ಮಂಡ್ಯ: ಜಿಲ್ಲೆಯಲ್ಲಿ ಕೊರೊನಾ ಸಾವಿನ ಸಂಖ್ಯೆ ದಿನೆ ದಿನೇ ಏರಿಕೆಯಾಗ್ತಿದೆ. ಅದ್ರಲ್ಲೂ ಮಂಡ್ಯ ನಗರದ ಹೊಸಳ್ಳಿ ಏರಿಯಾದಲ್ಲಿ ಕೊರೊನಾಗೆ 30ಕ್ಕೂ ಹೆಚ್ಚು ನಿವಾಸಿಗಳು ಮೃತಪಟ್ಟಿದ್ದಾರೆ. ಹೀಗಾಗಿ ಇಲ್ಲಿನ ವೃತ್ತ ಇದೀಗ ಮೃತರಿಗೆ ಸಂತಾಪ ಸೂಚಿಸುವ ಸ್ಪಾಟ್ ಆಗಿ ಮಾರ್ಪಟ್ಟಿದೆ.
ಈ ಹೊಸಳ್ಳಿ ವೃತ್ತದಲ್ಲಿ ಮೃತರ ಸಂಬಂಧಿಕರು ಇಲ್ಲವೇ ಸ್ನೇಹಿತರು ತಮ್ಮ ಬಡಾವಣೆಯಲ್ಲಿ ಸತ್ತವರ ಫೋಟೋ ಹಾಕಿ ಸಂತಾಪ ಸೂಚಿಸ್ತಿರೋ ಫ್ಲೆಕ್ಸ್ಗಳೇ ಕಾಣುತ್ತಿವೆ. ಪ್ರತಿದಿನ ಇವುಗಳ ಸಂಖ್ಯೆ ಏರಿಕೆಯಾಗ್ತಾನೆ ಇದೆ.
ಈ ಬಡಾವಣೆಯಲ್ಲಿ ನಿಧನರಾದ ಒಬ್ಬೊಬ್ಬರ ಪ್ಲೆಕ್ಸ್ಗಳನ್ನು ಇಲ್ಲಿ ಹಾಕಿ ಸಂತಾಪ ಸೂಚಿಸಲಾಗ್ತಿದೆ. ಇದ್ರಿಂದಾಗಿ ಈ ಹೊಸಳ್ಳಿಯ ಈ ವೃತ್ತ ಸಾವಿನ ಬಡಾವಣೆಯ ಸಂತಾಪ ವೃತ್ತ ಎನ್ನುವಂತಾಗಿದೆ.