ಮಂಡ್ಯ: ಜಿಲ್ಲಾ ಮಟ್ಟದ ಕೋವಿಡ್ ಸಭೆ ಆರಂಭವಾದರೂ ಫೋನ್ ಸಂಭಾಷಣೆಯಲ್ಲಿದ್ದ ಡಿಹೆಚ್ಒಗೆ ಶಾಸಕದ್ವಯರು ಹಿಗ್ಗಾಮುಗ್ಗ ಜಾಡಿಸಿದರು.
ಶಾಸಕರಾದ ಸಿ.ಎಸ್. ಪುಟ್ಟರಾಜು ಹಾಗೂ ಡಾ.ಕೆ.ಅನ್ನದಾನಿ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಚೇಗೌಡ ಅವರನ್ನು ತರಾಟೆ ತೆಗೆದುಕೊಂಡರು. ಇಡ್ರೀ ಫೋನ್, ಇಲ್ಲವೇ ಆಚೆಗೆ ಹೋಗ್ರಿ. ನಿವೃತ್ತಿ ಸಮಯ ಹತ್ತಿರದಲ್ಲಿದೆ ಅಂತಾ ಹೀಗೇ ಆಡ್ತಿದ್ದೀರ ಎಂದು ಪ್ರಶ್ನಿಸುವ ಮೂಲಕ ತರಾಟೆಗೆ ತೆಗೆದುಕೊಂಡರು.
ಶಾಸಕರು ಫೋನ್ ಮಾಡಿದ್ರೆ, ಫೋನ್ ಅಟೆಂಡ್ ಮಾಡಲ್ಲ ಎಂದು ಶಾಸಕ ಪುಟ್ಟರಾಜು ಆಕ್ರೋಶಗೊಂಡರು. ಮೂರ್ನಾಲ್ಕು ಕೇಸ್ ಕೊಟ್ಟಿದ್ದೀನಿ ಒಂದನ್ನಾದ್ರೂ ಅಟೆಂಡ್ ಮಾಡಿದ್ದೀರಾ ಎಂದು ಅನ್ನದಾನಿ ಪ್ರಶ್ನಿಸಿದರು.