾಯಿಕ ಮೇಕೆ ಸಾಕಾಣಿಕೆಯಲ್ಲೇ ಆದಾಯ ಕಂಡ ಯುವ ರೈತ

ಮಂಡ್ಯ: ಬೆಂಗಳೂರಿನ ಕೆಲಸಕ್ಕೆ ಗುಡ್​ಬೈ ಹೇಳಿದ ಯುವಕನೊಬ್ಬ ತನ್ನೂರಿಗೆ ಮರಳಿ ಮೇಕೆ ಸಾಕಾಣಿಕೆಯಲ್ಲಿ ಕೈತುಂಬಾ ಸಂಪಾದನೆ ಮಾಡುವ ಮೂಲಕ ಬೇಸಾಯ, ಹೈನುಗಾರಿಕೆ ಎಂದರೆ ಮೂಗುಮುರಿಯುವ ಈ ಕಾಲದ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.

ರಾಜಧಾನಿಯಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಈತನ ಹೆಸರು ಅಶೋಕ್. ಓದಿರುವುದು ಪದವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಉದ್ಯೋಗ ಮಾಡಿಕೊಂಡಿದ್ದ ಈತ, ತಂದೆ ಕಾಲವಾದ ನಂತರ ತನ್ನೂರಿಗೆ ಬಂದು ಸೇರಿಕೊಂಡು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಮೇಕೆ ಸಾಕಾಣಿಕೆ ಕೈಗೆತ್ತಿಕೊಂಡು, ಅದರಲ್ಲಿ ಯಶಸ್ವಿಯಾಗಿದ್ದಾನೆ. ಪ್ರಸ್ತುತ ಅಶೋಕ್​ ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಸಾಂಪ್ರದಾಯಿಕ ಮೇಕೆ ಸಾಕಾಣಿಕೆಯಲ್ಲೇ ಆದಾಯ ಕಂಡ ಯುವ ರೈತ
ಮದ್ದೂರು ತಾಲ್ಲೂಕು ಸೊಳ್ಳೇಪುರ ಗ್ರಾಮದ ಅಶೋಕ್ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದಾಗ ಮೇಕೆ ಸಾಕಾಣಿಕೆಗೆ ಮೊದಲು ಬಂಡವಾಳ ಹಾಕಿದ್ದು ಕೇವಲ 10 ಸಾವಿರ ರೂಪಾಯಿ ಮಾತ್ರವಂತೆ. ಒಂದು ಹೆಣ್ಣು ಮೇಕೆ ತಂದು ಸಾಕಲು ಪ್ರಾರಂಭ ಮಾಡಿದರು. ಆ ಮೇಕೆ ಹಾಕುತ್ತಿದ್ದ ಮರಿಗಳನ್ನು ಜೋಪಾನ ಮಾಡಿ ಇಂದು 25 ಮೇಕೆಗಳ ಒಡೆಯನಾಗಿದ್ದಾರೆ.
ಬ್ಯಾಂಕಿನಿಂದಾಗಲೀ, ವ್ಯಕ್ತಿಗಳಿಂದಾಗಲೀ ಯಾವುದೇ ಸಾಲ ಮಾಡದೇ ಇಂದು ತಿಂಗಳಿಗೆ ಸರಾಸರಿ 40 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆಧುನಿಕ ರೀತಿಯ ಯಾವುದೇ ಫಾರಂ ಮಾಡದೇ ಸಾಂಪ್ರದಾಯಿಕವಾಗಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಅಶೋಕ್. ಪಿತ್ರಾರ್ಜಿತವಾಗಿ ಬಂದ ಒಂದುವರೆ ಎಕರೆ ಜಮೀನಿನಲ್ಲಿ ಮೇಕೆಗೆ ಬೇಕಾದ ಮೇವನ್ನು ಬೆಳೆದು, ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ 3 ರಿಂದ 4 ಮೇಕೆಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಮೇಕೆ ಗೊಬ್ಬರ ವ್ಯವಸಾಯಕ್ಕೆ ಉತ್ತಮವಾದ್ದರಿಂದ ಅದನ್ನೂ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.

ಮಂಡ್ಯ: ಬೆಂಗಳೂರಿನ ಕೆಲಸಕ್ಕೆ ಗುಡ್​ಬೈ ಹೇಳಿದ ಯುವಕನೊಬ್ಬ ತನ್ನೂರಿಗೆ ಮರಳಿ ಮೇಕೆ ಸಾಕಾಣಿಕೆಯಲ್ಲಿ ಕೈತುಂಬಾ ಸಂಪಾದನೆ ಮಾಡುವ ಮೂಲಕ ಬೇಸಾಯ, ಹೈನುಗಾರಿಕೆ ಎಂದರೆ ಮೂಗುಮುರಿಯುವ ಈ ಕಾಲದ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.

ರಾಜಧಾನಿಯಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಈತನ ಹೆಸರು ಅಶೋಕ್. ಓದಿರುವುದು ಪದವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಉದ್ಯೋಗ ಮಾಡಿಕೊಂಡಿದ್ದ ಈತ, ತಂದೆ ಕಾಲವಾದ ನಂತರ ತನ್ನೂರಿಗೆ ಬಂದು ಸೇರಿಕೊಂಡು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಮೇಕೆ ಸಾಕಾಣಿಕೆ ಕೈಗೆತ್ತಿಕೊಂಡು, ಅದರಲ್ಲಿ ಯಶಸ್ವಿಯಾಗಿದ್ದಾನೆ. ಪ್ರಸ್ತುತ ಅಶೋಕ್​ ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.

ಸಾಂಪ್ರದಾಯಿಕ ಮೇಕೆ ಸಾಕಾಣಿಕೆಯಲ್ಲೇ ಆದಾಯ ಕಂಡ ಯುವ ರೈತ
ಮದ್ದೂರು ತಾಲ್ಲೂಕು ಸೊಳ್ಳೇಪುರ ಗ್ರಾಮದ ಅಶೋಕ್ ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದಾಗ ಮೇಕೆ ಸಾಕಾಣಿಕೆಗೆ ಮೊದಲು ಬಂಡವಾಳ ಹಾಕಿದ್ದು ಕೇವಲ 10 ಸಾವಿರ ರೂಪಾಯಿ ಮಾತ್ರವಂತೆ. ಒಂದು ಹೆಣ್ಣು ಮೇಕೆ ತಂದು ಸಾಕಲು ಪ್ರಾರಂಭ ಮಾಡಿದರು. ಆ ಮೇಕೆ ಹಾಕುತ್ತಿದ್ದ ಮರಿಗಳನ್ನು ಜೋಪಾನ ಮಾಡಿ ಇಂದು 25 ಮೇಕೆಗಳ ಒಡೆಯನಾಗಿದ್ದಾರೆ.
ಬ್ಯಾಂಕಿನಿಂದಾಗಲೀ, ವ್ಯಕ್ತಿಗಳಿಂದಾಗಲೀ ಯಾವುದೇ ಸಾಲ ಮಾಡದೇ ಇಂದು ತಿಂಗಳಿಗೆ ಸರಾಸರಿ 40 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಆಧುನಿಕ ರೀತಿಯ ಯಾವುದೇ ಫಾರಂ ಮಾಡದೇ ಸಾಂಪ್ರದಾಯಿಕವಾಗಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಅಶೋಕ್. ಪಿತ್ರಾರ್ಜಿತವಾಗಿ ಬಂದ ಒಂದುವರೆ ಎಕರೆ ಜಮೀನಿನಲ್ಲಿ ಮೇಕೆಗೆ ಬೇಕಾದ ಮೇವನ್ನು ಬೆಳೆದು, ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ 3 ರಿಂದ 4 ಮೇಕೆಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಮೇಕೆ ಗೊಬ್ಬರ ವ್ಯವಸಾಯಕ್ಕೆ ಉತ್ತಮವಾದ್ದರಿಂದ ಅದನ್ನೂ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.
Intro:ಮಂಡ್ಯ: ಅಪ್ಪ ತೀರಿಕೊಂಡ ಮೇಲೆ ಬೆಂಗಳೂರಿನಲ್ಲಿ ಕೈತುಂಬ ವೇತನ ಬರುತ್ತಿದ್ದ ಕೆಲಸ ಬಿಟ್ಟ. ಬ್ಯಾಂಕಿನಿಂದ ಯಾವುದೇ ಸಾಲ ತೆಗೆದುಕೊಳ‍್ಳಲಿಲ್ಲ. ಮೇಕೆ ಸಾಕಾಣಿಕೆ ಮಾಡಿಕೊಂಡು ಇಡೀ ಸಂಸಾರ ನೆಮ್ಮದಿಯ ಜೀವನ ಸಾಗಿಸುತ್ತಿದೆ. ಮೇಕೆ ಫಾರಂ ಮಾಡದೇ, ಸಾಂಪ್ರದಾಯಿಕವಾಗಿ ಸಾಕಿಕೊಂಡು ತಿಂಗಳಿಗೆ 40 ಸಾವಿರ ಆದಾಯ ಗಳಿಸುತ್ತಿರುವ ಯುವಕನ ಯಶೋಗಾಧೆ ಇದು.
ಈತನೇ ನೋಡಿ, ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಂಡ ಯುವ ರೈತ. ಹೆಸರು ಅಶೋಕ್. ಓದಿರೋದು ಪದವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಉದ್ಯೋಗ ಮಾಡಿಕೊಂಡಿದ್ದ ಈತ, ತಂದೆ ಕಾಲವಾದ ನಂತರ ತನ್ನೂರಿಗೆ ಬಂದು ಸೇರಿಕೊಂಡು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಈಗ ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ.
ಪ್ಲೋ..
ಮದ್ದೂರು ತಾಲ್ಲೂಕು ಸೊಳ್ಳೇಪುರ ಗ್ರಾಮದ ಅಶೋಕ್ ಮೊದಲು ಬಂಡವಾಳ ಹಾಕಿದ್ದು ಕೇವಲ 10 ಸಾವಿರ ರೂಪಾಯಿ ಮಾತ್ರವಂತೆ. ಒಂದು ಹೆಣ್ಣು ಮೇಕೆ ತಂದು ಸಾಕಲು ಪ್ರಾರಂಭ ಮಾಡಿದರು. ಆ ಮೇಕೆ ಹಾಕುತ್ತಿದ್ದ ಮರಿಗಳನ್ನು ಜೋಪಾನ ಮಾಡಿ ಇಂದು 25 ಮೇಕೆಗಳ ಒಡೆಯನಾಗಿದ್ದಾನೆ. ಬ್ಯಾಂಕಿನಿಂದಗಲೀ, ವ್ಯಕ್ತಿಗಳಿಂದಗಲೀ ಯಾವುದೇ ಸಾಲ ಮಾಡದೇ ಇಂದು ತಿಂಗಳಿಗೆ ಸರಾಸರಿ 40 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.
ಬೈಟ್: ಅಶೋಕ್, ಯುವ ರೈತ. (ಟೀ ಶರ್ಟ್ ಹಾಕಿರುವವರು)
ಆಧುನಿಕ ರೀತಿಯ ಯಾವುದೇ ಫಾರಂ ಮಾಡದೇ ಸಾಂಪ್ರದಾಯಿಕವಾಗಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಅಶೋಕ್. ಪಿತ್ರಾರ್ಜಿತವಾಗಿ ಬಂದ ಒಂದೂವರೆ ಎಕರೆ ಜಮೀನಿನಲ್ಲಿ ಮೇಕೆಗೆ ಬೇಕಾದ ಮೇವನ್ನು ಬೆಳೆದು ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ 3 ರಿಂದ 4 ಮೇಕೆಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಮೇಕೆ ಗೊಬ್ಬರ ವ್ಯವಸಾಯಕ್ಕೆ ಉತ್ತಮವಾದ್ದರಿಂದ ಅದನ್ನೂ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ. ಮೇಕೆಗಳ ಜೊತೆಗೆ ಉಪ ಉತ್ಪನ್ನವಾಗಿ ಗೊಬ್ಬರವನ್ನು ಮಾರಾಟ ಮಾಢಿ ಇಷ್ಟೊಂದು ಆದಾಯ ಗಳಿಸಿ ಸುಂದರ ಸಂಸಾರವನ್ನು ಕಟ್ಟಿಕೊಂಡಿದ್ದಾರೆ. ಇವರ ಈ ಸಾಧನೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೈಟ್: ಶಿವರಾಂ, ಪ್ರಗತಿಪರ ರೈತ.
ವ್ಯಕ್ತಿ ಸಾಧನೆ ಮಾಡಬೇಕಾದರೆ ಆತ್ಮಸ್ಥೈರ್ಯ ಇದ್ದರೆ ಸಾಕು ಎಂಬುದನ್ನು ಅಶೋಕ್ ಸಾಧಿಸಿ ತೋರಿಸುತ್ತಿದ್ದಾರೆ. ಅಪ್ಪ ಹಾಕಿದ ಆಲದ ಮರಕ್ಕೆ ಕೊರಳು ಒಡ್ಡದೆ, ತಮ್ಮದೇ ಮಾರ್ಗದಲ್ಲಿ ಸಂಪಾದನೆಯ ಹಾದಿಯಲ್ಲಿ ಸಾಗಿದ್ದು, ಯಾವುದೇ ನಾಚಿಕೆ ಪಟ್ಟುಕೊಳ್ಳದೆ, ಮೇಕೆ ಮೇಯಿಸಿಕೊಂಡು ಸಂಪಾದನೆಯ ಹಾದಿ ತುಳಿದಿದ್ದಾರೆ.
Body:ಯತೀಶ್ ಬಾಬು, ಮಂಡ್ಯ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.