ETV Bharat / state

ಮುಷ್ಕರದ ವೇಳೆ ಸಂಚರಿಸುತ್ತಿದ್ದ ಬಸ್ ಅಡ್ಡಗಟ್ಟಿದ​ ಯುವಕ: ಪ್ರಯಾಣಿಕರಿಂದಲೇ ಹಿಗ್ಗಾಮುಗ್ಗಾ ಥಳಿತ! - Passenger beated the person in mandya regarding using unconstitution word to driver

ಸಾರಿಗೆ ನೌಕರರ ಮುಷ್ಕರದ ನಡುವೆ ಬಸ್​ ಚಲಾಯಿಸಿಕೊಂಡು ಬಂದ ಚಾಲಕನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ವ್ಯಕ್ತಿಯನ್ನು ಸಾರ್ವಜನಿಕರು ಥಳಿಸಿರುವ ಘಟನೆ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

passenger-beated-the-person-in-mandya-regarding-using-unconstitution-word-to-driver
ಬಸ್​ನ್ನು ಅಡ್ಡಗಟ್ಟಿದ​ ಯುವಕನಿಗೆ ಪ್ರಯಾಣಿಕರಿಂದಲೇ ಥಳಿತ
author img

By

Published : Apr 9, 2021, 5:26 PM IST

ಮಂಡ್ಯ: ಸಾರಿಗೆ ಬಸ್ ಅಡ್ಡಗಟ್ಟಿದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸ್​ನ್ನು ಅಡ್ಡಗಟ್ಟಿದ​ ಯುವಕನಿಗೆ ಪ್ರಯಾಣಿಕರಿಂದಲೇ ಥಳಿತ

ಹಾಸನ ಜಿಲ್ಲೆಯ ಇಂಡಗೋಳು ಗ್ರಾಮದ ರವಿ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಸೋಮನಹಳ್ಳಿ ಗ್ರಾಮದ ಮೂಲಕ ಸಂಚಾರ ಮಾಡುತ್ತಿದ್ದ ರಾಜಹಂಸ ಬಸ್‌ ಅಡ್ಡಗಟ್ಟಿರುವ ವ್ಯಕ್ತಿ, ಮುಷ್ಕರ ಇದ್ದರೂ ಬಸ್​ ಏಕೆ ಚಾಲನೆ ಮಾಡುತ್ತಿದ್ದೀಯಾ? ಎಂದು ಅವಾಚ್ಯ ಶಬ್ದಗಳಿಂದ ಚಾಲಕನಿಗೆ ನಿಂದಿಸಿದ್ದಾನೆ.

ಇದರಿಂದ ಕೋಪಗೊಂಡ ಬಸ್​ನಲ್ಲಿದ್ದ ಪ್ರಯಾಣಿಕರು ಆತನನ್ನು ತರಾಟೆಗೆ ತೆಗೆದುಕೊಂಡು ಗೂಸಾ ಕೊಟ್ಟಿದ್ದಾರೆ. ಈ ವೇಳೆ ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಥಳಿತಕ್ಕೊಳಗಾದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: 'ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಸತ್ಯ ಸಿದ್ದರಾಮಯ್ಯಗೆ ಗೊತ್ತಿದೆ': ಬೊಮ್ಮಾಯಿ

ಮಂಡ್ಯ: ಸಾರಿಗೆ ಬಸ್ ಅಡ್ಡಗಟ್ಟಿದ ವ್ಯಕ್ತಿಗೆ ಸಾರ್ವಜನಿಕರು ಥಳಿಸಿರುವ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬಸ್​ನ್ನು ಅಡ್ಡಗಟ್ಟಿದ​ ಯುವಕನಿಗೆ ಪ್ರಯಾಣಿಕರಿಂದಲೇ ಥಳಿತ

ಹಾಸನ ಜಿಲ್ಲೆಯ ಇಂಡಗೋಳು ಗ್ರಾಮದ ರವಿ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಸೋಮನಹಳ್ಳಿ ಗ್ರಾಮದ ಮೂಲಕ ಸಂಚಾರ ಮಾಡುತ್ತಿದ್ದ ರಾಜಹಂಸ ಬಸ್‌ ಅಡ್ಡಗಟ್ಟಿರುವ ವ್ಯಕ್ತಿ, ಮುಷ್ಕರ ಇದ್ದರೂ ಬಸ್​ ಏಕೆ ಚಾಲನೆ ಮಾಡುತ್ತಿದ್ದೀಯಾ? ಎಂದು ಅವಾಚ್ಯ ಶಬ್ದಗಳಿಂದ ಚಾಲಕನಿಗೆ ನಿಂದಿಸಿದ್ದಾನೆ.

ಇದರಿಂದ ಕೋಪಗೊಂಡ ಬಸ್​ನಲ್ಲಿದ್ದ ಪ್ರಯಾಣಿಕರು ಆತನನ್ನು ತರಾಟೆಗೆ ತೆಗೆದುಕೊಂಡು ಗೂಸಾ ಕೊಟ್ಟಿದ್ದಾರೆ. ಈ ವೇಳೆ ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಥಳಿತಕ್ಕೊಳಗಾದ ವ್ಯಕ್ತಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಓದಿ: 'ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲುವ ಸತ್ಯ ಸಿದ್ದರಾಮಯ್ಯಗೆ ಗೊತ್ತಿದೆ': ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.