ETV Bharat / state

'ಕಾಂತಾರ' ಸಿನಿಮಾ ನೋಡಿ ಹೊರಬರುತ್ತಿದ್ದ ಪ್ರೇಕ್ಷಕ ಹೃದಯಾಘಾತದಿಂದ ಸಾವು

author img

By

Published : Oct 24, 2022, 6:21 PM IST

ಮಂಡ್ಯ ಜಿಲ್ಲೆಯ ನಾಗಮಂಗಲದ ವೆಂಕಟೇಶ್ವರ ಚಿತ್ರಮಂದಿರದಲ್ಲಿ ಈ ದುರ್ಘಟನೆ ನಡೆಯಿತು.

ರಾಜಶೇಖರ್
ರಾಜಶೇಖರ್

ಮಂಡ್ಯ: 'ಕಾಂತಾರ' ಸಿನಿಮಾ ನೋಡಿಕೊಂಡು ಚಿತ್ರಮಂದಿರದಿಂದ ಹೊರ ಬರುತ್ತಿದ್ದಾಗ ಪ್ರೇಕ್ಷಕರೊಬ್ಬರಿಗೆ ಹೃದಯಾಘಾತವಾಗಿದ್ದು, ಸಾವಿಗೀಡಾಗಿದ್ದಾರೆ.

ನಾಗಮಂಗಲ ತಾಲೂಕಿನ ಸಾರೆಮೇಗಲಕೊಪ್ಪಲು ನಿವಾಸಿ ರಾಜಶೇಖರ್ (45) ಮೃತಪಟ್ಟ ವ್ಯಕ್ತಿ. ವೆಂಕಟೇಶ್ವರ ಚಿತ್ರಮಂದಿರದಲ್ಲಿ ದುರ್ಘಟನೆ ನಡೆಯಿತು.

ಸಿನಿಮಾ ವೀಕ್ಷಿಸಿ ಹೊರಗೆ ಬರುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಸಿದು ಬಿದ್ದು ಚಿತ್ರಮಂದಿರದ ಒಳ ಆವರಣದಲ್ಲೇ ಸಾವಿಗೀಡಾದರೆಂದು ತಿಳಿದುಬಂದಿದೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು

ಮಂಡ್ಯ: 'ಕಾಂತಾರ' ಸಿನಿಮಾ ನೋಡಿಕೊಂಡು ಚಿತ್ರಮಂದಿರದಿಂದ ಹೊರ ಬರುತ್ತಿದ್ದಾಗ ಪ್ರೇಕ್ಷಕರೊಬ್ಬರಿಗೆ ಹೃದಯಾಘಾತವಾಗಿದ್ದು, ಸಾವಿಗೀಡಾಗಿದ್ದಾರೆ.

ನಾಗಮಂಗಲ ತಾಲೂಕಿನ ಸಾರೆಮೇಗಲಕೊಪ್ಪಲು ನಿವಾಸಿ ರಾಜಶೇಖರ್ (45) ಮೃತಪಟ್ಟ ವ್ಯಕ್ತಿ. ವೆಂಕಟೇಶ್ವರ ಚಿತ್ರಮಂದಿರದಲ್ಲಿ ದುರ್ಘಟನೆ ನಡೆಯಿತು.

ಸಿನಿಮಾ ವೀಕ್ಷಿಸಿ ಹೊರಗೆ ಬರುತ್ತಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ತಕ್ಷಣ ಕುಸಿದು ಬಿದ್ದು ಚಿತ್ರಮಂದಿರದ ಒಳ ಆವರಣದಲ್ಲೇ ಸಾವಿಗೀಡಾದರೆಂದು ತಿಳಿದುಬಂದಿದೆ. ನಾಗಮಂಗಲ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಇದನ್ನೂ ಓದಿ: ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದು ಬೈಕ್ ಸವಾರ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.