ಮಂಡ್ಯ: ಪೊಲೀಸ್ ಹಾಗೂ ಅರಣ್ಯ ಇಲಾಖೆ ಅವ್ಯವಸ್ಥೆಯ ಆಗರವಾಗಿದೆ ಎಂದು ಶಾಸಕ ಎಂ ಶ್ರೀನಿವಾಸ್ ಆರೋಪಿಸಿದ್ದಾರೆ. ಎಸ್ಪಿ ಸರ್ಕಾರಿ ನಿವಾಸದಲ್ಲಿದ್ದ ಮರ ಕಡಿದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನಿನಲ್ಲಿ ಎಲ್ಲರೂ ಒಂದೇ.. ಸಾಮಾನ್ಯ ಮನುಷ್ಯ ತಾನು ಬೆಳೆಸಿದ ಮರ ಕಡಿಯಲು ಅನುಮತಿ ಬೇಕು. ಇವರು ಯಾಕೆ ಅನುಮತಿ ಪಡೆದಿಲ್ಲವೋ ಗೊತ್ತಿಲ್ಲ. ಈ ಬಗ್ಗೆ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮಂಡ್ಯದಲ್ಲಿ ಅರಣ್ಯ ಇಲಾಖೆ ನಿರ್ಲಕ್ಷ್ಯ ಬಹಳ ಇದೆ. ರಸ್ತೆಯಲ್ಲಿ ಒಣಗಿರುವ ಮರ ಕಡಿಯಲು ನಾನೇ ಮನವಿ ಮಾಡಿದ್ದೆ. ಆದರೆ, 6 ತಿಂಗಳಾದರೂ ಇನ್ನು ಕಡಿದಿಲ್ಲ. ಹೀಗಾಗಿ, ಮಂಡ್ಯದಲ್ಲಿ ಅರಣ್ಯ ಇಲಾಖೆಯಷ್ಟು ನಿರ್ಲಕ್ಷ್ಯ ಮತ್ತೊಂದಿಲ್ಲ ಎಂದು ದೂರಿದರು.
ಸದನದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ. ಅರಣ್ಯ ಮಂತ್ರಿ ಬಳಿ ಪ್ರಶ್ನೆ ಕೇಳುತ್ತೇನೆ. ಯಾರು ಸ್ಪಂದಿಸದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಶಾಸಕ ಶ್ರೀನಿವಾಸ್ ಎಚ್ಚರಿಕೆ ನೀಡಿದ್ದಾರೆ.