ETV Bharat / state

ಕ್ವಾರಂಟೈನ್​​ಗೆ ಈವರೆಗೂ ಖಾಸಗಿ ಹೋಟೆಲ್​​ಗಳನ್ನು ಬಾಡಿಗೆ ಪಡೆಯದ ಮಂಡ್ಯ ಜಿಲ್ಲಾಡಳಿತ

author img

By

Published : Aug 20, 2020, 7:46 PM IST

ಸರ್ಕಾರದ ಹಣ ಉಳಿತಾಯ ಮಾಡುವಲ್ಲಿ ಮಂಡ್ಯ ಜಿಲ್ಲಾಡಳಿತ ಪ್ರಮುಖ ಪಾತ್ರವಹಿಸಿದೆ. ಸೋಂಕಿತರನ್ನು ಹಾಗೂ ಶಂಕಿತರ ಕ್ವಾರಂಟೈನ್​​ಗೆ ಖಾಸಗಿ ಹೋಟೆಲ್​ಗಳನ್ನು ಈವರೆಗೂ ಬಾಡಿಗೆ ಪಡೆದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಜೇಗೌಡ ಹೇಳಿದರು.

District health office
ಜಿಲ್ಲಾ ಆರೋಗ್ಯ ಕಚೇರಿ

ಮಂಡ್ಯ: ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಸೋಂಕಿತರಿಗೆ ಹಾಸಿಗೆಗಳ ಕೊರತೆ ಇದೆ ಎಂದು ಆಗಾಗ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಮಂಡ್ಯ ಜಿಲ್ಲೆಯ ಪರಿಸ್ಥಿತಿಯೇ ಭಿನ್ನವಾಗಿದೆ.

ಎಲ್ಲಾ ಕಡೆ ಕೊರೊನಾ ಸೋಂಕಿನ ಜೊತೆ ಜೊತೆಗೆ ಕೆಲವೊಂದು ಪೂರ್ವಾಗ್ರಹಗಳೂ ಕೂಡಾ ಜನರನ್ನು ಆವರಿಸಿಬಿಟ್ಟಿವೆ. ಕೊರೊನಾ ಸೋಂಕು ತಗುಲಿದರೆ ಆಸ್ಪತ್ರೆ ಸಿಗಲ್ಲ. ಹಾಸಿಗೆ ಸಿಗಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಮೃತಪಟ್ಟವರ ಕತೆಗಳು ಹೇರಳವಾಗಿ ಸಿಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕು ಬಂದರೆ ಸಾವೇ ಬಂತು ಎಂಬ ಭಯದಲ್ಲಿ ಜನರಿದ್ದಾರೆ.

ಜಿಲ್ಲೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳಿಲ್ಲ ಎಂದು ಆಸ್ಪತ್ರೆಗಳು ಪರದಾಡಿದರೆ, ಮಂಡ್ಯದಲ್ಲಿ ಆ ಸಮಸ್ಯೇನೇ ಎದುರಾಗಿಲ್ಲ. ಸೋಂಕಿತರನ್ನು ಹಾಗೂ ಶಂಕಿತರನ್ನು ಕ್ವಾರಂಟೈನ್ ಮಾಡಲು ಖಾಸಗಿ ಹೋಟೆಲ್​ಗಳನ್ನು ಬಾಡಿಗೆಯೇ ಪಡೆದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಜೇಗೌಡ ಹೇಳಿದರು.

ಖಾಸಗಿ ಹೋಟೆಲ್​​ಗಳನ್ನು ಬಾಡಿಗೆ ಪಡೆಯದ ಮಂಡ್ಯ ಜಿಲ್ಲಾಡಳಿತ

ಮೀಮ್ಸ್ ಆಸ್ಪತ್ರೆ ಸೇರಿ ಸರ್ಕಾರಕ್ಕೆ ಸೇರಿದ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯಗಳು, ಕುಟುಂಬ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳು ಮುಂತಾದವುಗಳಲ್ಲಿ ಚಿಕಿತ್ಸೆ ನೀಡಿ, ಕ್ವಾರಂಟೈನ್​ಗೆ ಬಳಸಿಕೊಂಡಿರುವ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಸರ್ಕಾರದ ಹಣ ಉಳಿತಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಮಂಡ್ಯ: ಕೊರೊನಾ ಸೋಂಕಿಗೆ ಚಿಕಿತ್ಸೆ ನೀಡಲು ರಾಜ್ಯ ಸರ್ಕಾರ ಹರಸಾಹಸಪಡುತ್ತಿದೆ. ಸೋಂಕಿತರಿಗೆ ಹಾಸಿಗೆಗಳ ಕೊರತೆ ಇದೆ ಎಂದು ಆಗಾಗ ಆರೋಪಗಳು ಕೇಳಿ ಬರುತ್ತಿವೆ. ಆದರೆ, ಮಂಡ್ಯ ಜಿಲ್ಲೆಯ ಪರಿಸ್ಥಿತಿಯೇ ಭಿನ್ನವಾಗಿದೆ.

ಎಲ್ಲಾ ಕಡೆ ಕೊರೊನಾ ಸೋಂಕಿನ ಜೊತೆ ಜೊತೆಗೆ ಕೆಲವೊಂದು ಪೂರ್ವಾಗ್ರಹಗಳೂ ಕೂಡಾ ಜನರನ್ನು ಆವರಿಸಿಬಿಟ್ಟಿವೆ. ಕೊರೊನಾ ಸೋಂಕು ತಗುಲಿದರೆ ಆಸ್ಪತ್ರೆ ಸಿಗಲ್ಲ. ಹಾಸಿಗೆ ಸಿಗಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಮೃತಪಟ್ಟವರ ಕತೆಗಳು ಹೇರಳವಾಗಿ ಸಿಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕು ಬಂದರೆ ಸಾವೇ ಬಂತು ಎಂಬ ಭಯದಲ್ಲಿ ಜನರಿದ್ದಾರೆ.

ಜಿಲ್ಲೆಗಳಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಹಾಸಿಗೆಗಳಿಲ್ಲ ಎಂದು ಆಸ್ಪತ್ರೆಗಳು ಪರದಾಡಿದರೆ, ಮಂಡ್ಯದಲ್ಲಿ ಆ ಸಮಸ್ಯೇನೇ ಎದುರಾಗಿಲ್ಲ. ಸೋಂಕಿತರನ್ನು ಹಾಗೂ ಶಂಕಿತರನ್ನು ಕ್ವಾರಂಟೈನ್ ಮಾಡಲು ಖಾಸಗಿ ಹೋಟೆಲ್​ಗಳನ್ನು ಬಾಡಿಗೆಯೇ ಪಡೆದಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಂಜೇಗೌಡ ಹೇಳಿದರು.

ಖಾಸಗಿ ಹೋಟೆಲ್​​ಗಳನ್ನು ಬಾಡಿಗೆ ಪಡೆಯದ ಮಂಡ್ಯ ಜಿಲ್ಲಾಡಳಿತ

ಮೀಮ್ಸ್ ಆಸ್ಪತ್ರೆ ಸೇರಿ ಸರ್ಕಾರಕ್ಕೆ ಸೇರಿದ ಒಕ್ಕಲಿಗರ ಸಂಘದ ವಿದ್ಯಾರ್ಥಿನಿಲಯಗಳು, ಕುಟುಂಬ ಕಲ್ಯಾಣ ಇಲಾಖೆಯ ಹಾಸ್ಟೆಲ್​ಗಳು ಮುಂತಾದವುಗಳಲ್ಲಿ ಚಿಕಿತ್ಸೆ ನೀಡಿ, ಕ್ವಾರಂಟೈನ್​ಗೆ ಬಳಸಿಕೊಂಡಿರುವ ಜಿಲ್ಲಾಡಳಿತ ಕೊರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದು, ಸರ್ಕಾರದ ಹಣ ಉಳಿತಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.