ETV Bharat / state

ಟಿಪ್ಪು ಪಠ್ಯ ಕೈಬಿಡುವ ವಿಚಾರ: ಸರ್ಕಾರದ ನಿರ್ಧಾರಕ್ಕೆ ಮೈಸೂರು ಭಾಗದ ನಾಯಕರ ಅಸಮಾಧಾನ

author img

By

Published : Oct 31, 2019, 9:28 PM IST

ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರದ ನಿರ್ಧಾರ ಮೈಸೂರು ಭಾಗದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರದ ನಿರ್ಧಾರಕ್ಕೆ ಮೈಸೂರು ಭಾಗದ ನಾಯಕರ ಅಸಮಧಾನ

ಮಂಡ್ಯ: ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರದ ನಿರ್ಧಾರ ಮೈಸೂರು ಭಾಗದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರದ ನಿರ್ಧಾರಕ್ಕೆ ಮೈಸೂರು ಭಾಗದ ನಾಯಕರ ಅಸಮಾಧಾನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು-ಹೈದರಾಲಿ ಇಲ್ಲದೆ ಮೈಸೂರು ಇತಿಹಾಸವಿಲ್ಲ. ಅವರಿಬ್ಬರೂ ಬರದಿದ್ದರೆ ಮೈಸೂರು ಇತಿಹಾಸ ಸಂಪೂರ್ಣವಾಗಲ್ಲ. ರಾಜಕೀಯ ಸೇಡು ತೀರಿಸಿಕೊಳ್ಳಲು ಬಿಜೆಪಿ ಟಿಪ್ಪು ಹೆಸರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದೆ. ಬಿಜೆಪಿ ಪಕ್ಷ ಟಿಪ್ಪುವಿನ ಚರಿತ್ರೆಯನ್ನು ತಿರುಚುವ ಕೆಲಸ ಮಾಡ್ತಿದೆ. ಚರಿತ್ರೆಯನ್ನು ಹೇಗಿದೆಯೋ ಹಾಗೆಯೇ ಬೋಧಿಸಬೇಕೇ ಹೊರತು ತಿರುಚುವ ಕೆಲಸ ಮಾಡಬಾರದು ಎಂದು ಸರ್ಕಾರದ ನಿಲುವಿನ ವಿರುದ್ಧ ಗರಂ ಆದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಇತಿಹಾಸ ಎಷ್ಟು ಸರಿ, ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ ಸಂಪೂರ್ಣವಾಗಿ ಗೊತ್ತಿರಲ್ಲ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲರ‌ ಜೊತೆ ಚರ್ಚಿಸಬೇಕು. ಏಕಪಕ್ಷೀಯವಾಗಿ ನಿರ್ಧಾರ ತಪ್ಪಾಗುತ್ತದೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಮಂಡ್ಯ: ಪಠ್ಯ ಪುಸ್ತಕದಿಂದ ಟಿಪ್ಪು ಇತಿಹಾಸ ಕೈಬಿಡುವ ವಿಚಾರ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಸರ್ಕಾರದ ನಿರ್ಧಾರ ಮೈಸೂರು ಭಾಗದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸರ್ಕಾರದ ನಿರ್ಧಾರಕ್ಕೆ ಮೈಸೂರು ಭಾಗದ ನಾಯಕರ ಅಸಮಾಧಾನ

ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು-ಹೈದರಾಲಿ ಇಲ್ಲದೆ ಮೈಸೂರು ಇತಿಹಾಸವಿಲ್ಲ. ಅವರಿಬ್ಬರೂ ಬರದಿದ್ದರೆ ಮೈಸೂರು ಇತಿಹಾಸ ಸಂಪೂರ್ಣವಾಗಲ್ಲ. ರಾಜಕೀಯ ಸೇಡು ತೀರಿಸಿಕೊಳ್ಳಲು ಬಿಜೆಪಿ ಟಿಪ್ಪು ಹೆಸರನ್ನು ಕೈ ಬಿಡುವ ನಿರ್ಧಾರಕ್ಕೆ ಬಂದಿದೆ. ಬಿಜೆಪಿ ಪಕ್ಷ ಟಿಪ್ಪುವಿನ ಚರಿತ್ರೆಯನ್ನು ತಿರುಚುವ ಕೆಲಸ ಮಾಡ್ತಿದೆ. ಚರಿತ್ರೆಯನ್ನು ಹೇಗಿದೆಯೋ ಹಾಗೆಯೇ ಬೋಧಿಸಬೇಕೇ ಹೊರತು ತಿರುಚುವ ಕೆಲಸ ಮಾಡಬಾರದು ಎಂದು ಸರ್ಕಾರದ ನಿಲುವಿನ ವಿರುದ್ಧ ಗರಂ ಆದರು.

ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮಾತನಾಡಿ, ಇತಿಹಾಸ ಎಷ್ಟು ಸರಿ, ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ ಸಂಪೂರ್ಣವಾಗಿ ಗೊತ್ತಿರಲ್ಲ. ಈ ರೀತಿಯ ನಿರ್ಧಾರ ತೆಗೆದುಕೊಳ್ಳುವಾಗ ಎಲ್ಲರ‌ ಜೊತೆ ಚರ್ಚಿಸಬೇಕು. ಏಕಪಕ್ಷೀಯವಾಗಿ ನಿರ್ಧಾರ ತಪ್ಪಾಗುತ್ತದೆ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

Intro:ಮಂಡ್ಯ: ಟಿಪ್ಪು ಪ್ರಕರಣ ಈಗ ಮೈಸೂರು ಪ್ರಾಂತ್ಯದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ‌. ಮಾಜಿ ಸಿಎಂ ಸಿದ್ದರಾಮಯ್ಯ ಟಿಪ್ಪು ಪಠ್ಯ ಕೈ ಬಿಡುವ ಹಿಂದೆ ರಾಜಕೀಯ ದ್ವೇಷ ಎಂದರೆ, ಸಂಸದೆ ಸುಮಲತಾ ಏಕಪಕ್ಷೀಯ ನಿರ್ಧಾರ ಸರಿಯಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ‌. ಟಿಪ್ಪು ಆಳ್ವಿಕೆಯ ಕೇಂದ್ರ ಸ್ಥಾನವಾದ ಜಿಲ್ಲೆಯಲ್ಲಿ ನಾಯಕರ ಹೇಳಿಕೆ ಹೊಸ ಚರ್ಚೆಗೆ ಕಾರಣವಾಗಿದೆ‌.

ಟಿಪ್ಪು. ಈಗ ಚರ್ಚಿತ ವಿಷ್ಯ. ಈ ವಿಷಯವಾಗಿ ಪರ ವಿರೋಧ ಹೇಳಿಕೆಗಳು ಬರುತ್ತಲೇ ಇವೆ. ಇತಿಹಾಸ ಎಷ್ಟು ಸರಿ, ಎಷ್ಟು ಸುಳ್ಳು ಎನ್ನುವುದರ ಮಧ್ಯೆ ರಾಜಕೀಯ ನಾಯಕರ ಹೇಳಿಕೆಗಳು ಹೊಸ ಚರ್ಚೆಗೆ ಕಾರಣವಾಗಿದೆ. ಟಿಪ್ಪು ಇತಿಹಾಸವನ್ನು ಪಠ್ಯದಿಂದ ಕೈ ಬಿಡುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಟಿಪ್ಪು ಹೈದರಾಲಿ ಇಲ್ಲದೆ ಮೈಸೂರು ಇತಿಹಾಸವಿಲ್ಲ. ಅವರಿಬ್ಬರು ಬರದಿದ್ದರೆ ಮೈಸೂರು ಇತಿಹಾಸ ಸಂಪೂರ್ಣವಾಗಲ್ಲ. ಟಿಪ್ಪು ಹೆಸರು ಕೈ ಬಿಡ್ತಿರೋದು ರಾಜಕೀಯ ಸೇಡು ತೀರಿಸಿಕೊಳ್ಳಲು‌ ಬಿಜೆಪಿ ಇದನ್ನ ಮಾಡ್ತಿದೆ. ಬಿಜೆಪಿ ಪಕ್ಷ ಟಿಪ್ಪುವಿನ ಚರಿತ್ರೆಯನ್ನು ತಿರುಚುವ ಕೆಲಸ ಮಾಡ್ತಿದೆ. ಚರಿತ್ರೆಯನ್ನು ಹೇಗಿದೆಯೋ ಹಾಗೇ ಬೋಧಿಸಬೇಕೆ ಹೊರತು ತಿರುಚುವ ಕೆಲಸ ಮಾಡಬಾರದು ಎಂದು ಸರ್ಕಾರದ ನಿಲುವಿನ ವಿರುದ್ಧ ಗರಂ ಆದರು.

ಬೈಟ್: ಸಿದ್ದರಾಮಯ್ಯ, ಮಾಜಿ ಸಿಎಂ.



ಇನ್ನು ಮಂಡ್ಯ-ಮೈಸೂರು ಟಿಪ್ಪುವಿನ ಕೇಂದ್ರ ಸ್ಥಾನ. ಅದರಲ್ಲೂ ಶ್ರೀರಂಗಪಟ್ಟಣ ಅಂದರೆ ಟಿಪ್ಪು ಎಂಬ ಮಾತಿದೆ. ಹೀಗಾಗಿ ಸಂಸದೆ ಸುಮಲತಾ ಅಂಬರೀಶ್ ಕೂಡ ಈ ವಿಚಾರವಾಗಿ ಪ್ರಕ್ರಿಯೆ ನೀಡಿದ್ದಾರೆ. ಇತಿಹಾಸ ಎಷ್ಟು ಸರಿ, ಎಷ್ಟು ಸರಿಯಿಲ್ಲ ಅನ್ನೋದು ಯಾರಿಗೂ 100% ಗೊತ್ತಿರಲ್ಲ. ಈ ರೀತಿಯ ನಿರ್ಧಾರ ಮಾಡುವಾಗ ಎಲ್ಲರ‌ ಜೊತೆ ಚರ್ಚಿಸಿ ತೀರ್ಮಾನ ಮಾಡಬೇಕು. ಏಕಪಕ್ಷೀಯವಾಗಿ ನಿರ್ಧಾರ ಮಾಡೋದು ತಪ್ಪಾಗುತ್ತದೆ ಎಂದು ಹೇಳಿದರು.

ಬೈಟ್: ಸುಮಲತಾ ಅಂಬರೀಶ್, ಸಂಸದೆ.

ಟಿಪ್ಪುವಿನ‌ ವಿಚಾರ ಬಿಜೆಪಿ ಸರ್ಕಾರಕ್ಕೆ ನುಂಗಲಾರದ ತುತ್ತಾಗಲಿದೆ‌. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮೈಸೂರು ವಲಯದ ನಾಯಕರಲ್ಲಿನ ಹೇಳಿಕೆ ಬಹಳಷ್ಟು ಚರ್ಚೆಗೆ ಕಾರಣವಾಗುತ್ತಿದೆ. ಇದಕ್ಕೆ ಶಿಕ್ಷಣ ಸಚಿವರು ಏನ್ ಹೇಳ್ತಾರೋ ಕಾದು ನೋಡಬೇಕಾಗಿದ.

ಯತೀಶ್ ಬಾಬು, ಮಂಡ್ಯBody:ಯತೀಶ್ ಬಾಬು

( ಗಮನಕ್ಕೆ: ಸುಮಲತಾ ಬೈಟ್ ಮಹಿಳಾ ರೈಲಿ ಪೈಲ್‌ನಲ್ಲಿದೆ ಅಲ್ಲಿಂದ ತೆಗೆದುಕೊಳ್ಳಲು ಮನವಿ ಹಾಗೂ ಸಿದ್ದರಾಮಯ್ಯ ಬೈಟ್ ಶೀಘ್ರವಾಗಿ ಬರಲಿದೆ)Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.