ETV Bharat / state

ಟ್ರ್ಯಾಕ್ಟರ್ ಪರೇಡ್​ಗೆ ಬಿಡದ ಪೊಲೀಸರೊಂದಿಗೆ ಮಂಡ್ಯ ರೈತರ ವಾಗ್ವಾದ

author img

By

Published : Jan 26, 2021, 12:12 PM IST

Updated : Jan 26, 2021, 1:31 PM IST

ರೈತರ ಟ್ರ್ಯಾಕ್ಟರ್ ಪರೇಡ್​ಗೆ ಬೆಂಗಳೂರಿಗೆ ತೆರಳಲು ಬಿಡದ ಪೊಲೀಸರ ಜೊತೆ ಅನ್ನದಾತರು ವಾಗ್ವಾದ ನಡೆಸಿದ್ದಾರೆ.

Mandya farmer
ಮಂಡ್ಯ ರೈತರ ಪ್ರತಿಭಟನೆ

ಮಂಡ್ಯ: ರೈತರ ಪರೇಡ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟ ಮಂಡ್ಯ ಜಿಲ್ಲೆಯ ರೈತರು ಮತ್ತು ಟ್ರ್ಯಾಕ್ಟರ್​ಗಳನ್ನು ಪೊಲೀಸರು ತಡೆಹಿಡಿದಿದ್ದಾರೆ. ಮದ್ದೂರಿನ ಶಿವಪುರದ ಬಳಿ ರೈತರು ಸೇರಿ ಟ್ರ್ಯಾಕ್ಟರ್​ಗಳನ್ನು ಮದ್ದೂರು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪೊಲೀಸರ ತಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ವಾಗ್ವಾದ ನಡೆಸಿದ್ದಾರೆ.

ಮಂಡ್ಯ ರೈತರ ಪ್ರತಿಭಟನೆ

ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ಈ ಭಾಗದ ರೈತರು ಬೆಂಗಳೂರಿನ‌ ಪರೇಡ್​ಗೆ ತೆರಳದಂತೆ ತಡೆದು ನಿಲ್ಲಿಸಿದ್ದು, ಪೊಲೀಸರ ಕ್ರಮ ಖಂಡಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಮಾತಿಗೆ ಮಣಿದು ಬರಿ ರೈತರನ್ನು ಮಾತ್ರ ಕಳಿಸಲು ಪೊಲೀಸರು ಅನುಮತಿ ನೀಡಿದ್ದು, ಟ್ರ್ಯಾಕ್ಟರ್​ಗಳನ್ನು ಮದ್ದೂರಿನ‌ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಿಲ್ಲಿಸಿ ಬೆಂಗಳೂರಿನ ಕಡೆ ರೈತರು ಹೊರಟಿದ್ದಾರೆ.

ಮಂಡ್ಯ: ರೈತರ ಪರೇಡ್ ಹಿನ್ನೆಲೆಯಲ್ಲಿ ಬೆಂಗಳೂರಿಗೆ ಹೊರಟ ಮಂಡ್ಯ ಜಿಲ್ಲೆಯ ರೈತರು ಮತ್ತು ಟ್ರ್ಯಾಕ್ಟರ್​ಗಳನ್ನು ಪೊಲೀಸರು ತಡೆಹಿಡಿದಿದ್ದಾರೆ. ಮದ್ದೂರಿನ ಶಿವಪುರದ ಬಳಿ ರೈತರು ಸೇರಿ ಟ್ರ್ಯಾಕ್ಟರ್​ಗಳನ್ನು ಮದ್ದೂರು ಪೊಲೀಸರು ತಡೆದು ನಿಲ್ಲಿಸಿದ್ದಾರೆ. ಪೊಲೀಸರ ತಡೆಗೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ವಾಗ್ವಾದ ನಡೆಸಿದ್ದಾರೆ.

ಮಂಡ್ಯ ರೈತರ ಪ್ರತಿಭಟನೆ

ಮಂಡ್ಯ, ಶ್ರೀರಂಗಪಟ್ಟಣ, ಮಳವಳ್ಳಿ ಸೇರಿದಂತೆ ಈ ಭಾಗದ ರೈತರು ಬೆಂಗಳೂರಿನ‌ ಪರೇಡ್​ಗೆ ತೆರಳದಂತೆ ತಡೆದು ನಿಲ್ಲಿಸಿದ್ದು, ಪೊಲೀಸರ ಕ್ರಮ ಖಂಡಿಸಿ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತರ ಮಾತಿಗೆ ಮಣಿದು ಬರಿ ರೈತರನ್ನು ಮಾತ್ರ ಕಳಿಸಲು ಪೊಲೀಸರು ಅನುಮತಿ ನೀಡಿದ್ದು, ಟ್ರ್ಯಾಕ್ಟರ್​ಗಳನ್ನು ಮದ್ದೂರಿನ‌ ವೆಂಕಟೇಶ್ವರ ಸಮುದಾಯ ಭವನದಲ್ಲಿ ನಿಲ್ಲಿಸಿ ಬೆಂಗಳೂರಿನ ಕಡೆ ರೈತರು ಹೊರಟಿದ್ದಾರೆ.

Last Updated : Jan 26, 2021, 1:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.