ETV Bharat / state

ಮುಂಬೈನಿಂದ ತವರಿಗೆ ಆಗಮಿಸಿದ ಯುವಕರು: ಮೊದಲು ಆಸ್ಪತ್ರೆ, ನಂತರ ಊರಿಗೆ ಎಂದ ಗ್ರಾಮಸ್ಥರು

author img

By

Published : Mar 28, 2020, 5:43 PM IST

ಮುಂಬೈನಿಂದ ಗ್ರಾಮಕ್ಕೆ ಯುವಕರು ಆಗಮಿಸಿದ ವಿಚಾರ ತಿಳಿದ ಗ್ರಾಮಸ್ಥರು, ಖುದ್ದು ಅವರಿಗೆ ಬುದ್ಧಿ ಹೇಳಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

The youth from the mumbai was admitted to the hospital by vilagers
ಮೊದಲು ಆಸ್ಪತ್ರೆ ನಂತರ ಊರಿಗೆ ಎಂದ ಗ್ರಾಮಸ್ಥರು

ಮಂಡ್ಯ: ಮುಂಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಯುವಕರು ಊರಿಗೆ ಬರುತ್ತಿದ್ದಂತೆ ಅವರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕಳುಹಿಸಿದ ಘಟನೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮುಂಬೈನಿಂದ ಗ್ರಾಮಕ್ಕೆ ಯುವಕರು ಆಗಮಿಸಿದ ವಿಚಾರ ತಿಳಿದ ಗ್ರಾಮಸ್ಥರು, ಖುದ್ದು ಅವರಿಗೆ ಬುದ್ಧಿ ಹೇಳಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯರ ಬಳಿ ಯಾವುದೇ ರೋಗವಿಲ್ಲ ಎಂಬ ಮಾಹಿತಿ ಪಡೆದುಕೊಂಡು ಗ್ರಾಮಕ್ಕೆ ಕಾಲಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಸೂಚನೆ ಮೇರೆಗೆ ಯುವಕರು ಸಮೀಪದ ಕೆ.ಎಂ. ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಪರೀಕ್ಷೆಗೆ ಒಳಗಾಗಿದ್ದಾರೆ. ಸ್ಕ್ರೀನಿಂಗ್ ಪರೀಕ್ಷೆ ವೇಳೆ ಇಬ್ಬರಲ್ಲೂ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ನಗರದ ಮಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ಮಂಡ್ಯ: ಮುಂಬೈನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಇಬ್ಬರು ಯುವಕರು ಊರಿಗೆ ಬರುತ್ತಿದ್ದಂತೆ ಅವರನ್ನು ಗ್ರಾಮಸ್ಥರು ಆಸ್ಪತ್ರೆಗೆ ಕಳುಹಿಸಿದ ಘಟನೆ ಮದ್ದೂರು ತಾಲೂಕಿನ ಬಿದರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮುಂಬೈನಿಂದ ಗ್ರಾಮಕ್ಕೆ ಯುವಕರು ಆಗಮಿಸಿದ ವಿಚಾರ ತಿಳಿದ ಗ್ರಾಮಸ್ಥರು, ಖುದ್ದು ಅವರಿಗೆ ಬುದ್ಧಿ ಹೇಳಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ವೈದ್ಯರ ಬಳಿ ಯಾವುದೇ ರೋಗವಿಲ್ಲ ಎಂಬ ಮಾಹಿತಿ ಪಡೆದುಕೊಂಡು ಗ್ರಾಮಕ್ಕೆ ಕಾಲಿಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ಗ್ರಾಮಸ್ಥರ ಸೂಚನೆ ಮೇರೆಗೆ ಯುವಕರು ಸಮೀಪದ ಕೆ.ಎಂ. ದೊಡ್ಡಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಪರೀಕ್ಷೆಗೆ ಒಳಗಾಗಿದ್ದಾರೆ. ಸ್ಕ್ರೀನಿಂಗ್ ಪರೀಕ್ಷೆ ವೇಳೆ ಇಬ್ಬರಲ್ಲೂ ವ್ಯತ್ಯಾಸ ಕಂಡು ಬಂದ ಹಿನ್ನೆಲೆ ನಗರದ ಮಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.